Site icon Vistara News

Anvay Dravid | ರಾಹುಲ್ ದ್ರಾವಿಡ್​​ ಪುತ್ರ ಅನ್ವಯ್​ ದ್ರಾವಿಡ್ ಕರ್ನಾಟಕ ತಂಡಕ್ಕೆ ನಾಯಕ!

anvay dravid

ಬೆಂಗಳೂರು: ಟೀಮ್ ಇಂಡಿಯಾದ ಮುಖ್ಯ ಕೋಚ್​ ಹಾಗೂ ಮಾಜಿ ಆಟಗಾರ ರಾಹುಲ್​ ದ್ರಾವಿಡ್​ ಅವರ ಮಗ ಅನ್ವಯ್​ ದ್ರಾವಿಡ್(Anvay Dravid)​ ಕರ್ನಾಟಕ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ತಂದೆಯಂತೆ ಮಿಂಚಲು ಸಿದ್ಧರಾಗಿದ್ದಾರೆ.

14 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್​ ಟೂರ್ನಿಯಲ್ಲಿ ಅನ್ವಯ್​ ದ್ರಾವಿಡ್​ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಅನ್ವಯ್ ತಮ್ಮ ನಾಯಕತ್ವದಲ್ಲಿ ತಂಡವನ್ನು ಹೇಗೆ ಪ್ರದರ್ಶನ ನೀಡಲಿದೆ ಎಂಬುವುದನ್ನು ಕಾದುನೋಡಬೇಕಿದೆ. ಈಗಾಗಲೇ ಅನ್ವಯ್​ ದ್ರಾವಿಡ್ ಹಲವು ಕಿರಿಯರ ಕ್ರಿಕೆಟ್​ ಟೂರ್ನಿಗಳಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಗಮನಸೆಳೆದಿದ್ದರು. ಇದೀಗ ನಾಯಕತ್ವದ ಜವಾಬ್ದಾರಿಯೂ ಸಿಕ್ಕಿದೆ.

ಒಂದೊಮ್ಮೆ ಅನ್ವಯ್ ದ್ರಾವಿಡ್ ಸಾರಥ್ಯದಲ್ಲಿ ಕರ್ನಾಟಕ ತಂಡ ಉತ್ತಮ ಪ್ರದರ್ಶನ ತೋರಿ ಚಾಂಪಿಯನ್​ ಆದರೆ ಭವಿಷ್ಯದಲ್ಲಿ ಅನ್ವಯ್ ಅವರು ಹಂತ ಹಂತವಾಗಿ ಕ್ರಿಕೆಟ್​ನಲ್ಲಿ ಬೆಳೆದು ಮುಂದೊಂದು ದಿನ ಟೀಮ್​ ಇಂಡಿಯಾದಲ್ಲಿ ಕಾಣಿಸಿಕೊಂಡರು ಅಚ್ಚರಿಯಿಲ್ಲ.

ಇದನ್ನೂ ಓದಿ | Rahul Dravid | ರಾಹುಲ್​ ದ್ರಾವಿಡ್​ಗೆ ಆರೋಗ್ಯ ಸಮಸ್ಯೆ, ಕೋಲ್ಕೊತಾದಿಂದ ಬೆಂಗಳೂರಿಗೆ ವಾಪಸ್​​

Exit mobile version