Site icon Vistara News

Ravindra jadeja : ಮತ್ತೆ ಭಾರತ ತಂಡದ ಜೆರ್ಸಿ ಧರಿಸಲು ಹೆಮ್ಮೆ ಎನಿಸುತ್ತದೆ ಎಂದ ರವೀಂದ್ರ ಜಡೇಜಾ

Ravindra Jadeja

ಮುಂಬಯಿ: ಭಾರತ ತಂಡದ ಸ್ಟಾರ್ ಆಲ್​ರೌಂಡರ್​ ರವೀಂದ್ರ ಜಡೇಜಾ (Ravindra jadeja) ಮಂಡಿಯ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ಫಿಟ್​ ಎನಿಸಿಕೊಂಡಿದ್ದಾರೆ. ಅವರು ಮುಂಬರುವ ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಆಡುವುದಕ್ಕೆ ಸಜ್ಜಾಗಿದ್ದಾರೆ. ಇದೀಗ ತಮಗಾದ ಗಾಯದ ಸಮಸ್ಯೆ ಹಾಗೂ ಸುಧಾರಿಸಿಕೊಂಡಿರುವ ಪರಿಯನ್ನು ಬಣ್ಣಿಸಿದ್ದಾರೆ. ಇದೇ ವೇಳೆ ಅವರು ಮತ್ತೆ ಟೀಮ್​ ಇಂಡಿಯಾ ಜರ್ಸಿ ಧರಿಸಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ.

”ಭಾರತ ತಂಡಕ್ಕೆ ಮರಳುವುದಕ್ಕೆ ನಾನು ಉತ್ಸುಕನಾಗಿದ್ದೇನೆ. ನಾನು ಮಂಡಿ ನೋವಿನ ಸಮಸ್ಯೆಯಿಂದ ಬಳಲಿದ್ದೆ ಹಾಗೂ ಸರ್ಜರಿ ಮಾಡುವುದು ಅನಿವಾರ್ಯವಾಯಿತು. ನಾನು ಕಳೆದ ಟಿ20 ವಿಶ್ವ ಕಪ್​ ಮುಗಿಯುವ ಮೊದಲು ಸರ್ಜರಿಗೆ ಒಳಗಾಗುವುದೇ ಅಥವಾ ನಂತರ ಸರ್ಜರಿ ಮಾಡಿಸಿಕೊಳ್ಳುವುದೇ ಎಂಬ ಗೊಂದಲ ಉಂಟಾಗಿತ್ತು. ನನ್ನ ವೈದ್ಯರ ಜತೆ ಮಾತನಾಡಿದಾಗ ಅವರು ವಿಶ್ವ ಕಪ್​ಗೆ ಮೊದಲೇ ಮಾಡಿಸಿಕೊಳ್ಳುವುದು ಸೂಕ್ತ ಎಂದು ಹೇಳಿದರು. ಒಂದು ವೇಳೆ ಮಾಡಿಕೊಳ್ಳದೇ ಹೋದರೂ ವಿಶ್ವ ಕಪ್​ ಆಡುವುದು ಸಾಧ್ಯವಿಲ್ಲ ಎಂದು ಸಲಹೆ ಕೊಟ್ಟಿದ್ದರು. ಹೀಗಾಗಿ ತಕ್ಷಣ ಸರ್ಜರಿಗೆ ಒಳಗಾದೆ,” ಎಂಬುದಾಗಿ ಜಡೇಜಾ ಬಿಸಿಸಿಐ ಟಿವಿಯಲ್ಲಿ ಹೇಳಿದ್ದಾರೆ.

”ಐದು ತಿಂಗಳ ಬಳಿಕ ನಾನು ಭಾರತ ತಂಡದ ಜೆರ್ಸಿ ಧರಿಸುತ್ತಿದ್ದೇನೆ. ಈ ಅವಕಾಶಕ್ಕಾಗಿ ನಾನು ಭಾಗ್ಯವಂತ ಎಂದು ಅಂದುಕೊಳ್ಳುತ್ತೇನೆ. ಐದು ತಿಂಗಳ ಕಾಲ ಕ್ರಿಕೆಟ್​ನಿಂದ ದೂರ ಇರುವ ಮೂಲಕ ಸಾಕಷ್ಟು ಮಾನಸಿಕ ಗೊಂದಲಕ್ಕೆ ಒಳಗಾಗಿದೆ. ಹೀಗಾಗಿ ಪುನಶ್ಚೇತನದ ಅವಧಿಯಲ್ಲಿ ಸಮಸ್ಯೆ ಎದುರಿಸಿದೆ,” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Ravindra Jadeja | ಫೆಬ್ರವರಿ 1ರಂದು ರವೀಂದ್ರ ಜಡೇಜಾ ಫಿಟ್ನೆಸ್ ರಿಪೋರ್ಟ್​ ಬಿಡುಗಡೆ

ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಅಲ್ಲಿನ ಫಿಸಿಯೊಗಳು ಹಾಗೂ ತರಬೇತುದಾರರು ನನ್ನ ಮಂಡಿ ನೋವಿನ ಸಮಸ್ಯೆ ಸುಧಾರಣೆಗೆ ಸಾಕಷ್ಟು ಶ್ರಮ ವಹಿಸಿದರು. ಅವರು ಭಾನುವಾರವೂ ನನಗಾಗಿ ಬರುತ್ತಿದ್ದರು. ಇಲ್ಲಿಂದ ನನ್ನ ಸಮಸ್ಯೆ ಕೊನೆಯಾಗಿದೆ ಎಂದು ಅವರು ಹೇಳಿದ್ದಾರೆ.

Exit mobile version