Site icon Vistara News

Rishabh Pant: ಅಂಡರ್​-16 ಆಟಗಾರರಿಗೆ ಕ್ರಿಕೆಟ್​ ಸಲಹೆ ನೀಡಿದ ರಿಷಭ್​ ಪಂತ್​; ಫೋಟೊ ಹಂಚಿಕೊಂಡ ಬಿಸಿಸಿಐ

NCA At Bangalore

ಬೆಂಗಳೂರು: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಟೀಮ್​ ಇಂಡಿಯಾದ ಯುವ ಆಟಗಾರ ರಿಷಭ್​ ಪಂತ್​ ಅವರು ಬೆಂಗಳೂರಿನ ಎನ್​ಸಿಎ ಶಿಬಿರದಲ್ಲಿ ಅಂಡರ್​-16 ಆಟಗಾರರಿಗೆ ಕ್ರಿಕೆಟ್ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ. ಪಂತ್​ ಅವರು ​ಅಂಡರ್​-16 ಆಟಗಾರರಿಗೆ ಸಲಹೆ ನೀಡುತ್ತಿರುವ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಪಂತ್​ ಅವರು ಶಸ್ತ್ರಚಿಕಿತ್ಸೆ ಬಳಿಕ ಇದೀಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ)ಯಲ್ಲಿ ಫಿಟ್​ನೆಸ್​ ಮತ್ತು ಪುನಶ್ಚೇತನದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಗೆಗೆ ಪಂತ್​ ಮೊದಲ ಬಾರಿಗೆ ಊರುಗೋಲು ಇಲ್ಲದೆ ನಡೆದಾಡಿದ ವಿಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಭವಿಷ್ಯದಲ್ಲಿ ಟೀಮ್​ ಇಂಡಿಯಾ ಪರ ಆಡುವ ಕನಸು ಕಾಣುತ್ತಿರುವ ಅಂಡರ್​-16 ಆಟಗಾರರಿಗೆ ಪಂತ್​ ವಿಶೇಷ ಮಾಹಿತಿ ನೀಡಿದ್ದಾರೆ.

ಪಂತ್​ ಅವರು ಕ್ರಿಕೆಟ್​ನಲ್ಲಿ ಇರುವ ಸವಾಲು, ಆಟದಲ್ಲಿ ತೋರಬೇಕಾದ ನಿಷ್ಠೆ, ಫಿಟ್​ನೆಸ್​ ಸೇರಿದಂತೆ ಹಲವಾರು ಮಾಹಿತಿ ಮತ್ತು ಸಲಹೆಯನ್ನು ಯುವ ಆಟಗಾರರೊಂದಿಗೆ ಹಂಚಿಕೊಂಡರು. ಪಂತ್​ ಅವರ ಈ ನಡೆಗೆ ಬಿಸಿಸಿಐ ಮೆಚ್ಚುಗೆ ವ್ಯಕ್ತಪಡಿಸಿದೆ. ಸದ್ಯ ಪಂತ್​ ಅವರ ಚೇತರಿಕೆ ಗಮನಿಸುವಾಗ ಅವರು ವರ್ಷಾಂತ್ಯದಲ್ಲೇ ಮತ್ತೆ ಕ್ರಿಕೆಟ್​ ಅಂಗಳಕ್ಕೆ ಮರಳುವ ನಿರೀಕ್ಷೆ ಇದೆ.

ಇದನ್ನೂ ಓದಿ Rishabh Pant: ಊರುಗೋಲು ಬದಿಗಿಟ್ಟು ಕೆಜಿಎಫ್​ ರಾಕಿ ಭಾಯ್​ ಶೈಲಿಯಲ್ಲಿ ನಡೆದಾಡಿದ ರಿಷಭ್​ ಪಂತ್​; ವಿಡಿಯೊ ವೈರಲ್​

2022 ಡಿಸೆಂಬರ್ 30 ರಂದು ಮುಂಜಾನೆ ಪಂತ್​ ಅವರು ದಿಲ್ಲಿಯಿಂದ ಡೆಹ್ರಾಡೂನ್​ಗೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು ಚಲಾಯಿಸುತ್ತಿದ್ದ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾಗಿತ್ತು. ಆದರೆ ರಿಷಭ್‌ ಪಂತ್ ಅವರು ಪವಾಡ ಸದೃಶ್ಯ ಪಾರಾಗಿದ್ದರು.

Exit mobile version