Site icon Vistara News

Shikhar Dhawan: ಭಾರತ ವಿಶ್ವಕಪ್​ ಗೆಲ್ಲಲಿ ಎಂದು ಭಾರತೀಯರ ಹೃದಯ ಗೆದ್ದ ಧವನ್​

shikhar dhawan

ನವದೆಹಲಿ: ಏಕದಿನ ವಿಶ್ವಕಪ್(ICC World Cup 2023)​ ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಪಂದ್ಯ ಅಕ್ಟೋಬರ್​ 8ರಂದು ಚೆನ್ನೈಯಲ್ಲಿ ನಡೆಯಲಿದೆ. ವಿಶ್ವಕಪ್​ನಲ್ಲಿ ಸ್ಥಾನ ಸಿಗದಿದ್ದರೂ ಎಡಗೈ ಬ್ಯಾಟರ್​ ಶಿಖರ್​ ಧವನ್(Shikhar Dhawan)​ ಅವರು ನಿಷ್ಕಲ್ಮಶ ಮನಸ್ಸಿನಿಂದ ಭಾರತ ತಂಡಕ್ಕೆ ಹಾರೈಸಿದ್ದಾರೆ. “ಚಕ್ ದೇ ಇಂಡಿಯಾ! ಜಗತ್ತನ್ನು ನೀಲಿ ಬಣ್ಣ ಮಾಡೋಣ ಹುಡುಗರೇ! ನಿಮ್ಮ ವಿಶ್ವಕಪ್ ಪಯಣಕ್ಕೆ ಶುಭವಾಗಲಿ. ಟ್ರೋಫಿಯನ್ನು ಮನೆಗೆ ತನ್ನಿ ಎಂದು ಟ್ವಿಟರ್​ನಲ್ಲಿ ಬರೆದಿದ್ದಾರೆ. ಈ ಮೂಲಕ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ.

ಉತ್ತಮ ಫಾರ್ಮ್​ನಲ್ಲಿದ್ದರೂ ಕಳೆದ ಒಂದು ವರ್ಷಗಳಿಂದ ಧವನ್​ ಅವರಿಗೆ ಭಾರತ ತಂಡದಲ್ಲಿ ಅವಕಾಶ ನೀಡದೆ ಕಡೆಗಣಿಸಲಾಗಿದೆ. ಆದರೂ ಈ ವಿಚಾರದ ಬಗ್ಗೆ ಧವನ್​ ಇದುವರೆಗೆ ಆಯ್ಕೆ ಸಮಿತಿಯ ಬಗ್ಗೆಯಾಗಲಿ ಬಿಸಿಸಿಐ ವಿರುದ್ಧವೂ ಯಾವುದೇ ಆಕ್ಷೇಪ ಮತ್ತು ಆರೋಪವನ್ನು ಮಾಡಿಲ್ಲ. ಭಾರತ ತಂಡ ವಿಶ್ವಕಪ್​ ಗೆಲ್ಲಬೇಕು ಎನ್ನುವುದು ಅವರ ಕನಸಗಿದೆ.

ದೇವರಲ್ಲಿ ಪ್ರಾರ್ಥನೆ

ಕೆಳವು ದಿನಗಳ ಹಿಂದೆ ಧವನ್​ ಅವರು ಉಜ್ಜಯಿನಿಯ(Ujjain) ಬಾಬಾ ಮಹಾಕಾಳೇಶ್ವರದ ಜ್ಯೋತಿರ್ಲಿಂಗ (Mahakaleshwar Temple) ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಧವನ್, “ನಾನು ದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಮತ್ತು ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಟೀಮ್​ ಇಂಡಿಯಾದ ಯಶಸ್ಸಿಗೆ ಪ್ರಾರ್ಥಿಸಿದ್ದೇನೆ. ಭಾರತ ವಿಶ್ವಕಪ್ ಗೆಲ್ಲಲಿ ಎಂಬುದು ಎಲ್ಲರ ಆಶಯವಾಗಿದ್ದು, ನಾನು ಕೂಡ ಅದೇ ಹಾರೈಕೆಯನ್ನು ಮಾಡುತ್ತೇನೆ” ಎಂದು ಹೇಳಿದ್ದರು.

ಕಳೆದ ವಿಶ್ವಕಪ್​ನಲ್ಲಿ ಶತಕ

ಶಿಖರ್​ ಧವನ್​ ಅವರು 2013 ಹಾಗೂ 2017ರ ಚಾಂಪಿಯನ್ಸ್ ಟ್ರೋಫಿ, 2015ರ ವಿಶ್ವಕಪ್ ಟೂರ್ನಿ ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಅಮೋಘ ಪ್ರದರ್ಶನ ತೋರಿದ್ದರು. 2019ರಲ್ಲಿ ಲಂಡನ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದ್ದರು. ಆದರೆ ಅದೇ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದಾದ ಬಳಿಕ ಅವರಿಗೆ ಸರಿಯಾದ ಅವಕಾಶ ಸಿಗಲೇ ಇಲ್ಲ.

ಇದನ್ನೂ ಓದಿ ICC World Cup 2023: ಮಳೆ ಬಂದರೆ ವಿಶ್ವಕಪ್​ನಲ್ಲಿ ಮೀಸಲು ದಿನ ಇದೆಯೇ? ಐಸಿಸಿ ಕೈಗೊಂಡ ನಿರ್ಧಾರ ಏನು?

ಶಿಖರ್​ ಧವನ್​ ಅವರು ಭಾರತ ಪರ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್​ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್​ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್​ 68 ಪಂದ್ಯ ಆಡಿ 1759 ರನ್​ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ.

ವಿಚ್ಛೇದನ ಪುರಸ್ಕರಿಸಿದ ದಿಲ್ಲಿ ಕೋರ್ಟ್

ಧವನ್ (Shikhar Dhawan) ಹಾಗೂ ಪತ್ನಿ ಆಯೆಷಾ ಮುಖರ್ಜಿ ನಡುವಿನ ವಿಚ್ಛೇದನ ಪ್ರಕರಣವನ್ನು ದೆಹಲಿಯ ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿದೆ. ನ್ಯಾಯಾಧೀಶ ಹರೀಶ್ ಕುಮಾರ್ ಅವರು ಧವನ್​ ತಮ್ಮ ಹೆಂಡತಿಯ ವಿರುದ್ಧದ ವಿಚ್ಛೇದನ ಅರ್ಜಿಯಲ್ಲಿ ಮಾಡಿದ ಎಲ್ಲ ಆರೋಪಗಳನ್ನು ಒಪ್ಪಿಕೊಂಡರು. ಪತ್ನಿ ಈ ಆರೋಪಗಳನ್ನು ಪ್ರಶ್ನಿಸಲಿಲ್ಲ ಮತ್ತು ತನ್ನನ್ನು ಸಮರ್ಥಿಸಿಕೊಳ್ಳಲು ವಿಫಲರಾಗಿರುವ ಕಾರಣ ನ್ಯಾಯಾಲಯ ಈ ಪ್ರಕರಣವನ್ನು ಪುರಸ್ಕರಿಸಿದೆ.

Exit mobile version