Site icon Vistara News

IND VS SA | ಕೇರಳದ ಅನಂತಪದ್ಮನಾಭ ಸ್ವಾಮಿ ದೇಗುಲ ಪ್ರವೇಶಿಸಿದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ

IND vs SA

ತಿರುವನಂತಪುರ : ಮೂರು ಪಂದ್ಯಗಳ ಟಿ೨೦ ಸರಣಿ ಹಾಗೂ ಅಷ್ಟೇ ಪಂದ್ಯಗಳ ಏಕ ದಿನ ಪಂದ್ಯಗಳ ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಪ್ರವಾಸ ಬಂದಿದೆ. ಮೊದಲ ಪಂದ್ಯ ಕೇರಳದ ತಿರುವನಂತಪುರದಲ್ಲಿ ನಡೆಯಲಿದ್ದು, ಹೀಗಾಗಿ ಆಟಗಾರರು ಈಗಾಗಲೇ ಅಲ್ಲಿಗೆ ತಲುಪಿದ್ದಾರೆ. ಅವರಲ್ಲೊಬ್ಬರು ಆಟಗಾರ ಕೇರಳದ ಸುಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ದೇಗುಲಕ್ಕೆ ಭೇಟಿ ನೀಡಿದವರು ಆ ತಂದ ಬೌಲಿಂಗ್‌ ಆಲ್‌ರೌಂಡರ್‌ ಕೇಶವ್‌ ಮಹಾರಾಜ್‌. ತಾವು ದೇಗುಲಕ್ಕೆ ಭೇಟಿ ನೀಡಿದ ಚಿತ್ರವನ್ನು ಅವರು ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ನಲ್ಲಿ ಹಾಕಿದ್ದಾರೆ. ಅಲ್ಲದೇ, ಭಾರತೀಯರಿಗೆಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಕೇಶವ್‌ ಮಹಾರಾಜ್‌ ಅವರು ಸಾಂಪ್ರದಾಯಿಕ ದಿರಿಸಿನಲ್ಲಿ ಅಲ್ಲಿಗೆ ಭೇಟಿ ಕೊಟ್ಟಿರುವುದು ವಿಶೇಷ ಎನಿಸಿತ್ತು.

ಕೇಶವ್‌ ಮಹಾರಾಜ್‌ ಅವರು ಉತ್ತರ ಪ್ರದೇಶ ಮೂಲದವಾಗಿದ್ದರು, ಅವರು ಪೂರ್ವಜರು ಶತಮಾನದ ಹಿಂದೆ ಅಲ್ಲಿಗೆ ತೆರಳಿ ನೆಲೆ ಕಂಡಿದ್ದಾರೆ. ಅಲ್ಲಿಯೂ ಅವರು ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದಾರೆ. ಹೀಗಾಗಿ ಅವರು ಕೇರಳಕ್ಕೆ ಬಂದವರೇ ಅನಂತಪದ್ಮನಾಭ ಸ್ವಾಮಿ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ | Virat Kohli | ಪ್ರಶಸ್ತಿ ಪಡೆದುಕೊಂಡು ಮಗುವಿನಂತೆ ಓಡಿದ ವಿರಾಟ್‌ ಕೊಹ್ಲಿ, ನಗೆಯುಕ್ಕಿಸಿದ ಸ್ಟಾರ್ ಬ್ಯಾಟರ್‌

Exit mobile version