Site icon Vistara News

Ranji Trophy: ಅಗರ್ವಾಲ್​ ದ್ವಿಶತಕ; ಬೃಹತ್​ ಮೊತ್ತ ಪೇರಿಸಿದ ಕರ್ನಾಟಕ

mayank agarwal

#image_title

ಬೆಂಗಳೂರು: ಇಲ್ಲಿ ನಡೆಯತ್ತಿರುವ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ(Ranji Trophy) ಸೆಮಿಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡ ಮಯಾಂಕ್​ ಅಗರ್ವಾಲ್(mayank agarwal)​ ಅವರ ದ್ವಿಶತಕದ ನೆರವಿನಿಂದ ಬೃಹತ್​ ಮೊತ್ತ ಪೇರಿಸಿದೆ.

ನಂಬುಗೆಯ ಬ್ಯಾಟರ್‌ಗಳೆಲ್ಲ ಸಾಲು ಸಾಲಾಗಿ ಕೈಕೊಟ್ಟಾಗ ಕಪ್ತಾನನ ಆಟದ ಮೂಲಕ ಮೊದಲ ದಿನ ಶತಕ ಬಾರಿಸಿ ತಂಡವನ್ನು ಕಾಪಾಡಲು ಟೊಂಕ ಕಟ್ಟಿದ್ದ ಅಗರ್ವಾಲ್​ ದ್ವಿತೀಯ ದಿನದಾಟದಲ್ಲಿ ತಮ್ಮ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರ ಬ್ಯಾಟಿಂಗ್​ ಸಾಹಸದಿಂದ ಕರ್ನಾಟಕ ತಂಡ ಮೊದಲ ಇನಿಂಗ್ಸ್​ನಲ್ಲಿ 407 ರನ್​ ಗಳಿಸಿ ಸವಾಲೊಟ್ಡಿದೆ. ಮೊದಲ ದಿನ ಕರ್ನಾಟಕ 5 ವಿಕೆಟಿಗೆ 229 ರನ್‌ ಗಳಿಸಿ ಸಂಕಷ್ಟದಲ್ಲಿ ಸಿಲುಕಿತ್ತು.

ಮೊದಲ ದಿನದಾಟದಲ್ಲಿ 58 ರನ್​ ಗಳಿಸಿದ್ದ ಶರತ್ ಎರಡನೇ ದಿನದಾಟದಲ್ಲಿ ತನ್ನ ಖಾತೆಗೆ ಕೇವಲ 8 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಕೃಷ್ಣಪ್ಪ ಗೌತಮ್(2) ಹಾಗೂ ವಿ. ವೈಶಾಕ್(6) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆದರೂ ತಂಡಕ್ಕೆ ಆಸರೆಯಾದ ನಾಯಕ ಅಗರ್ವಾಲ್,​ ಸೌರಾಷ್ಟ್ರ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. 367 ಎಸೆತಗಳನ್ನು ಎದುರಿಸಿ ದ್ವಿಶತಕ ಬಾರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಮಯಾಂಕ್‌ 429 ಎಸೆತಗಳನ್ನು ಎದುರಿಸಿ 28 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 249 ರನ್ ಬಾರಿಸಿ ಕೊನೆಯವರಾಗಿ ರನೌಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ Ranji Trophy Semifinal: ಸೌರಾಷ್ಟ್ರ ವಿರುದ್ಧ ಅಜೇಯ ಶತಕ ಬಾರಿಸಿ ಮಿಂಚಿದ ಮಯಾಂಕ್​ ಅಗರ್ವಾಲ್​

ಸದ್ಯ ಗುರಿ ಬೆನ್ನಟ್ಟುತ್ತಿರುವ ಸೌರಾಷ್ಟ್ರ ತಂಡ 9 ರನ್​ಗೆ ಒಂದು ವಿಕೆಟ್​ ಕಳೆದುಕೊಂಡು ಆಟ ಮುಂದುವರಿಸುತ್ತಿದೆ.

Exit mobile version