Site icon Vistara News

Ranji Trophy | ಗೋವಾ ವಿರುದ್ಧ ಅಜೇಯ ದ್ವಿಶತಕ ಬಾರಿಸಿ ಮಿಂಚಿದ ಮನೀಷ್​ ಪಾಂಡೆ

manish pandey

ಬೆಂಗಳೂರು: ಸತತ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ದೇಶಿ ಕ್ರಿಕೆಟ್​ನಲ್ಲಿ ಕರ್ನಾಟಕ ತಂಡದ ನಾಯಕತ್ವ ಕಳೆದುಕೊಂಡಿದ್ದ ಮನೀಷ್‌ ಪಾಂಡೆ ಇದೀಗ ಗೋವಾ ವಿರುದ್ಧದ ರಣಜಿ ಪಂದ್ಯದಲ್ಲಿ ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ಮನೀಷ್​ ಪಾಂಡೆ ಕಳೆದ ಸಯ್ಯದ್​ ಮುಷ್ತಾಕ್​ ಅಲಿ, ವಿಜಯ್​ ಹಜಾರೆ ಸೇರಿದಂತೆ ಕೆಲ ಪ್ರಮುಖ ಟೂರ್ನಿಯಲ್ಲಿ ಸತತ ಬ್ಯಾಟಿಂಗ್​ ವೈಫಲ್ಯ ಕಾಣುವ ಮೂಲಕ ನಾಯಕ್ವದಿಂದ ಕೆಳಗಿಳಿದಿದ್ದರು. ಈ ಸ್ಥಾನವನ್ನು ಮಯಾಂಕ್​ ಅಗರ್ವಾಲ್​ಗೆ ನೀಡಲಾಗಿತ್ತು. ಇದೀಗ ಭರ್ಜರಿ ದ್ವಿಶತಕ ಸಿಡಿಸಿ ತಮ್ಮ ಬ್ಯಾಟಿಂಗ್​ ಫಾರ್ಮ್​ ಕಂಡುಕೊಂಡಿದ್ದಾರೆ. ಒಟ್ಟು 186 ಎಸೆತಗಳನ್ನು ಎದುರಿಸಿದ ಪಾಂಡೆ 14 ಬೌಂಡರಿ ಹಾಗೂ 11 ಸಿಕ್ಸರ್ ಸಹಿತ ಅಜೇಯ 208 ರನ್ ಬಾರಿಸಿದರು.

ಮನೀಷ್​ ಪಾಂಡೆ ಅವರ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 603 ರನ್ ಗಳಿಸಿ ಡಿಕ್ಲೇರ್​ ಮಾಡಿದೆ. ಇದಕ್ಕೂ ಮುನ್ನ ತಂಡ ಆರಂಭಿಕ ಆಟಗಾರ ಆರ್​. ಸಮರ್ಥ್​ 140 ರನ್‌ಗಳ ಭರ್ಜರಿ ಇನಿಂಗ್ಸ್‌ ಆಡಿದರು. ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಗೋವಾ ತಂಡ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್​ ಕಳೆದುಕೊಂಡು 45 ರನ್​ ಗಳಿಸಿದೆ.

ಕೆಲವು ದಿನಗಳ ಹಿಂದೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮನೀಷ್​ ಪಾಂಡೆ ಅವರನ್ನು 2.4 ಕೋಟಿಗೆ ಖರೀದಿಸಿತು. ಕಳೆದ ಸೀಸನ್​ನಲ್ಲಿ ಪಾಂಡೆ ಅವರನ್ನು ಲಕ್ನೋ ಸೂಪರ್‌ಜೈಂಟ್ಸ್‌ ತಂಡ 4.6 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಇಡೀ ಸೀಸನ್​ನಲ್ಲಿ ಪಾಂಡೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರಿಂದ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಇದೀಗ ದೇಶೀಯ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಈ ಬಾರಿ ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸುವ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | IND VS SL | ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಆರಂಭ; ಲಂಕಾ ಸರಣಿಯಿಂದ ಹಿರಿಯ ಆಟಗಾರರಿಗೆ ಕೊಕ್​!

Exit mobile version