Site icon Vistara News

Rohit Sharma: ವಿಶ್ವಕಪ್​ಗೂ ಮುನ್ನ ತಂಡದ ಸಮಸ್ಯೆ ತಿಳಿಸಿದ ನಾಯಕ ರೋಹಿತ್​ ಶರ್ಮ

rohit sharma Indian cricketer

ಮುಂಬಯಿ: ಐಸಿಸಿ ಏಕದಿನ ವಿಶ್ವಕಪ್​ಗೆ(ICC World Cup) ಎಲ್ಲ ತಂಡಗಳು ಸಿದ್ಧತೆ ನಡೆಸುತ್ತಿದ್ದು ಈಗಾಗಲೇ ಕೆಲವು ದೇಶಗಳು ತಮ್ಮ ತಂಡವನ್ನು ಪ್ರಕಟಿಸಿದೆ. ಆದರೆ, ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಭಾರತ ಗಾಯದ ಸಮಸ್ಯೆಯಿಂದ ಸಂಕಟಕ್ಕೆ ಸಿಲುಕಿದೆ. ಇದೇ ವಿಚಾರವಾಗಿ ನಾಯಕ ರೋಹಿತ್​ ಶರ್ಮ(Rohit Sharma) ಕೂಡ ಮಹತ್ವದ ಹೇಳಿಕೆ ನೀಡಿದ್ದಾರೆ.

ನಾಲ್ಕನೇ ಕ್ರಮಾಂಕದ ಸಮಸ್ಯೆ ಬಗೆಹರಿದಿಲ್ಲ

2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್​ ಗೆಲ್ಲುವು ವೇಳೆ ಭಾರತ ತಂಡದ ನಾಲ್ಕನೇ ಕ್ರಮಾಂಕ ಅತ್ಯಂತ ಬಲಿಷ್ಠವಾಗಿತ್ತು. ಈ ಸ್ಥಾನದಲ್ಲಿ ಯುವರಾಜ್‌ ಸಿಂಗ್‌(Yuvraj Singh) ಅವರು ಆಡುತ್ತಿದ್ದರೂ ಆದರೆ ಅವರ ನಿವೃತ್ತಿ ಬಳಿಕ ಈ ಸ್ಥಾನಕ್ಕೆ ಇದುವರೆಗೂ ಸೂಕ್ತ ಆಟಗಾರ ಲಭಿಸಲೇ ಇಲ್ಲ. ಅವರ ಸ್ಥಾನದಲ್ಲಿ ಆಡಲಿಳಿದ ಶ್ರೇಯಸ್​ ಅಯ್ಯರ್​ ಆರಂಭದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ದೀರ್ಘಕಾಲದಿಂದ ಹೊರಗುಳಿದಿರುವು ಹಿನ್ನಡೆ ತಂದಿದೆ ಎಂದು ರೋಹಿತ್​ ಹೇಳಿದರು.

ಸೂಕ್ತ ಆಟಗಾರನ ಹುಡುಕಾಟ

2019 ಏಕದಿನ ವಿಶ್ವಕಪ್​(2019 World Cup) ಸೋಲಿಗೂ ನಾಲ್ಕನೇ ಕ್ರಮಾಂಕದಲ್ಲಿ ಸೂಕ್ತ ಆಟಗಾರ ಕೊರತೆ ಕಾಡಿದ್ದೇ ಪ್ರಮುಖ ಕಾರಣ. ಈ ವಿಶ್ವಕಪ್​ ಮುಗಿದು ಮತ್ತೊಂದು ವಿಶ್ವಕಪ್​ ಬಂದರೂ ನಾವು ಇನ್ನೂ ಕೂಡ ಈ ಸ್ಥಾನಕ್ಕೆ ಆಟಗಾರನ ಹುಡುಕಾಟ ನಡೆಸುತ್ತಲೇ ಇದ್ದೇವೆ. ಸದ್ಯ ಈ ಸ್ಥಾನಕ್ಕೆ ಓರ್ವ ಸೂಕ್ತ ಆಟಗಾರ ಆಯ್ಕೆ ನಿಟ್ಟಿನಲ್ಲಿ ವಿಂಡೀಸ್​ ವಿರುದ್ಧದ ಸರಣಿಯಲ್ಲಿ ಪ್ರಯೋಗ ನಡೆಸಿದ್ದೇವೆ. ಟಿ20ಯಲ್ಲಿ ಈ ಸ್ಥಾನದಲ್ಲಿ ತಿಲಕ್​ ವರ್ಮ ಅವರು ಉತ್ತಮ ಪ್ರದರ್ಶನ ತೋರುತ್ತಿರುವುದು ಸಂತಸ ತಂದಿದೆ. ಅಯ್ಯರ್​ ಅವರ ಲಭ್ಯತೆ ನೋಡಿಕೊಂಡು ಯಾರನ್ನು ಆಡಿಸಬೇಕು ಎಂದು ನಿರ್ಧರಿಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ Rohit Sharma: 2024ರ ಟಿ20 ವಿಶ್ವಕಪ್​ ಬಗ್ಗೆ ಮಹತ್ವದ ಮಾಹಿತಿ ನೀಡಿದ ರೋಹಿತ್​

ತಿಲಕ್​ ವರ್ಮಾ ಆಯ್ಕೆ ಸಾಧ್ಯತೆ

ವಿಂಡೀಸ್​ ವಿರುದ್ಧ ಆಡಿದ ಮೂರು ಟಿ20 ಪಂದ್ಯಗಳಲ್ಲಿಯೂ ಪಂದ್ಯಕ್ಕೆ ನೆರವಾಗಿ ಉತ್ತಮ ಪ್ರದರ್ಶನ ತೋರಿದ ತಿಲಕ್​ ವರ್ಮಾ ಮೇಲೆ ಆಯ್ಕೆ ಸಮಿತಿಯೊಂದು ಕಣ್ಣಿಟ್ಟಿದೆ. ಕೋಚ್​ ರಾಹುಲ್​ ದ್ರಾವಿಡ್​ ಕೂಡ ತಿಲಕ್​ ವರ್ಮ(tilak varma) ಅವರನ್ನು ನಾಲ್ಕನೇ ಕ್ರಮಾಖದಲ್ಲಿ ಆಡಿಸುವ ಮೂಲಕ ಪ್ರಯೋಗವೊಂದನ್ನು ನಡೆಸುತ್ತಿದ್ದಾರೆ. ಉಳಿದಿರುವ ಎರಡು ಟಿ20 ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಿದರೆ ಅವರಿಗೆ ಏಷ್ಯಾಕಪ್​ನಲ್ಲಿ ಅಯ್ಯರ್​ ಬದಲು ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. ಇದೇ ಕಾರಣಕ್ಕೆ ಭಾರತ ಏಷ್ಯಾಕಪ್​ ತಂಡದ ಪ್ರಕಟವನ್ನು ವಿಳಂಬ ಮಾಡುತ್ತಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿದೆ.

ಗಾಯಗೊಂಡಿರುವ ಕೆ.ಎಲ್​ ರಾಹುಲ್​ ಕೂಡ ಸಂಪೂರ್ಣ ಫಿಟ್​ ಆಗಿಲ್ಲ ಎಂದು ಕ್ರಿಕ್​ಇನ್ಫೊ ಗುರುವಾರ ವರದಿ ಮಾಡಿತ್ತು. ಅಭ್ಯಾಸ ಆರಂಭಿಸಿದರೂ ರಾಹುಲ್​ ಆಡಲು ಸಂಪೂರ್ಣ ಫಿಟ್​ ಆಗಿಲ್ಲ ಹೀಗಾಗಿ ಏಷ್ಯಾಕಪ್​ ಆಡುವುದು ಅನುಮಾನ ಎಂದು ತನ್ನ ವರದಿಯಲ್ಲಿ ತಿಳಿಸಿತ್ತು. ಒಟ್ಟಾರೆ ಭಾರತಕ್ಕೆ ಗಾಯದ್ದೇ ಚಿಂತೆಯಾಗಿದೆ.

Exit mobile version