Site icon Vistara News

Rishabh Pant | ನೀವೊಬ್ಬ ಫೈಟರ್​; ರಿಷಭ್​ ಪಂತ್ ಚೇತರಿಕೆಗೆ ಟೀಮ್​ ಇಂಡಿಯಾ ಆಟಗಾರರ ಹಾರೈಕೆ

rishabh Pant

ಮುಂಬಯಿ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್(Rishabh Pant) ಶೀಘ್ರ ಚೇತರಿಕೆಗೆ ಟೀಮ್​ ಇಂಡಿಯಾ ಸದಸ್ಯರು ಮತ್ತೊಮ್ಮೆ ಪ್ರಾರ್ಥಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯ ಮಂಗಳವಾರ ಮುಂಬೈನಲ್ಲಿ ನಡೆಯಲಿದೆ. ಪಂದ್ಯಕ್ಕೂ ಮುನ್ನ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​, ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಸಹ ಆಟಗಾರರು ಪಂತ್​ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

ಬಿಸಿಸಿಐ ಶೇರ್​ ಮಾಡಿದ ಈ ವಿಡಿಯೊದಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಚಹಲ್, ಇಶಾನ್ ಕಿಶನ್ ಹಾಗೂ ಶುಭಮನ್​ ಗಿಲ್ ಪಂತ್​ ಚೇತರಿಕೆಗೆ​ ಹಾರೈಸಿದ್ದಾರೆ. ನೀವೊಬ್ಬ ಫೈಟರ್​. ಆದಷ್ಟು ಬೇಗ ಚೇತರಿಸಿಕೊಂಡು ಟೀಮ್​ ಇಂಡಿಯಾ ಸೇರಿಕೊಳ್ಳಲಿದ್ದೀರ. ಈ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸ ಇದೆ. ಸದ್ಯ ನಾವು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | Rishabh Pant | ದಯವಿಟ್ಟು ಕಾರು ವೇಗವಾಗಿ ಚಲಾಯಿಸಬೇಡಿ; ಯುವ ಕ್ರಿಕೆಟಿಗರಿಗೆ ಕಪಿಲ್​ದೇವ್​ ವಿನಂತಿ

Exit mobile version