Site icon Vistara News

IPL 2024 : ದುಡ್ಡು ಖಾಲಿಯಾಗಿದ್ದು ಆರ್​ಸಿಬಿಯದ್ದು, ಲಾಭ ಆಗುತ್ತಿರುವುದು ಮುಂಬೈಗೆ!

Cameron Green

ಬೆಂಗಳೂರು: ಗುಜರಾತ್ ಟೈಟಾನ್ಸ್ ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ರಲ್ಲಿ ಆಡಲು ಮುಂಬೈ ಇಂಡಿಯನ್ಸ್ ಸೇರಲು ನಿರ್ಧರಿಸಿದಾಗಿನಿಂದ ಐಪಿಎಲ್​ 2024ನೇ ಆವೃತ್ತಿಯು ಕಳೆಗಟ್ಟುತ್ತಿದೆ. ಹೊಸ ಫ್ರಾಂಚೈಸಿ ಗುಜರಾತ್ ಟೈಟನ್ಸ್ ್ಪರ ನಾಯಕನಾಗಿ ಮತ್ತು ಆಟಗಾರನಾಗಿ ಒಂದೆರಡು ಯಶಸ್ವಿ ವರ್ಷಗಳ ಕಳೆದ ನಂತರ ಅವರು ಮುಂಬೈಗೆ ವಾಪಸಾಗಿದ್ದಾರೆ. ಅವರೀಗ , ರೋಹಿತ್ ಶರ್ಮಾ ನೇತೃತ್ವದ ತಂಡದ ಜತೆ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಅವರು ಈ ಫ್ರಾಂಚೈಸಿಯ ಭವಿಷ್ಯದ ನಾಯಕ ಎಂದೇ ಹೇಳಲಾಗುತ್ತಿದೆ. ಆದರೆ, ಈ ಟ್ರೇಡಿಂಗ್ ಡೀಲ್ ಅತ್ಯಂತ ಕುತೂಹಲಕಾರಿಯಾಗಿತ್ತು. ಅವರಿಗೆ ನೀಡಬೇಕಾದ 15 ಕೋಟಿ ರೂಪಾಯಿ ಮೊತ್ತವನ್ನು ಸಜ್ಜುಗೊಳಿಸಲು ಮುಂಬಯಿ ಇಂಡಿಯನ್ಸ್​ ತಂಡ ಹೊಸ ಐಡಿಯಾ ಮಾಡಿತ್ತು. ತನ್ನ ತಂಡದಲ್ಲಿರುವ 17.5 ಕೋಟಿ ರೂಪಾಯಿ ಮೌಲ್ಯದ ಆಸ್ಟ್ರೇಲಿಯನ್​ ಆಲ್​ರೌಂಡರ್ ಕ್ಯಾಮೆರೂನ್ ಗ್ರೀನ್ ಅವರನ್ನು ಬೆಂಗಳೂರು ತಂಡಕ್ಕೆ ಮಾರಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಟಾರ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸಲು ಆಸಕ್ತಿ ತೋರಿಸಿದಾಗ ಮುಂಬೈ ತಕ್ಷಣವೇ ಒಪ್ಪಿಕೊಂಡಿತ್ತು. ಇತ್ತ ಆರ್​ಸಿಬಿ ಗ್ರೀನ್ ಅವರನ್ನು ಪಡೆಯಲು ಕೆಲವು ಆಟಗಾರರನ್ನು ತ್ಯಾಗ ಮಾಡಿತು. ಐಪಿಎಲ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಆಟಗಾರ ಅತಿ ಹೆಚ್ಚು ಸಂಭವಾನೆ ಪಡೆಯುವ ಐಪಿಎಲ್ ಆಟಗಾರ. ಆ ಹಣವನ್ನು ಹೊಂದಿಸಲು ಆರ್​ಸಿಬಿಯೂ ಸಿಕ್ಕಾಪಟ್ಟೆ ಕಸರತ್ತು ಮಾಡಿತು. ಆದರೆ, ಈ ಪ್ರಕ್ರಿಯೆಯ ಒಟ್ಟು ಲಾಭ ಮಾತ್ರ ಮುಂಬೈ ತಂಡಕ್ಕೆ ಎಂದು ಮಾಜಿ ಕ್ರಿಕೆಟಿಗರು ಅಂದಾಜು ಮಾಡಿದ್ದಾರೆ.

ಮುಂಬೈಗೆ ಉಪಕಾರ ಮಾಡಿದ ಆರ್​ಸಿಬಿ

ಈ ವಹಿವಾಟು ಪರಿಸ್ಥಿತಿಯನ್ನು ವಿಶ್ಲೇಷಿಸಿದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಆರ್​ಸಿಬಿ ಈ ವಿಚಾರದಲ್ಲಿ ಮುಂಬೈಗೆ ದೊಡ್ಡ ಉಪಕಾರ ಮಾಡಿದೆ ಎಂದು ಹೇಳಿದ್ದಾರೆ. ಏಕೆಂದರೆ ಆರ್​ಸಿಬಿಯ ಬೆಂಬಲವಿಲ್ಲದೆ ಐದು ಬಾರಿಯ ಚಾಂಪಿಯನ್ಸ್ ಪಾಂಡ್ಯ ಅವರನ್ನು ವ್ಯಾಪಾರದಲ್ಲಿ ಪಡೆಯುವುದು ಆ ತಂಡಕ್ಕೆ ಸುಲಭವಿರಲಿಲ್ಲ ಎಂದು ಹೇಳಿದೆ. ಒಂದು ಕಡೆ ಆಲ್​ರೌಂಡರ್​ ಸ್ಥಾನ ಭರ್ತಿ ಮಾಡುವ ಜತೆಗೆ ಮತ್ತೊಂದು ಕಡೆಗೆ ದುಡ್ಡು ಕೂಡ ಮುಂಬೈ ಉಳಿಸಿದೆ ಎಂದು ಹೇಳಿದ್ದಾರೆ ಅವರು. ಆರ್​​ಸಿಬಿ ಹರಾಜಿನ ಮೂಲಕವೇ ಗ್ರೀನ್ ಅವರನ್ನು ಪಡೆಯಬಹುದಾಗಿತ್ತು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಚೋಪ್ರಾ ಮುಂಬೈ ತಂಡದ ವ್ಯವಹಾರ ಚಾತುರ್ಯವನ್ನು ಮೆಚ್ಚಿದ್ದಾರೆ.

ಇದನ್ನೂ ಓದಿ : IPL 2024 : ಪಾಂಡ್ಯ- ರೋಹಿತ್​; ಮುಂಬೈ ತಂಡದ ನಾಯಕ ಯಾರಾಗಬಹುದು?

“ಅವರು (ಆರ್​ಸಿಬಿ) ಮುಂಬೈಗೆ ದೊಡ್ಡ ಉಪಕಾರ ಮಾಡಿದ್ದಾರೆ. ಏಕೆಂದರೆ ಈ ಒಪ್ಪಂದ ನಡೆಯದಿದ್ದರೆ, ಹಾರ್ದಿಕ್ ಒಪ್ಪಂದವೂ ಕಷ್ಟವಿತ್ತು ವಿಷಯಗಳು ಇದ್ದಕ್ಕಿದ್ದಂತೆ ವಿಭಿನ್ನವಾಗಿರುತ್ತಿತ್ತು. ಆರ್​ಸಿಬಿ ದೃಷ್ಟಿಕೋನದಿಂದ ನೋಡಿದರೆ ಅವರು ಮುಂಬೈ ತಂಡಕ್ಕೆ ಸಹಾಯ ಮಾಡಿದ್ದಾರೆ ಎಂದು ಚೋಪ್ರಾ ಹೇಳಿದ್ದಾರೆ.

“ಮುಂಬಯಿ ತಂಡ ಪಾಂಡ್ಯಗಾಗಿ ಗ್ರೀನ್​ ಅವರನ್ನು ಬಿಡುಗಡೆ ಮಾಡುತ್ತಿದ್ದರು. ಈ ವೇಳೆ ಹರಾಜಿನಲ್ಲಿಯೇ ಅವರನ್ನು ಪಡೆಯಬಹುದಾಗಿತ್ತು. ಆರ್​ಸಿಬಿ ಬಳಿ 40 ಕೋಟಿ ರೂ.ಗಿಂತ ಹೆಚ್ಚು ಹಣವಿದ್ದ ಕಾರಣ ಹರಾಜು ಕಷ್ಟವಿರಲಿಲ್ಲ. ಇದೀಘ ಮುಂಬೈ ಇಂಡಿಯನ್ಸ್​ ತಂಡಕ್ಕೆ ಶುಭವಾಗಿದೆ , “ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ. ಮತ್ತೊಂದೆಡೆ, ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮುಂಬರುವ ಐಪಿಎಲ್ ಮಿನಿ ಹರಾಜಿನಲ್ಲಿ ಹೂಡಿಕೆ ಮಾಡಲು ಮುಂಬೈ ಬಳಿ 17.75 ಕೋಟಿ ರೂ., ಆರ್​ಸಿಬಿ ಬಳಿ 23.25 ಕೋಟಿ ರೂ. ಉಳಿದಿದೆ.

Exit mobile version