Site icon Vistara News

Ranji Trophy: ರಣಜಿ ಸೆಮಿಫೈನಲ್​; ಕರ್ನಾಟಕ ತಂಡ ಪ್ರಕಟ

Ranji Trophy

#image_title

ಬೆಂಗಳೂರು: ರಣಜಿ ಟ್ರೋಫಿ(Ranji Trophy) ಕ್ರಿಕೆಟ್‌ ಟೂರ್ನಿಯ ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್​ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟವಾಗಿದೆ. ಉಭಯ ತಂಡಗಳ ಸೆಮಿ ಕಾದಾಟ ಫೆ. 8ರಿಂದ ಆರಂಭವಾಗಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ವಿಕೆಟ್​ ಕೀಪರ್​ ಬಿಆರ್​. ಶರತ್​ ಬದಲಿಗೆ ನಿಹಾಲ್​ ಉಲ್ಲಾಳ್​ಗೆ ಸ್ಥಾನ ಕಲ್ಪಿಸಲಾಗಿದೆ. ಉಳಿದಂತೆ ಭಾರಿ ಬದಲಾವಣೆಗಳೇನು ಸಂಭವಿಸಿಲ್ಲ.

ಮಾಯಾಂಕ್‌ ಅಗರ್ವಾಲ್‌(mayank agarwal) ತಂಡದ ನಾಯಕರಾಗಿ ಮುಂದುವರಿದಿದ್ದಾರೆ. ಆರ್‌.ಸಮರ್ಥ್ ಉಪನಾಯಕರಾಗಿದ್ದಾರೆ. ದೇವದತ್ತ ಪಡಿಕ್ಕಲ್‌, ಮನೀಷ್‌ ಪಾಂಡೆ ಈ ಹಿಂದಿನಂತೆ ತಂಡದಲ್ಲಿ ಮುಂದುವರಿದಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶ್ರೇಯಸ್‌ ಗೋಪಾಲ್‌, ಎಂ.ವೆಂಕಟೇಶ್‌ ತಂಡದ ಮುಖ್ಯ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ Ranji Trophy: ರಣಜಿ; ಸೆಮಿಫೈನಲ್​ನಲ್ಲಿ ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಸವಾಲು

ಮಯಾಂಕ್​ ಪಡೆಗೆ ತವರಿನ ಲಾಭ

ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ಸೆಮಿಫೈನಲ್​ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಗುಂಪು ಹಂತದಲ್ಲಿ ರಾಜ್ಯ ತಂಡ ಇದೇ ಕ್ರೀಡಾಂಗಣದಲ್ಲಿ 3 ಪಂದ್ಯಗಳನ್ನಾಡಿ ಮೇಲುಗೈ ಸಾದಿಸಿತ್ತು. ಆದ್ದರಿಂದ ಇದೀಗ ಸೆಮಿಫೈನಲ್​ನಲ್ಲಿಯೂ ತವರಿನ ಲಾಭ ಮಯಾಂಕ್​ ಪಡೆಗೆ ಲಭಿಸುವ ನಿರೀಕ್ಷೆಯಿದೆ. ಮಧ್ಯಪ್ರದೇಶ ಹಾಗೂ ಬಂಗಾಳ ನಡುವಿನ ಮತ್ತೊಂದು ಸೆಮಿಫೈನಲ್​ ಪಂದ್ಯ ಇಂದೋರ್‌ನ ಹೋಲ್ಕರ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

Exit mobile version