Site icon Vistara News

Rishabh Pant | ಚೇತರಿಕೆ ಕಾಣುತ್ತಿರುವ ಪಂತ್​ ಭೇಟಿಯಾಗಲು ಆಸ್ಪತ್ರೆಗೆ ಬರಬೇಡಿ; ಶ್ಯಾಮ್ ಶರ್ಮಾ ಮನವಿ

Rishabh Pant Accident

ಡೆಹ್ರಾಡೂನ್: ರಸ್ತೆ ಅಪಘಾತದಲ್ಲಿ ಗಾಯಗೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟೀಮ್​ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್(Rishabh Pant) ಅವರನ್ನು ನೋಡಲು ಜನರು ಆಸ್ಪತ್ರೆಗೆ ಬಂದರೆ ಅವರಿಗೆ ಅಪಾಯವಾಗುವ ಸಾಧ್ಯತೆಯಿದೆ ಎಂದು ವೈದ್ಯರು ಮತ್ತು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸದ್ಯ ಪಂತ್​ ಅವರಿಗೆ ಪ್ಲಾಸ್ಟಿಕ್​ ಸರ್ಜರಿ ಮಾಡಲಾಗಿದೆ. ಅವರು ಚೇತರಿಕೆ ಕಾಣುತ್ತಿದ್ದಾರೆ. ಈ ವೇಳೆ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದರೆ ಪಂತ್​ಗೆ ಇನ್ಫೆಕ್ಷನ್ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಸ್ವಲ್ಪ ದಿನಗಳ ಬಳಿಕ ಅವರನ್ನು ಭೇಟಿ ಮಾಡಿದ್ದರೆ ಉತ್ತಮ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ನಿರ್ದೇಶಕ ಶ್ಯಾಮ್ ಶರ್ಮಾ ಮನವಿ ಮಾಡಿದ್ದಾರೆ.

ಶನಿವಾರ ಪಂತ್​ ಅವರನ್ನು ನೋಡಲು ಬಾಲಿವುಡ್​ನ ಹಿರಿಯ ನಟರಾದ ಅನುಪಮ್ ಖೇರ್,ಅನಿಲ್ ಕಪೂರ್ ಮತ್ತು ಕ್ರಿಕೆಟಿಗ ನಿತೇಶ್​ ರಾಣಾ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇದೀಗ ಹಲವು ಜನರು ಪಂತ್​ ಅವರನ್ನು ಭೇಟಿಯಾಗಲು ಮುಂದಾಗಿದ್ದಾರೆ. ಆದರೆ ಚೇತರಿಕೆ ಕಾಣುತ್ತಿರುವ ಪಂತ್​ಗೆ ಇನ್ಫೆಕ್ಷನ್ ಆಗುವ ಸಾಧ್ಯತೆ ಇದೆ. ಇದ್ದನ್ನು ತಪ್ಪಿಸುವ ಸಲುವಾಗಿ ಪಂತ್​ ಅವರನ್ನು ಭೇಟಿಯಾಗಬೇಡಿ ಎಂದು ಆಸ್ಪತ್ರೆಯ ವೈದ್ಯರು ಮತ್ತು ಶ್ಯಾಮ್ ಶರ್ಮಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Rishabh Pant | ಗಾಯಾಳು ರಿಷಭ್ ಪಂತ್ ಹಣೆಗೆ ಪ್ಲಾಸ್ಟಿಕ್ ಸರ್ಜರಿ; ಶ್ಯಾಮ್ ಶರ್ಮಾ ಸ್ಪಷ್ಟನೆ

Exit mobile version