Site icon Vistara News

Rishabh Pant | ಬೆಳಗಾಗುವ ಮೊದಲು ಮನೆ ತಲುಪಿ ಅಮ್ಮನಿಗೆ ಸರ್​ಪ್ರೈಸ್​ ಕೊಡಲು ಹೊರಟಿದ್ದರು ರಿಷಭ್​

rishab panth

ಡೆಹ್ರಾಡೂನ್​ : ಕಾರು ಅಪಘಾತದಲ್ಲಿ ಗಾಯಗೊಂಡಿರುವ ಕ್ರಿಕೆಟರ್​ ರಿಷಭ್​ ಪಂತ್​ (Rishabh Pant) ಅವರು ಮುಂಜಾನೆ ಏಕಾಂಗಿಯಾಗಿ ಕಾರು ಚಾಲನೆ ಮಾಡಲು ಹೊರಟ್ಟಿದ್ದೆಲ್ಲಿಗೆ ಎಂಬ ಪ್ರಶ್ನೆಗಳು ಹರಿದಾಡಿದ್ದವು. ಅದಕ್ಕೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಉತ್ತರ ಕೊಟ್ಟಿದ್ದು, ಬೆಳಗಾಗುವ ಮೊದಲು ಮನೆ ತಲುಪಿ ತಾಯಿಗೆ ಸರ್​ಪ್ರೈಸ್​ ಕೊಡಲು ಮುಂದಾಗಿದ್ದರು ಎಂದು ಹೇಳಿದ್ದಾರೆ.

ರಿಷಭ್​ ಪಂತ್​ ನವ ದೆಹಲಿಯಿಂದ ತವರೂರು ಉತ್ತರಾಖಂಡ ರೂರ್ಕಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಡೆಲ್ಲಿ- ಡೆಹ್ರಾಡೂನ್​ ಎಕ್ಸ್​ಪ್ರೆಸ್​ ಹೈವೆಯ ನರ್ಸನ್​ ಗಡಿಯ ಬಳಿ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರು ಕಾರು ಬೆಂಕಿಗೆ ಆಹುತಿಯಾಗಿದೆ. ಅಚ್ಚರಿ ಎಂಬಂತೆ ಪಂತ್​ ಸಾಮಾನ್ಯ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ಬೆಳಗ್ಗೆ ಏಕಾಂಗಿಯಾಗಿ ರಿಷಭ್​ ಹೊರಟ್ಟಿದ್ದು ಎಲ್ಲಿಗೆ ಎಂಬ ಪ್ರಶ್ನೆ ಮೂಡಿತ್ತು.

ರಿಷಭ್​ ಪಂತ್​ ಬಾಂಗ್ಲಾದೇಶ ಪ್ರವಾಸ ಮುಗಿಸಿ ನೇರವಾಗಿ ದುಬೈಗೆ ತೆರಳಿದ್ದರು. ಅಲ್ಲಿಂದ ಅವರು ವಾಪಸ್​ ಡೆಲ್ಲಿಗೆ ಬಂದಿದ್ದರು. ಡೆಲ್ಲಿಯಿಂದ ಮುಂಜಾನೆ ಹೊರಟಿದ್ದ ಅವರು ರೂರ್ಕಿಗೆ ತೆರಳಿ ತಾಯಿಗೆ ಸರ್​​ಪ್ರೈಸ್​ ಕೊಡಲು ಹೊರಟಿದ್ದರು.

ಪಂತ್​ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವೈದ್ಯರು ಅವರ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಿದ್ದಾರೆ ಎಂಬುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ | Rishabh Pant | ರಿಷಭ್​ ಪಂತ್​ ಆರೋಗ್ಯ ಸ್ಥಿತಿ ಕುರಿತು ಮ್ಯಾಕ್ಸ್​​ ಆಸ್ಪತ್ರೆಯ ವೈದ್ಯರು ಕೊಟ್ಟ ಹೇಳಿಕೆಗಳೇನು?

Exit mobile version