Site icon Vistara News

IND vs PAK: ಪಾಕ್​ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಲಿದ್ದೇವೆ; ರೋಹಿತ್​ ವಿಶ್ವಾಸ

rohit sharma press conference

ಪಲ್ಲೆಕೆಲೆ: ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾದ(Team India) ನಾಯಕ ರೋಹಿತ್​ ಶರ್ಮ(Rohit Sharma), ತಮ್ಮ ತಂಡದ ಬೌಲಿಂಗ್​ ವಿಭಾಗವನ್ನು ಹೊಗಳಿದ್ದಾರೆ. ಜತೆಗೆ ಪಾಕ್ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ನಾವು ನಮ್ಮ ಅನುಭವದಡಿಯಲ್ಲಿ ಪಾಕಿಸ್ತಾನದ ಬೌಲರ್‌ಗಳಾದ ಶಾಹೀನ್ ಅಫ್ರಿದಿ(Shaheen Afridi) ಮತ್ತ ನಸೀಮ್ ಶಾ(Naseem Shah) ಅವರನ್ನು ದಿಟ್ಟವಾಗಿ ಎದುರಿಸುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಂಡದಲ್ಲಿ 6 ಶ್ರೇಷ್ಠ ಬೌಲರ್​ಗಳಿದ್ದಾರೆ

ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಹಿತ್​, ಏಷ್ಯಾಕಪ್(Asia Cup2023) ​ತಯಾರಿಯ ಬಗ್ಗೆ ಮತ್ತು ಪಾಕ್​ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿರುವ ಕುರಿತು ಮುಕ್ತವಾಗಿ ಮಾತನಾಡಿದರು. ಈ ವೇಳೆ ನಮ್ಮ ತಂಡದಲ್ಲಿರು ಆರು ಬೌಲರ್‌ಗಳು ನಿಸ್ಸಂದೇಹವಾಗಿ ಶ್ರೇಷ್ಠ ಬೌಲರ್‌ಗಳಾಗಿದ್ದಾರೆ. ಇದು ಈಗಾಗಲೇ ವಿಶ್ವದ ಎಲ್ಲ ಕ್ರಿಕೆಟ್​ ತಂಡಕ್ಕೂ ತಿಳಿದಿದೆ. 11 ತಿಂಗಳ ಬಳಿಕ ಕ್ರಿಕೆಟ್​ಗೆ ಕಮ್​ ಬ್ಯಾಕ್​ ಮಾಡಿರುವ ಜಸ್​ಪ್ರೀತ್​ ಬುಮ್ರಾ ಕಳೆದ ಐರ್ಲೆಂಡ್​ ವಿರುದ್ಧದ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಕಳೆದ ವರ್ಷ ಅವರ ಅನುಪಸ್ಥಿತಿ ತಂಡಕ್ಕೆ ಕಾಡಿತ್ತು. ಆದರೆ ಅವರ ಆಗಮನದಿಂದ ತಂಡಕ್ಕೆ ಹೆಚ್ಚಿನ ಬಲ ಬಂದಿದೆ. ಮೊಹಮ್ಮದ್​ ಶಮಿ ಮತ್ತು ಮೊಹಮ್ಮದ್​ ಸಿರಾಜ್ ಉತ್ತಮ ಲಯದಲ್ಲಿದ್ದಾರೆ. ಈ ಮೂವರ ಬೌಲಿಂಗ್​ ಕಾಂಬಿನೇಶನ್ ಮುಂದೆ ಎಂತಹ ಬ್ಯಾಟರ್​ಗಳನ್ನು ಕಟ್ಟಿಹಾಕುವ ವಿಶ್ವಾಸವಿದೆ ಎಂದು ರೋಹಿತ್​ ಹೇಳಿದರು.

ಪಾಕ್​ ಕೂಡ ಬಲಿಷ್ಠವಾಗಿದೆ

ಎದುರಾಳಿ ಪಾಕಿಸ್ತಾನ ಕೂಡ ಬಲಿಷ್ಠವಾಗಿದೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗಗಳೆರಡರಲ್ಲೂ ಸಮರ್ಥವಾಗಿದೆ. ಅಲ್ಲದೆ ಇತ್ತೀಚೆ ಆಡಿದ ಸರಣಿಯಲ್ಲಿ ಪಾಕ್​ ತಂಡ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಆದರೆ ಶನಿವಾರದ ಪಂದ್ಯಕ್ಕೆ ನಾವು ವಿಶೇಷ ತಂತ್ರವನ್ನೇ ಮಾಡಿದ್ದೇವೆ. ಜತೆಗೆ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಅವರ ದಾಳಿಯನ್ನು ಎದುರಿಸಲು ಎಲ್ಲ ರೀತಿಯ ಪೂರ್ವ ತಯಾರಿಯನ್ನು ನಮ್ಮ ಬ್ಯಾಟರ್​ಗಳು ಮಾಡಿದ್ದಾರೆ ಎಂದು ಹೇಳಿದರು.

ಪ್ರಯೋಗ ಸಲ್ಲದು

ಇನ್ನೊಂದು ತಿಂಗಳಲ್ಲಿ ವಿಶ್ವಕಪ್​ ಇರುವುದರಿಂದ ಏಷ್ಯಾ ಕಪ್​ ಒಂದು ಉತ್ತಮ ವೇದಿಕೆಯಾಗಿದೆ. ಇಲ್ಲಿ ತೋರುವ ಪ್ರದರ್ಶನದಿಂದ ವಿಶ್ವಕಪ್​ ಭವಿಷ್ಯವನ್ನು ನಿರ್ಧರಿಸಬಹುದು ಮತ್ತು ತಂಡದಲ್ಲಿನ ನ್ಯೂನತೆಗಳನ್ನು ತಿದ್ದಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಆದರೆ ಇಲ್ಲಿ ಪ್ರಯೋಗ ಮಾಡುವ ಅವಕಾಶವಿಲ್ಲ. ನಮ್ಮ ಆಟವನ್ನು ಶ್ರದ್ಧೆಯಿಂದ ಆಡಬೇಕು ಎಂದು ತಿಳಿಸಿದರು.

ರೋಹಿತ್​ಗೆ ಅಗ್ನಿ ಪರೀಕ್ಷೆ

ಏಷ್ಯಾಕಪ್​ನಲ್ಲಿ 7 ಬಾರಿಯ ಚಾಂಪಿಯನ್ ಆಗಿರುವ ಭಾರತ ತಂಡಕ್ಕೆ 2023ರ ನಿರ್ಣಾಯಕ ವಿಶ್ವಕಪ್​ಗೆ ಮುಂಚಿತವಾಗಿ ನಡೆಯುವ ಅಗ್ನಿಪರೀಕ್ಷೆ ಇದಾಗಿದೆ. ಇಲ್ಲಿ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದ ಮೇಲೆ ವಿಶ್ವಕಪ್​ ಭವಿಷ್ಯ ನಿರ್ಧರವಾಗಲಿದೆ. ರೋಹಿತ್ ಶರ್ಮಾ(Rohit Sharma) ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್​​ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆಯೂ ಭಾರತ ತಂಡದ್ದಾಗಿದೆ. ಈ ಬಾರಿಯೂ ಅವರ ನಾಯಕತ್ವದಲ್ಲಿ ಗೆದ್ದರೆ ವಿಶ್ವ ಕಪ್​ನಲ್ಲಿ ಭಾರತ ತಂಡದ ಮೇಲೆ ನಿರಿಕ್ಷೆಯೊಂದನ್ನು ಮಾಡಬಹುದಾಗಿದೆ.

Exit mobile version