Site icon Vistara News

Sarfaraz Khan : ಸೌರವ್​ ಗಂಗೂಲಿಯಿಂದ ಸಲಹೆ ಪಡೆದುಕೊಂಡ ಸರ್ಫರಾಜ್​ ಖಾನ್​

sarfaraz khan

#image_title

ನವ ದೆಹಲಿ: ಭಾರತ ಟೆಸ್ಟ್​ ತಂಡದಲ್ಲಿ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಸುದ್ದಿಯಲ್ಲಿದ್ದ ಸರ್ಫರಾಜ್​ ಖಾನ್​ ಅವರು ಮುಂಬರುವ ಐಪಿಎಲ್​ ಕ್ರಿಕೆಟ್​ ಟೂರ್ನಿಗೆ ಅಭ್ಯಾಸ ಆರಂಭಿಸಿದ್ದಾರೆ. ಅವರಿಗೆ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ಅವರು ಬ್ಯಾಟಿಂಗ್ ಸಲಹೆಗಳನ್ನು ನೀಡುತ್ತಿದ್ದಾರೆ. ಸರ್ಫರಾಜ್​ ಖಾನ್ ಅವರು ಅಭ್ಯಾಸ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸರ್ಫರಾಜ್​ ಖಾನ್ ಅವರು ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿದ್ದಾರೆ. ಹೀಗಾಗಿ ಆ ತಂಡದ ಕ್ರಿಕೆಟ್ ನಿರ್ದೇಶಕ ಸೌರವ್​​ ಗಂಗೂಲಿ ಅವರು ಸರ್ಫರಾಜ್​ ಖಾನ್​ಗೆ ಬ್ಯಾಟಿಂಗ್ ಸಲಹೆ ನೀಡುತ್ತಿದ್ದಾರೆ. ಮುಂಬಯಿ ಮೂಲದ ಬ್ಯಾಟರ್​ ಸರ್ಫರಾಜ್​ ಅವರು ಗಂಗೂಲಿಯ ಸಲಹೆಯನ್ನು ಕೇಳುತ್ತಿದ್ದಾರೆ. ಸರ್ಫರಾಜ್​ ಖಾನ್​ ಜತೆ ಯಶ್​ ಧುಲ್ ಕೂಡ ಗಂಗೂಲಿಯ ಸಲಹೆಯನ್ನು ಪಡೆದುಕೊಂಡರು.

ಇದನ್ನು ಓದಿ: Indian Cricket Team | ಸಾಧನೆ ಮಾಡಿದರೂ ಸರ್ಫರಾಜ್​ ಖಾನ್​ಗೆ ಇಲ್ಲ ಅವಕಾಶ, ಬೋಗ್ಲೆ ಬೇಸರ

ಮುಂಬಯಿಯ ಯುವ ಬ್ಯಾಟರ್​ ಸರ್ಫರಾಜ್​ ಖಾನ್ ಕಳೆದ ಎರಡು ಆವೃತ್ತಿಗಳ ರಣಜಿ ಟ್ರೋಫಿಯಲ್ಲಿ ಮುಂಬಯಿ ತಂಡದ ಪರವಾಗಿ ಗರಿಷ್ಠ ರನ್​ಗಳನ್ನು ದಾಖಲಸಿದ್ದರು. ಜತೆಗೆ ಟೂರ್ನಿಯ ಅತ್ಯುತ್ತಮ ಬ್ಯಾಟರ್ ಎಂಬ ಸಾಧನೆಯನ್ನೂ ಮಾಡಿದ್ದರು. ಆದರೂ ಅವರಿಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅವಕಾಶ ನೀಡಿಲ್ಲ ಎಂಬ ವಿಚಾರ ವಿವಾದಕ್ಕೆ ಕಾರಣವಾಗಿತ್ತು.

Exit mobile version