Site icon Vistara News

Shikhar Dhawan : ಪಾಕ್​ ಕ್ರಿಕೆಟಿಗನ ಕಾಲೆಳೆದ ಶಿಖರ್ ಧವನ್​

Shikhar dhawan

ನವದೆಹಲಿ: ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ 3 ನೇ ಟಿ 20 ಪಂದ್ಯದಲ್ಲಿ ತ್ವರಿತ ಸಿಂಗಲ್ ಕದಿಯಲು ಪ್ರಯತ್ನಿಸಿದ ಪಾಕಿಸ್ತಾನದ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಅವರನ್ನು ಭಾರತದ ಬ್ಯಾಟರ್​ ಶಿಖರ್ ಧವನ್ ಲೇವಡಿ ಮಾಡಿದ್ದಾರೆ. ವೇಗವಾಗಿ ರನ್​ಗಾಗಿ ಓಡಲು ಯತ್ನಿಸಿದ್ದ ರಿಜ್ವಾನ್​ ಅವರ ಕೈಯಿಂದ ಬ್ಯಾಟ್​ ಜಾರಿತ್ತು. ಆದರೆ ಓಟ ಮುಂದುವರಿಸಿದ್ದ ಅವರು ಕೈಯಲ್ಲಿ ಕ್ರಿಸ್​ ಮುಟ್ಟಲು ಯತ್ನಿಸಿದ್ದರು. ಆದರೆ ಸರಿಯಾಗಿ ಕ್ರೀಸ್​ ಮುಟ್ಟದ ಅವರಿಗೆ ಅಂಪೈರ್​​ ಒಂದು ರನ್ ನೀಡಿರಲಿಲ್ಲ. ಇದನ್ನು ಧವನ್ ಲೇವಡಿ ಮಾಡಿದ್ದಾರೆ.

ಅವರ ಪ್ರಯತ್ನಗಳ ಹೊರತಾಗಿಯೂ, ಮೊಹಮ್ಮದ್ ರಿಜ್ವಾನ್ ಅವರು ಗ್ಲವ್ಸ್​​ ಮೂಲಕ ಕ್ರೀಸ್ ಮುಟ್ಟಲು ಸಾಧ್ಯವಾಗದ ಕಾರಣ ಸಿಂಗಲ್ ಅನ್ನು ನಿರಾಕರಿಸಲಾಯಿತು. ಇದೇ ಸಂದರ್ಭವೆಂದು ಶಿಖರ್ ಧವನ್ ಪಾಕಿಸ್ತಾನ ಆಟಗಾರನನ್ನು ಟ್ರೋಲ್ ಮಾಡಿದರು. ಕಬಡ್ಡಿ, ಕಬಡ್ಡಿ, ಕಬಡ್ಡಿ ಎಂದು ಶೀರ್ಷಿಕೆ ಕೊಟ್ಟರು. ಈ ಮೂಲಕ ಅವರು ಆಟಗಾರನ ಕಾಲೆಳೆದಿದ್ದರು.

ಕಳೆದ ವರ್ಷ ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್​​ಗೆ ಭಾರತ ತಂಡದಿಂದ ಹೊರಗುಳಿದಿದ್ದಕ್ಕೆ ಧವನ್ ಆಘಾತ ವ್ಯಕ್ತಪಡಿಸಿದ್ದರು “ಏಷ್ಯನ್ ಗೇಮ್ಸ್​ನಲ್ಲಿ ನನ್ನ ಹೆಸರು ಇಲ್ಲದಿದ್ದಾಗ ನನಗೆ ಸ್ವಲ್ಪ ಆಘಾತವಾಯಿತು. ಆದರೆ, ನಂತರ, ಅವರು ವಿಭಿನ್ನ ಆಲೋಚನಾ ಪ್ರಕ್ರಿಯೆಯನ್ನು ಹೊಂದಿದ್ದಾರೆಂದು ನಾನು ಭಾವಿಸಿದೆ. ನೀವು ಅದನ್ನು ಒಪ್ಪಿಕೊಳ್ಳಬೇಕು. ನನ್ನ ಭವಿಷ್ಯದ ಬಗ್ಗೆ ನಾನು ಯಾವುದೇ ಆಯ್ಕೆದಾರರೊಂದಿಗೆ ಮಾತನಾಡಿಲ್ಲ. ನಾನು ಎನ್​ಸಿಎಗೆ ಹೋಗುತ್ತಲೇ ಇರುತ್ತೇನೆ. ನಾನು ಅಲ್ಲಿ ನನ್ನ ಸಮಯವನ್ನು ಆನಂದಿಸುತ್ತೇನೆ. ಸೌಲಭ್ಯಗಳು ಉತ್ತಮವಾಗಿವೆ. ಎನ್ಸಿಎ ನನ್ನ ವೃತ್ತಿಜೀವನವನ್ನು ರೂಪಿಸಿದೆ. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಧವನ್ ಹೇಳಿದ್ದರು.

5ನೇ ಸ್ಥಾನಕ್ಕೆ ರಾಹುಲ್​-ಅಯ್ಯರ್​ ಮಧ್ಯೆ ಪೈಪೋಟಿ; ಬ್ಯಾಟಿಂಗ್​ ಅಂಕಿ ಅಂಶ ಹೇಗಿದೆ?

ಬೆಂಗಳೂರು: ಭಾರತ ಮತ್ತು ಇಂಗ್ಲೆಂಡ್(IND vs ENG)​ ನಡುವಣ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೆ.ಎಲ್ ರಾಹುಲ್(KL Rahul) ಬ್ಯಾಟರ್ ಮತ್ತು ವಿಕೆಟ್‌ಕೀಪರ್ ಆಗಿ ಆಡುತ್ತಾರೆಯೇ ಅಥವಾ ಟೀಮ್ ಇಂಡಿಯಾದಲ್ಲಿ ಅವರಿಗೆ ಸ್ಥಾನವಿಲ್ಲವೇ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ರಾಹುಲ್ ದಕ್ಷಿಣ ಆಫ್ರಿಕಾ ಟೆಸ್ಟ್‌ನಲ್ಲಿ ವಿಕೆಟ್‌ ಕೀಪಿಂಗ್‌ಗೆ ಪಾದರ್ಪಣೆ ಮಾಡಿದರೂ, ಇಬ್ಬರು ಶ್ರೇಷ್ಠ ಸ್ಪಿನ್ನರ್​ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ವಿರುದ್ಧ ರಾಹುಲ್​ ವಿಕೆಟ್ ಕೀಪಿಂಗ್ ಮಾಡಬಹುದೆಂದು ತಂಡದ ಮ್ಯಾನೇಜ್‌ಮೆಂಟ್ ನಂಬಿಕೆ ಇಟ್ಟಿಲ್ಲ. ಇದೇ ಕಾರಣಕ್ಕೆ ಆಯ್ಕೆ ಸಮಿತಿ ತಂಡ ಪ್ರಕಟಿಸುವಾಗ ರಾಹುಲ್​ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡುತ್ತಾರೆ ಎಂದು ಹೇಳಿತ್ತು. ರಾಹುಲ್​ ಕೀಪಿಂಗ್​ ನಡೆಸದಿದ್ದರೆ ಈ ಜವಾಬ್ದಾರಿ ಕೆ.ಎಸ್​ ಭರತ್​ಗೆ ಸಿಗಲಿದೆ. ಆಗ 5ನೇ ಸ್ಥಾನದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎನ್ನುವುದು ಸದ್ಯದ ಕುತೂಹಲ.

ಇದನ್ನೂ ಓದಿ : Team India: ಆಸ್ಟ್ರೇಲಿಯಾದಲ್ಲಿ ರಹಾನೆ ಸಾರಥ್ಯದ ಯಂಗ್‌ ಬ್ರಿಗೇಡ್‌ ಟೆಸ್ಟ್​ ಗೆದ್ದ ಸಂಭ್ರಮಕ್ಕೆ ತುಂಬಿತು ಮೂರು ವರ್ಷ

ಭರತ್​ ಅವರು ಕೀಪಿಂಗ್​ ನಡೆಸಿದರೆ, ಅಯ್ಯರ್(Shreyas Iyer)​ ಅಥವಾ ರಾಹುಲ್​ ಮಧ್ಯೆ ಯಾರು ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ? ಯಾರನ್ನು ಆಯ್ಕೆ ಮಾಡುವುದು ಎನ್ನುವುದು ಈಗ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕೆ.ಎಲ್ ರಾಹುಲ್ ತವರಿನ ಟೆಸ್ಟ್‌ಗಳಲ್ಲಿ ವಿಕೆಟ್ ಕೀಪಿಂಗ್​ ಮಾಡಿದ್ದರೆ, ಶ್ರೇಯಸ್ ಅಯ್ಯರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಖಚಿತ. ಆದರೆ, ಭರತ್​ ಕೀಪಿಂಗ್​ ಮಾಡಿದರೆ ರಾಹುಲ್​ ಮತ್ತು ಅಯ್ಯರ್​ ನಡುವೆ ಪೈಪೋಟಿ ಏರ್ಪಡಲಿದೆ.

ಉಭಯ ಆಟಗಾರರ ಅಂಕಿ ಅಂಶಗಳನ್ನು ನೋಡುವುದಾದರೆ, ಶ್ರೇಯಸ್ ಅಯ್ಯರ್ ತವರಿನಲ್ಲಿ ಇದುವರೆಗೆ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ 7 ಟೆಸ್ಟ್ ಪಂದ್ಯಗಳಲ್ಲಿ 39.09 ಸರಾಸರಿಯಲ್ಲಿ ಬ್ಯಾಟ್​ ಬೀಸಿ 430 ರನ್ ಗಳಿಸಿದ್ದಾರೆ. 1 ಶತಕವೂ ಒಳಗೊಂಡಿದೆ. ಕೆ.ಎಲ್ ರಾಹುಲ್ ಭಾರತದ ನೆಲದಲ್ಲಿ ಇದುವರೆಗೆ 16 ಟೆಸ್ಟ್‌ಗಳನ್ನು ಆಡಿ 40.13 ಸರಾಸರಿಯಲ್ಲಿ 923 ರನ್ ಗಳಿಸಿದ್ದಾರೆ. 1 ಶತಕ ಕೂಡ ಬಾರಿಸಿದ್ದಾರೆ. ಕಳೆದ ವರ್ಷ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ರಾಹುಲ್​ ತೀರಾ ಕಳಪೆ ಪ್ರದರ್ಶನ ತೋರಿ ಉಪನಾಯಕ ಸ್ಥಾನದ ಜತೆಗೆ ತಂಡದಿಂದ ಹೊರಬಿದ್ದಿದ್ದರು. ಆದರೆ ಈಗ ರಾಹುಲ್​ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ಅಯ್ಯರ್​ ಬ್ಯಾಟಿಂಗ್​ ಲಯ ಕಳೆದುಕೊಂಡಿದ್ದಾರೆ ಈ ನಿಟ್ಟಿನಲ್ಲಿ ರಾಹುಲ್​ಗೆ ಅವಕಾಶ ಸಿಗುವ ಸಾಧ್ಯತೆ ಅಧಿಕವಾಗಿದೆ.

Exit mobile version