Site icon Vistara News

WTC Final 2023 : ದ್ರಾವಿಡ್​ ಸಾಮರ್ಥ್ಯದ ಬಗ್ಗೆ ಕಳಪೆ ಕಾಮೆಂಟ್​ ಮಾಡಿದ ಪಾಕಿಸ್ತಾನದ ಮಾಜಿ ಆಟಗಾರ!

Rahul Dravid

#image_title

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್ ಪಂದ್ಯದಲ್ಲಿ (WTC Final 2023) ಫೈನಲ್ ಪಂದ್ಯದಲ್ಲಿ ಭಾರತ ತಂಡ ಹಿನ್ನಡೆಯಲ್ಲಿದೆ. ಬ್ಯಾಟಿಂಗ್​ನಲ್ಲಿ ಟೀಮ್​ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಟೀಮ್ ಇಂಡಿಯಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಮೊದಲ ಇನಿಂಗ್ಸ್​ನ ಬೌಲಿಂಗ್​ ಕಳಪೆಯಾಗಿತ್ತು. ಬ್ಯಾಟಿಂಗ್​​ನಲ್ಲೂ ಅಗ್ರಮ ಕ್ರಮಾಂಕ ಮತ್ತೊಮ್ಮೆ ವಿಫಲವಾಯಿತು ಎಂದು ಹೇಳಿದ್ದಾರೆ.

ಮೊದಲ ಇನಿಂಗ್ಸ್​​ನಲ್ಲಿ ಭಾರತ ತಂಡದ ಪರವಾಗಿ ಅಜಿಂಕ್ಯ ರಹಾನೆ ಮತ್ತು ರವೀಂದ್ರ ಜಡೇಜಾ ಅವರನ್ನು ಹೊರತುಪಡಿಸಿ, ಇತರ ಎಲ್ಲಾ ಭಾರತೀಯ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಈ ವಿಚಾರದ ಬಗ್ಗೆ ಮಾತನಾಡಿದ ಬಾಸಿತ್ ಅಲಿ, ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡುವ ತೀರ್ಮಾನ ಕೈಗೊಂಡ ರೋಹಿತ್ ಶರ್ಮಾ ಅವರ ನಿರ್ಧಾರವನ್ನು ಟೀಕಿಸಿದರು. ಫೈನಲ್​ ಪಂದ್ಯದಲ್ಲಿ ಮತ್ತೊಮ್ಮೆ ಭಾರತ ಸೋಲಲಿದೆ, ಗೆಲ್ಲಬೇಕಾದರೆ ಪವಾಡ ನಡೆಯಬೇಕು ಎಂದು ಹೇಳಿದ್ದಾರೆ.

ಭಾರತ ತಂಡ ಬೌಲಿಂಗ್ ಆಯ್ಕೆ ಮಾಡಿದ ಕ್ಷಣವೇ ಪಂದ್ಯವನ್ನು ಕಳೆದುಕೊಂಡಿತು. ಭಾರತ ತಂಡ ಬೌಲಿಂಗ್​ ಐಪಿಎಲ್​​ನಂತೆಯೇ ಇತ್ತು. ಊಟದ ಹೊತ್ತಿಗೆ, ಭಾರತೀಯ ಬೌಲರ್​​ಗಳು ಯಶಸ್ಸು ಸಾಧಿಸಿತು. ಬ್ಯಾಟಿಂಗ್ ವೇಳೆಯೂ ಭಾರತ ತಂಡದ ಆಟಗಾರರು ಫೀಟ್ ಆಗಿದ್ದ ಲಕ್ಷಣಗಳು ತೋರಲಿಲ್ಲ. ರಹಾನೆ, ವಿರಾಟ್​. ಜಡೇಜಾ ಬಿಟ್ಟರೆ ಉಳಿದವರೆಲ್ಲರೂ ದಣಿದಿದ್ದರು. ಅಲ್ಲರೂ ಐಪಿಎಲ್ ಎಫೆಕ್ಟ್​ ಎಂದು ಮಾಜಿ ಬ್ಯಾಟರ್​​ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿದ್ದಾರೆ.

ದ್ರಾವಿಡ್ ಬಗ್ಗೆ ಟೀಕೆ

ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನೂ ಬಿಡದೆ ಪಾಕ್​ನ ಮಾಜಿ ಆಟಗಾರ ಟೀಕೆ ವ್ಯಕ್ತಪಡಿಸಿದರು. ಅದರಲ್ಲೂ ದ್ರಾವಿಡ್​ ಬಗ್ಗೆ ಕನಿಕರವೂ ತೋರದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ದ್ರಾವಿಡ್​ ಅವರು ತರಬೇತುದಾರರಾಗಿ ಅತ್ಯಂತ ಕಳಪೆ ಎಂಬುದಾಗಿ ಅವರು ಹೇಳಿದರು. ಇತ್ತೀಚೆಗೆ ತವರಿನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಯಾವ ರೀತಿಯ ಪಿಚ್​ ನಿರ್ಮಿಸಿತ್ತು ಎಂಬುದು ಕೂಡ ಇಲ್ಲಿ ಉಲ್ಲೇಖನೀಯ ಎಂಬುದಾಗಿ ಅವರು ಹೇಳಿದರು.

ಇದನ್ನೂ ಓದಿ : WTC Final 2023: ದ್ರಾವಿಡ್​ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ, ಪೂಜಾರ; ಏನದು?

ನಾನು ರಾಹುಲ್ ದ್ರಾವಿಡ್ ಅವರ ದೊಡ್ಡ ಅಭಿಮಾನಿ, ನಾನು ಯಾವಾಗಲೂ ಈ ವಿಚಾರದಲ್ಲಿ ಬದ್ಧನಾಗಿದ್ದೇನೆ. ಅವರು ಕ್ಲಾಸ್ ಆಟಗಾರ ಹಾಗೂ ದಿಗ್ಗಜ ಬ್ಯಾಟರ್​​ . ಆದರೆ ತರಬೇತುದಾರನಾಗಿ ಅವರಿಗೆ ನಾನು ಸಂಪೂರ್ಣವಾಗಿ ಶೂನ್ಯ ರೇಟಿಂಗ್​ ನೀಡುವೆ. ನೀವು ಭಾರತದಲ್ಲಿ ತಿರುಗುವ ಪಿಚ್​​ಗಳನ್ನು ಸಿದ್ಧಪಡಿಸಿದ್ದೀರಿ. ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ, ಇದೇ ರೀತಿಯ ವಿಕೆಟ್​ಗಳು ಇದ್ದವೆ.? ಅವರು ಬೌನ್ಸಿ ಪಿಚ್​ಗಳನ್ನು ಹೊಂದಿದ್ದರು. ದ್ರಾವಿಡ್​ ಅವರು ತಮ್ಮ ಮೆದುಳನ್ನು ಬಳಸದೇ ತಂಡವನ್ನು ಕಟ್ಟುತ್ತಿದ್ದಾರೆ . ಅದರು ಪರಿಣಾಮಕಾರಿಯಾಗಿ ಕೆಲಸ ಮಾಡದು ಎಂಬುದಾಗಿ ಅವರು ಹೇಳಿದ್ದಾರೆ.

Exit mobile version