Site icon Vistara News

Rishabh Pant: ಪಂತ್​ ಫಿಟ್​ನೆಸ್​ ಕುರಿತು ಮಹತ್ವದ ಮಾಹಿತಿ ನೀಡಿದ ಎನ್​ಸಿಎ

Rishabh Pant Fitness

ನವದೆಹಲಿ: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್​ ಪಂತ್(Rishabh Pant),​ ಮುಂದಿನ ವರ್ಷದ 17ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಆಡುವ ಮೂಲಕ ಮತ್ತೆ ಕ್ರಿಕೆಟ್​ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಪಂತ್​ ಫಿಟ್​ನೆಸ್​(Fitness) ಕುರಿತು ಎನ್​ಸಿಎ(NCA) ಮೂಲಗಳು ಮಹತ್ವದ ಅಪ್​ಡೇಟ್​ ನೀಡಿದೆ.

“ಪಂತ್ ಚೇತರಿಕೆ ಹಂತದಲ್ಲಿದ್ದಾರೆ. ಚೇತರಿಕೆ ನಿರೀಕ್ಷೆಗಿಂತ ಉತ್ತಮವಾಗಿದೆ. ಗಾಯದ ನಂತರ ಅವರ ಮೊಣಕಾಲು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವ ಆತಂಕವಾಗಿತ್ತು. ಆದರೆ ಪಂತ್​ ವ್ಯಾಯಾಮ ಮತ್ತು ಚೇತರಿಕೆ ಕಾಣುವಾಗ ಈ ಆತಂಕ ದೂರವಾಗಿದೆ. ಆದರೂ ಅವರು ಇನ್ನೂ ಸಂಪೂರ್ಣ ಫಿಟ್​ ಆಗಿಲ್ಲ” ಎಂದು ಎನ್​ಸಿಎ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಶೇ.100ರಷ್ಟು ಫಿಟ್​ ಆಗಿಲ್ಲ

ಪಂತ್​ ಅವರಿಗೆ ಪ್ರತಿ ನಿತ್ಯ ಎನ್​ಸಿಎಯಲ್ಲಿ ತರಬೇತಿ ನೀಡಲಾಗುತ್ತದೆ. ಸದ್ಯಕ್ಕೆ ಅವರು ರನ್ನಿಂಗ್​ ಮತ್ತು ಭಾರ ಎತ್ತುವ ಮತ್ತು ಕೆಲ ಸಣ್ಣ ಪುಟ್ಟ ಫಿಟ್​ನೆಸ್​ ಮಾಡುತ್ತಾರೆ. ಶೇ.80ರಷ್ಟು ಫಿಟ್​ ಆದಂತೆ ತೋರುತ್ತಿದೆ. ಮುಂದಿನ ವಾರದಿಂದ ಅವರಿಗೆ ಶೇ.100ರ ಪರಿಪೂರ್ಣ ಫಿಟ್​ನೆಸ್​ನ ತರಬೇತಿ ಆರಂಭಿಸುತ್ತೇವೆ. ಇಲ್ಲಿ ಅವರ ಕ್ರಿಕೆಟ್​ ಕಮ್​ಬ್ಯಾಕ್​ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಎನ್​ಸಿಎ ಮೂಲಗಳು ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ IND vs SA: ವಿಶ್ವಕಪ್​ ಬಳಿಕ ಮೊದಲ ಏಕದಿನ ಪಂದ್ಯ ಆಡಲು ಸಜ್ಜಾದ ಭಾರತ

ಬಿಸಿಸಿಐ ಕೂಡ ಪಂತ್​ ಅವರ ಫಿಟ್​ನೆಸ್​ ಮೇಲೆ ತೀವ್ರ ನಿಗಾ ಇರಿಸಿದೆ. ಪ್ರತಿ ಹಂತದ ಟ್ರೈನಿಂಗ್​ ಬಳಿಕವೂ ಎನ್​ಸಿಎ ಬಳಿ ಅಪ್​ಡೇಟ್​ ಪಡೆಯುತ್ತಿದೆ. ಪಂತ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳ ಬೇಕಾದರೆ ದೇಶೀಯ ಕ್ರಿಕೆಟ್​ನಲ್ಲಿ ಆಡಿ ತಮ್ಮ ಫಿಟ್​ಸೆನ್​ ಸಾಬೀತುಪಡಿಸಬೇಕಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಹೀಗಾಗಿ ಪಂತ್​ಗೆ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಆಡಿದ್ದರೆ ಇದು ಅವರಿಗೆ ಮಹತ್ವದ ಟೂರ್ನಿಯಾಗಲಿದೆ.

ಕೆಲ ದಿನಗಳ ಹಿಂದೆ ಪಂತ್​ ಅವರು ಜಿಮ್​ನಲ್ಲಿ ಬಾರ ಎತ್ತುವ ಮತ್ತು ಇನ್ನು ಕೆಲ ಕಸರತ್ತು ಮಾಡುವ ವಿಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಹಂಚಿಕೊಂಡಿದ್ದರು. ಜತೆಗೆ ಎಲ್ಲ ನೋವನ್ನು ಮರೆತು ಮತ್ತೆ ಪುಟಿದೇಳುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಪಂತ್ ಜಿಮ್‌ನಲ್ಲಿ ಫಿಟ್​ನೆಸ್​ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಕಂಡ ಅವರ ಅಭಿಮಾನಿಗಳು ನಿಮ್ಮ ಆಗಮನಕ್ಕೆ ಕಾಯುತ್ತಿದ್ದೇವೆ ಎಂದು ಕಮೆಂಟ್​ ಮಾಡಿದ್ದರು.

ಡಿಸೆಂಬರ್​ನಲ್ಲಿ ಕಾರು ಅಪಘಾತ

ಕಳೆದ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಡಿಸೆಂಬರ್​ ಅಂತ್ಯಕ್ಕೆ ಘಟನೆ ನಡೆದು ಒಂದು ವರ್ಷವಾಗಲಿದೆ. ಅಂದಿನ ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್​ ಪಂತ್​ ಪಾರಾಗಿದ್ದರು. ಡೆಹ್ರಾಡೂನ್​ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

Exit mobile version