Site icon Vistara News

Team India : ಮಾಡಿದ ತಪ್ಪಿಗೆ ಹೆದರಿ ಎಚ್​​ಐವಿ ಟೆಸ್ಟ್​ ಮಾಡಿಸಿಕೊಂಡಿದ್ದ ಶಿಖರ್​ ಧವನ್​; ಏನಾಗಿತ್ತು ಅವರಿಗೆ?

Shikhar Dhawan who had taken the HIV test because of his mistake; What happened to them?

#image_title

ನವ ದೆಹಲಿ: ಭಾರತ ತಂಡದ ಸ್ಟೈಲಿಸ್ಟ್​ ಆರಂಭಿಕ ಬ್ಯಾಟರ್​ ಶಿಖರ್ ಧವನ್​ಗೆ ಗಬ್ಬರ್​​ ಸಿಂಗ್​ ಎಂಬ ಹೆಸರೂ ಇದೆ. ಬೋಳು ತಲೆ, ಮೈಮೇಲೆಲ್ಲ ಟ್ಯಾಟೂ, ಹುರಿ ಮೀಸೆಯಿಂದ ಅವರು ಅತ್ಯಾಕರ್ಷಕವಾಗಿ ಕಾಣುವ ಕಾರಣ ಅವರನ್ನು ಆ ಹೆಸರಿನಿಂದ ಕರೆಯಲಾಗುತ್ತದೆ. ಮೈದಾನದಲ್ಲಿ ಮತ್ತು ಡ್ರೆಸಿಂಗ್​ ರೂಮ್​ನಲ್ಲಿಯೂ ಅವರು ತಮ್ಮ ಹಾವಭಾವಗಳಿಂದ ಎಲ್ಲರ ಗಮನ ಸೆಳೆಯುತ್ತಾರೆ. ಇಂಥ ಆಟಗಾರ ಇತ್ತೀಚೆಗೆ ಆಜ್​ತಕ್ ಚಾನೆಲ್​ ನಡೆಸುವ ಸೀದಿ ಬಾತ್​ ಕಾರ್ಯಕ್ರಮದಲ್ಲಿ ತಮ್ಮ ಜೀವನದಲ್ಲಿ ನಡೆದ ಹಲವು ಸಂಗತಿಗಳನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಅವರು ತಾವು ಮಾಡಿರುವ ತಪ್ಪೊಂದಕ್ಕೆ ಪ್ರಾಯಶ್ಚಿತವಾಗಿ ಎಚ್​ಐವಿ ಪರೀಕ್ಷೆ ಮಾಡಿಸಿರುವುದಾಗಿ ಹೇಳಿಕೊಂಡಿದ್ದಾರೆ!

ಅಂದ ಹಾಗೆ ಶಿಖರ್ ಧವನ್ ಮಾಡಬಾರದ ತಪ್ಪನ್ನೇನೂ ಮಾಡಿಲ್ಲ. ಆದರೆ, ಎಚ್​​​ಐವಿ ಟೆಸ್ಟ್ ಮಾಡಿಸಿಕೊಳ್ಳುವುದಕ್ಕೆ ಕಾರಣ ಅವರ ಬೆನ್ನ ಮೇಲೆ ಇರುವ ಟ್ಯಾಟೂ. ಸ್ಟೈಲ್​ಗಾಗಿ ಮೈಮೇಲೆಲ್ಲ ಟ್ಯಾಟೂ ಹಾಕಿಸಿಕೊಂಡಿರುವ ಅವರು ಯೌವನದಲ್ಲೇ ಹೋದಲೆಲ್ಲ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದರು. ಅಂತೆಯೇ ಅವರು ಗೆಳೆಯರ ಜತೆ ಪ್ರವಾಸಕ್ಕೆ ಹೋಗಿದ್ದ ವೇಳೆ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು. ಆದರೆ ಹಚ್ಚೆ ಹಾಕಿಸಿಕೊಳ್ಳುವ ಮೊದಲು ತನ್ನ ತಂದೆಯ ಬಳಿ ಅನುಮತಿ ಕೇಳಿರಲಿಲ್ಲ. ಹೀಗಾಗಿ ತಂದೆ ಹೊಡೆಯುವರೆಂಬ ಭಯ ಉಂಟಾಗಿತ್ತು. ಪ್ರವಾಸದಿಂದ ತಿರುಗಿ ಬಂದ ಬಳಿಕ ಸಾಕಷ್ಟು ದಿನ ಮನೆಯಲ್ಲಿ ಯಾರಿಗೂ ಗೊತ್ತಾಗದೇ ಹಾಗೆ ವಿಷಯವನ್ನು ಗುಟ್ಟಾಗಿ ಕಾಪಾಡಿಕೊಂಡಿದ್ದರು. ಆದರೆ, ಕೊನೆಗೂ ವಿಷಯ ಬಹಿರಂಗವಾಗಿತ್ತು. ಕೋಪಗೊಂಡ ತಂದೆ ಬೆನ್ನ ಮೇಲೆ ಎರಡೇಟು ಬಾರಿಸಿದ್ದರು.

ತಂದೆಯಿಂದ ಏಟು ತಿಂದಾದ ಬಳಿಕ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಕಂಡಕಂಡಲೆಲ್ಲ ಟ್ಯಾಟೂ ಹಾಕಿಸುವುದು ಸುರಕ್ಷಿತವಲ್ಲ ಎಂಬುದು ಗೊತ್ತಾಗಿದೆ. ಸೂಜಿಗಳ ಬಳಕೆ ಮಾಡುವಾಗ ಯಾಮಾರಿದ್ದರೆ ಎಚ್​ಐವಿ ಗ್ಯಾರಂಟಿ ಎಂಬ ಭಯ ಉಂಟಾಗಿದೆ. ಹೀಗಾಗಿ ಅವರು ಎಚ್​​ಐವಿ ಪರೀಕ್ಷೆಗೆ ಒಳಗಾಗಿದ್ದಾರೆ. ಈ ವಿಷಯವನ್ನು ಅವರು ಸೀದಿ ಬಾತ್​ ಕಾರ್ಯಕ್ರಮದಲ್ಲಿ ಬಹಿರಂಗ ಮಾಡಿದ್ದಾರೆ. ಇದೇ ವೇಳೆ ಅವರು ನಾನು ಎಚ್​ಐವಿ ನೆಗೆಟಿವ್​. ನನ್ನ ಬಳಿ ರಿಪೋರ್ಟ್​ ಕೂಡ ಇದೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ.

ವಿಚ್ಛೇದನದ ಕುರಿತೂ ಮಾತನಾಡಿದ ಶಿಖರ್​

ಸೀದಿ ಬಾರ್​ ಕಾರ್ಯಕ್ರಮದಲ್ಲಿ ತಮ್ಮ ಮಾಜಿ ಪತ್ನಿ ಆಸ್ಟ್ರೇಲಿಯಾ ಪ್ರಜೆ ಆಯೆಷಾ ಮುಖರ್ಜಿ ಜತೆಗಿನ ವಿಚ್ಛೇದನ ವಿಚಾರವನ್ನು ಮಾತನಾಡಿದ್ದಾರೆ. ಪ್ರೀತಿಯ ಬಲೆಯಲ್ಲಿ ಬಿದ್ದಾಗ ಏನೂ ಕಾಣಿಸಲಿಲ್ಲ. ಈಗ ಎಲ್ಲವೂ ಅರಿವಿಗೆ ಬಂದಿದೆ. ಆದರೆ, ಯಾರತ್ತವೂ ಬೊಟ್ಟು ಮಾಡುವುದಿಲ್ಲ ಎಂಬುದಾಗಿ ನುಡಿದಿದ್ದಾರೆ.

ಇದನ್ನೂ ಓದಿ : Shikhar Dhawan: ನಾನು ಆಯ್ಕೆಗಾರನಾಗಿದ್ದರೆ ಶುಭಮನ್​ ಗಿಲ್​ಗೆ ಮೊದಲ ಆದ್ಯತೆ ನೀಡುತ್ತಿದ್ದೆ: ಶಿಖರ್​ ಧವನ್

ಶಿಖರ್​​​ ಧವನ್‌ ಮತ್ತು ಆಯೆಷಾ ಮುಖರ್ಜಿ (Shikhar Dhawan and Ayesha Mukherjee) ಅವರು 2021ರ ಸೆಪ್ಟೆಂಬರ್​ನಲ್ಲಿ ವಿಚ್ಛೇದನ ಪಡೆದಿದ್ದರು. ತಮ್ಮ ವಿಚ್ಛೇದನದ ವಿಷಯವನ್ನು ಆಯೆಷಾ ಅವರು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದರು. ಆ ಮೂಲಕ ಈ ಜೋಡಿಯ 8 ವರ್ಷಗಳ ದಾಂಪತ್ಯ ಜೀವನ ಮುರಿದುಬಿದ್ದಿತ್ತು. ಈ ಘಟನೆ ನಡೆದು ಒಂದೂವರೆ ವರ್ಷದ ಬಳಿಕ ಪತ್ನಿಯಿಂದ ಬೇರ್ಪಟ್ಟ ಕುರಿತು ಶಿಖರ್​ ಧವನ್ ಮುಕ್ತವಾಗಿ ಮಾತನಾಡಿದ್ದಾರೆ.

ಆಯೇಷಾ ತಮಗಿಂತ 10 ವರ್ಷ ದೊಡ್ಡವರು ಎಂಬ ವಿಷಯ ಗೊತ್ತಿದ್ದರೂ ಶಿಖರ್​ ಅವರನ್ನು ಮದುವೆಯಾಗಿದ್ದರು. ಮೊದಲ ವೈವಾಹಿಕ ಜೀವನದಲ್ಲಿ ಇಬ್ಬರು ಮಕ್ಕಳನ್ನು ಹೊಂದಿರುವ ಆಯೇಷಾ, ಧವನ್ ಜತೆಗಿನ ಸಂಬಂಧದಲ್ಲೂ ಜೊರಾವರ್ ಎಂಬ ಪುತ್ರನನ್ನು ಹೊಂದಿದ್ದಾರೆ.

ಮದುವೆ ವಿಚಾರದಲ್ಲಿ ನಾನು ಎಡವಿದ್ದೇನೆ. ನಾನೇ ಈ ನಿರ್ಧಾರ ತೆಗೆದುಕೊಂಡ ಕಾರಣ, ಬೇರೆಯವರತ್ತ ಬೆರಳು ತೋರಿಸಲು ಬಯಸುವುದಿಲ್ಲ. ಮದುವೆ ವಿಚಾರದಲ್ಲಿ ಸರಿಯಾದ ಸಲಹೆಯನ್ನು ಪಡೆದ ಬಳಿಕವೇ ಮುಂದುವರಿದರೆ ಒಳಿತು. ಇಲ್ಲವಾದಲ್ಲಿ ಆ ಬಳಿಕ ಹಲವು ಸಮಸ್ಯೆಗಳು ಎದುರಾಗಬಹುದು ಎಂದು ಹೇಳಿದ್ದಾರೆ.

“ವಿಚ್ಛೇದನ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಈ ಪ್ರಕರಣ ನಡೆಯುತ್ತಲೇ ಇದೆ ಎಂದು ಬಹಿರಂಗಪಡಿಸಿದ್ದಾರೆ. ಜತೆಗೆ ಮರು ಮದುವೆಯಾಗುವ ವಿಚಾರವನ್ನೂ ತಳ್ಳಿ ಹಾಕಿದ್ದು, ಸದ್ಯಕ್ಕೆ ಯಾವುದೇ ಯೋಚನೆ ಮಾಡುತ್ತಿಲ್ಲ. ಒಂದೊಮ್ಮೆ ಮುಂದಿನ ದಿನಗಳಲ್ಲಿ ನಾನು ಮತ್ತೆ ಮದುವೆಯಾಗಲು ಬಯಿಸಿದರೆ, ಈ ವಿಚಾರದಲ್ಲಿ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನ ಜೀವನವನ್ನು ನಾನು ಯಾರೊಂದಿಗೆ ಕಳೆಯಬಹುದು. ಹೇಗೆ ಇರಬೇಕು ಎಂಬುದನ್ನು ಮನವರಿಕೆ ಮಾಡಿಕೊಂಡ ಬಳಿಕ ಅಂತಿಮ ನೀರ್ಧಾರ ಕೈಗೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಮದುವೆಗೂ ಮುನ್ನ ಯಾವುದೇ ನಿರ್ಬಂಧ ಇರಲಿಲ್ಲ

ಮದುವೆಗೂ ಮುನ್ನ ನಾನು ಯಾರ ಜತೆಯಲ್ಲೂ ರಿಲೇಷನ್​​ಶಿಪ್​​​​ನಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ಸಖತ್​ ಎಂಜಾಯ್​ ಮಾಡುತ್ತಿದ್ದೆ. ಮೋಜು ಮಾಡುತ್ತಿದ್ದೆ. ತುಂಬಾ ಖುಷಿಯ ದಿನಗಳನ್ನು ಕಳೆದೆ. ಪ್ರೀತಿಯಲ್ಲಿ ಬೀಳುವುದಕ್ಕೂ ಮುನ್ನ ನನಗೆ ಯಾವುದೇ ರೆಡ್​ ಸಿಗ್ನಲ್​ ಬಿದ್ದಿರಲಿಲ್ಲ. ಆದರೆ ಪ್ರೀತಿಯಲ್ಲಿ ಬಿದ್ದ ನಂತರ ಪ್ರತಿ ಕ್ಷಣವೂ ರೆಡ್​ ಸಿಗ್ನಲ್​ ಬೀಳುತ್ತಿತ್ತು. ಆದ್ದರಿಂದ ಆರಂಭದಲ್ಲೇ ಈ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕೊನೆಗೆ ಪಶ್ಚಾತ್ತಾಪ ಪಡುವುದು ನಾವೇ ಎಂದು ಧವನ್​ ಹೇಳಿದರು.

Exit mobile version