Site icon Vistara News

Rishabh Pant | ಫೋನ್​ ಮೂಲಕ ರಿಷಭ್​ ಪಂತ್​ ಕುಟುಂಬಕ್ಕೆ ಧೈರ್ಯ ಹೇಳಿದ ಪ್ರಧಾನಿ ಮೋದಿ

rishabh pant

ನವ ದೆಹಲಿ : ಭೀಕರ ಕಾರು ಅಪಘಾತದಲ್ಲಿ ಪವಾಡ ಸದೃಶವಾಗಿ ಪಾರಾಗಿ ಆಸ್ಪತ್ರೆ ಸೇರಿರುವ ಯುವ ಕ್ರಿಕೆಟರ್ ರಿಷಭ್​ ಪಂತ್ (Rishabh Pant)​ ಕುಟುಂಬದ ಜತೆ ಫೋನ್​ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಧೈರ್ಯ ಹೇಳಿದ್ದಾರೆ. ಬಿಸಿಸಿಐ ಈ ಮಾಹಿತಿಯನ್ನು ಟ್ವೀಟ್​ ಮೂಲಕ ಪ್ರಕಟಿಸಿದೆ.

ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ರಿಷಭ್ ಪಂತ್​ ಕುಟುಂಬದ ಜತೆ ಫೋನ್ ಮೂಲಕ ಮಾತನಾಡಿದ್ದು, ಆರೋಗ್ಯವನ್ನು ವಿಚಾರಿಸಿದ್ದಾರೆ. ಅವರು ಸಾಂತ್ವಾನದ ಮಾತುಗಳಿಗೆ ನಾವು ಚಿರಋಣಿ ಎಂಬುದಾಗಿ ಬಿಸಿಸಿಐ ಟ್ವೀಟ್​ ಮಾಡಿದೆ.

ಅದಕ್ಕಿಂತ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​ ಮಾಡಿ ಅವಘಡದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದರು. ಅಲ್ಲದೆ, ಪಂತ್​ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದರು.

ಪ್ರಧಾನಿ ಮೋದಿ ಅವರ ತಾಯಿ ಹೀರಾ ಬೆನ್​ ಮೋದಿ ಅವರು ಶುಕ್ರವಾರ ಬೆಳಗ್ಗೆ ನಿಧನ ಹೊಂದಿದ್ದರು. ಅವರ ಅಂತ್ಯ ಸಂಸ್ಕಾರ ಮುಗಿಸಿದ ಬಳಿಕ ಕಚೇರಿ ಕೆಲಸಗಳನ್ನು ಮುಂದುವರಿಸಿದ ಮೋದಿ ಅವರು ಸಂಜೆಯ ವೇಳೆಗೆ ರಿಷಭ್ ಪಂತ್ ಕುಟುಂಬ ಸದಸ್ಯರಿಗೆ ಫೋನ್​ ಮಾಡಿದ್ದಾರೆ.

ಇದನ್ನೂ ಓದಿ | Rishabh Pant | ರಿಷಭ್​ ಪಂತ್​ ಚೇತರಿಕೆಗೆ ಹಾರೈಸಿದ ಪಾಕಿಸ್ತಾನ ಕ್ರಿಕೆಟಿಗರು

Exit mobile version