Site icon Vistara News

ICC World Cup 2023 : ತಾಕತ್ತಿದ್ದರೆ ಔಟ್​ ಮಾಡಿ; ಭಾರತದ ಸ್ಪಿನ್ ದಾಳಿಗೆ ಸವಾಲೆಸೆದ ಆಸ್ಟ್ರೇಲಿಯಾ ನಾಯಕ!

Australia Cricket team

ಚೆನ್ನೈ: ಆಸ್ಟ್ರೇಲಿಯಾ ತಂಡಕ್ಕೆ ಚೆನ್ನೈನಲ್ಲಿ ಭಾರತದ ಸ್ಪಿನ್ ಬೌಲರ್​ಗಳು ಬೆದರಿಕೆ ಒಡ್ಡಲಿದ್ದಾರೆ ಎಂಬುದು ಕ್ರಿಕೆಟ್​ ಪಂಡಿತರ ಅಭಿಪ್ರಾಯ. ಆದರೆ, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಇದಕ್ಕೆ ಹೆದರುವುದಿಲ್ಲ ಎಂದು ಹೇಳಿದ್ದಾರೆ. ವಿಶ್ವಕಪ್​ನ (ICC World Cup 2023) ಆರಂಭಿಕ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್​ಗಳನ್ನು ಎದುರಿಸಲು ತಮ್ಮ ತಂಡವು ವಿಭಿನ್ನ “ಯೋಜನೆಯನ್ನು” ಹೊಂದಿದೆ ಎಂದು ಕಮಿನ್ಸ್ ಗುರುವಾರ ಪ್ರತಿಪಾದಿಸಿದ್ದಾರೆ. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತು ಎಡಗೈ ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಚೆನ್ನೈನ ರಣಬಿಸಿಲಿನ ನಡುವೆ ಆಸೀಸ್​ ಆಟಗಾರರು ಎದುರಿಸಬೇಕಾಗಿದೆ.

ರಾಜ್​ಕೋಟ್​ನಲ್ಲಿ ಕಳೆದ ಭಾನುವಾರ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದ ಗೆಲುವು ಆಸೀಸ್​ ಬಳಗದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ಮೂರು ಪಂದ್ಯಗಳ ಸರಣಿಯನ್ನು ಭಾರತ 2-1ರಿಂದ ಗೆದ್ದರೆ, ರಾಜ್ಕೋಟ್​ನಲ್ಇ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 352 ರನ್​ಗಳ ಬೃಹತ್ ಮೊತ್ತ ಪೇರಿಸುವ ಮೂಲಕ 66 ರನ್​ಗಳ ವಿಜಯ ಸಾಧಿಸಿತ್ತು.

ಪಂದ್ಯಕ್ಕೆ ಮುಂಚಿತವಾಗಿ ಮುಂದಿನ ಕೆಲವು ದಿನಗಳ ತರಬೇತಿ ಮಾಡಿದ್ದೇವೆ. ಆಸ್ಟ್ರೇಲಿಯಾದ ಆಟಗಾರರು ಈಗ ಸಾಕಷ್ಟು ಸ್ಪಿನ್ ಆಡುತ್ತಾರೆ. ನಮ್ಮ ಬ್ಯಾಟರ್​ಗಳು ಭಾರತದಲ್ಲಿ ಸಾಕಷ್ಟು ಆಡಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದ್ದರಿಂದ ಅವರಿಗೆ ಹೆಚ್ಚಿನ (ಭಾರತೀಯ) ಬೌಲರ್​ಗಳು ತಿಳಿದಿದ್ದಾರೆ ಮತ್ತು ಅವರು ಅದಕ್ಕೆ ಪೂರಕ ಯೋಜನೆಯನ್ನು ಹೊಂದಿದ್ದಾರೆ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

ನಾವು ನಿಜವಾಗಿಯೂ ಉತ್ತಮ ವಿಶ್ವಾಸ ಹೊಂದಿದ್ದೇವೆ. ರಾಜ್​ಕೋಟ್​ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ನಾವು ಉತ್ತಮ ಗೆಲುವು ಸಾಧಿಸಿದ್ದೇವೆ. ಭಾರತದಲ್ಲಿ ಏಕದಿನ ಪಂದ್ಯಗಳಲ್ಲಿ ನಾವು ಉತ್ತಮ ದಾಖಲೆಗಳನ್ನು ಹೊಂದಿದ್ದೇವೆ ಎಂದು ನಾಯಕ ಕಮಿನ್ಸ್​ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದರು. ಆಕ್ರಮಣಕಾರಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ತಂಡವನ್ನು ಗೆಲ್ಲಿಸಲಿದ್ದಾರೆ ಎಂಬುದಾಗಿ ಹೇಳಿದರು.

ಫಾರ್ಮ್ ಕಂಡುಕೊಂಡ ವಾರ್ನರ್​

36 ವರ್ಷದ ವಾರ್ನರ್ ಕಳೆದ ಎರಡು ವರ್ಷಗಳಿಂದ ಫಾರ್ಮ್​ಗಾಗಿ ಹೆಣಗಾಡುತ್ತಿದ್ದರೂ, ಅವರು ಈ ವರ್ಷ ಒಂಬತ್ತು ಇನ್ನಿಂಗ್ಸ್​​ಗಳಲ್ಲಿ 43.33 ಸರಾಸರಿಯಲ್ಲಿ 390 ರನ್ ಗಳಿಸಿದ್ದಾರೆ. ನಾಲ್ಕು ಅರ್ಧಶತಕಗಳು ಮತ್ತು ಒಂದು ಶತಕ ಸೇರಿದಂತೆ 119.26 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಭಾರತದಲ್ಲಿ ಇತ್ತೀಚೆಗೆ ನಡೆದ ಏಕದಿನ ಸರಣಿಯಲ್ಲಿ, ವಾರ್ನರ್ ಸತತ ಮೂರು ಅರ್ಧಶತಕಗಳನ್ನು ಗಳಿಸುವ ಮೂಲಕ ಅದ್ಭುತ ಫಾರ್ಮ್​ ಕಂಡುಕೊಂಡಿದ್ದಾರೆ.

ಇದನ್ನೂ ಓದಿ : Asia Games : ಪುಟಾಣಿ ಮಕ್ಕಳೊಂದಿಗೆ ​ ಕ್ರಿಕೆಟ್ ಆಡಿದ ಭಾರತ ಕ್ರಿಕೆಟ್ ತಂಡ

ಒಂಬತ್ತು ಸುತ್ತಿನ ಪಂದ್ಯಗಳಿವೆ. ಆದ್ದರಿಂದ ನಾವು ಪ್ರತಿಬಾರಿಯೂ ಸ್ಪರ್ಧಾತ್ಮ ಕ ಕ್ರಿಕೆಟ್ ಆಡಬೇಕಾಗಿದೆ. “ನಮ್ಮ ತರಬೇತಿ ಅವಧಿಗಳು ದೀರ್ಘವಾಗಿದೆ. ನಮಗೆ ವಿಶ್ರಾಂತಿ ಸಿಗುತ್ತದೆ. ಅದು ಚೇತರಿಸಿಕೊಳ್ಳಲು ಮತ್ತು ಮುಂಬರುವ ಪಂದ್ಯಗಳಿಗೆ ಉತ್ತಮವಾಗಿ ತಯಾರಿ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಕಮಿನ್ಸ್​ ವಿಶ್ವಾಸ ವ್ಯಕ್ತಪಡಿಸಿದರು.

ಕಮಿನ್ಸ್ ಅವರ ನೆಚ್ಚಿನ ಟೂರ್ನಿ ಬಗ್ಗೆ ಕೇಳಿದಾಗ, ಟೆಸ್ಟ್ ಚಾಂಪಿಯನ್ಶಿಪ್ ಎಂದು ನಾನು ಹೇಳಬಲ್ಲೆ. ಏಕೆಂದರೆ ನಾವು ಅದನ್ನು ಗೆದ್ದಿದ್ದೇವೆ ಎಂದರು . ಆದರೆ, ಏಕ ದಿನ ವಿಶ್ವ ಕಪ್​ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು ಅತ್ಯಂತ ದೀರ್ಘವಾದ ಮತ್ತು ಸುಮಾರು 50 ವರ್ಷಗಳ ಇತಿಹಾಸವನ್ನು ಹೊಂದಿದೆ. ಏಕದಿನ ವಿಶ್ವಕಪ್ ಬಂದಾಗಲೆಲ್ಲಾ, ಅದು ಸ್ವಲ್ಪ ಹೆಚ್ಚು ವಿಶೇಷವೆಂದು ಭಾವಿಸುತ್ತೇನೆ. ಆತಿಥೇಯ ಭಾರತವು ಪ್ರಬಲವಾಗಿ ಎಂದು ಅವರು ಹೇಳಿದರು.

Exit mobile version