Site icon Vistara News

Rishabh Pant | ರಿಷಭ್​ ಪಂತ್​ಗೆ ಹಿತೈಷಿಗಳ ಕಾಟ!; ಕುಟುಂಬ ಸದಸ್ಯರ ಕಳವಳ

rishabh pant

ಡೆಹ್ರಾಡೂನ್​ : ಆಸ್ಪತ್ರೆ ಸೇರಿದ ವ್ಯಕ್ತಿಯ ಆರೋಗ್ಯ ವಿಚಾರಿಸಲು ಸಂಬಂಧಿಕರು ಹಾಗೂ ಹಿತೈಷಿಗಳು ಭೇಟಿ ನೀಡುವುದು ಮಾಮೂಲಿ. ಈ ರೀತಿಯಾಗಿ ಶುಭ ಹಾರೈಸಲು ಬರುವವರ ಸಂಖ್ಯೆ ಹೆಚ್ಚಾದರೆ ರೋಗಿಗೆ ಅದುವೇ ದೊಡ್ಡ ಸಮಸ್ಯೆ ಎನಿಸಬಹುದು. ಇದೇ ಪರಿಸ್ಥಿತಿ ಕಾರು ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ರಿಷಭ್​ ಪಂತ್​​ಗೆ (Rishabh Pant) ಎದುರಾಗಿದೆ. ಮಿತಿ ಮೀರಿ ಆಗಮಿಸುತ್ತಿರುವ ಬಂಧುಗಳಿಂದಾಗಿ ಪಂತ್​ಗೆ ನಿದ್ದೆಯೇ ಇಲ್ಲದಂತಾಗಿದೆ.

ಶುಕ್ರವಾರ ಬೆಳಗ್ಗೆ ರಿಷಭ್​ ಆಸ್ಪತ್ರೆ ಸೇರಿದ ಬಳಿಕದಿಂದ ರಾಜಕಾರಣಿಗಳು, ಉದ್ಯಮಿಗಳು, ಕ್ರಿಕೆಟ್ ಮಂಡಳಿಯ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಆಸ್ಪತ್ರೆಗೆ ಬರುತ್ತಿದ್ದಾರೆ. ಬರುವವರು ಬಹುತೇಕ ವಿಐಪಿಗಳು. ಹೀಗಾಗಿ ಆಸ್ಪತ್ರೆ ಸಿಬ್ಬಂದಿ ವಿಧಿಯಿಲ್ಲದೆ ಅವರನ್ನು ಒಳಗೆ ಬಿಟ್ಟುಕೊಡುತ್ತಿದ್ದಾರೆ. ಆದರೆ, ವಿಶ್ರಾಂತಿಯ ಅಗತ್ಯವಿರುವ ಪಂತ್​ಗೆ ಇದರಿಂದ ಕಿರುಕುಳ ಉಂಟಾಗುತ್ತಿದೆ. ಆಗುತ್ತಿರುವ ಸಮಸ್ಯೆಯನ್ನು ಬಾಯ್ಬಿಟ್ಟು ಹೇಳುವ ಸ್ಥಿತಿಯೂ ಇಲ್ಲ.

ತಮ್ಮ ಮಗನಿಗೆ ಆರೋಗ್ಯ ವಿಚಾರಿಸಲು ಬರುವ ಜನರಿಗೆ ತೊಂದರೆಯಾಗುತ್ತಿದೆ ಎಂಬುದಾಗಿ ರಿಷಭ್​ ಪಂತ್​ ಅವರ ಕುಟುಂಬ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಹೊತ್ತು, ಗೊತ್ತು ಇಲ್ಲದೆ ಅವರೆಲ್ಲರೂ ಬಂದು ಮಾತುಕತೆ ನಡೆಸುತ್ತಿದ್ದಾರೆ. ಚಿಕಿತ್ಸೆ ಹಾಗೂ ಔಷಧದ ಪರಿಣಾಮ ಎದುರಿಸುತ್ತಿರುವ ರಿಷಭ್​ಗೆ ವಿಶ್ರಾಂತಿಯ ಅಗತ್ಯವಿದೆ ಎಂಬುದನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದಾಗಿಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ರಿಷಭ್ ಪಂತ್ ಅವರನ್ನು ಭಾನುವಾರ ಸಂಜೆ ವೇಳೆ ಏಕಾಏಕಿ ಐಸಿಯುನಿಂದ ಖಾಸಗಿ ವಾರ್ಡ್​ಗೆ ಶಿಫ್ಟ್​ ಮಾಡಲಾಗಿದೆ. ವೀಕ್ಷಕರ ಸಮಸ್ಯೆಯೇ ಆ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ | Rishabh Pant | ಅಪಘಾತದಿಂದ ಗಾಯಗೊಂಡಾಗಲೂ ತಾಯಿಯನ್ನೇ ಕನವರಿಸುತ್ತಿದ್ದ ರಿಷಭ್​ ಪಂತ್​!

Exit mobile version