Site icon Vistara News

Indian Cricket Team : ರೋಹಿತ್​ ಶರ್ಮಾ, ವಿರಾಟ್​ಕೊಹ್ಲಿ ಪರ ಧ್ವನಿ ಎತ್ತಿದ ಸ್ಪಿನ್ನರ್ ಆರ್​. ಅಶ್ವಿನ್​

ಚೆನ್ನೈ : ವಿರಾಟ್​ ಕೊಹ್ಲಿ ಹಾಗೂ ರೋಹಿತ್ ಶರ್ಮ ನೇತೃತ್ವದಲ್ಲಿ ಭಾರತ ತಂಡ (Indian Cricket Team) ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ ಎಂಬ ಟೀಕೆಗಳು ನಿರಂತರವಾಗಿ ಕೇಳಿ ಬರುತ್ತಿವೆ. ವಿರಾಟ್​ ಕೊಹ್ಲಿ ವಿಶ್ವ ಕಪ್​ ಗೆಲ್ಲಲು ಸಾಧ್ಯವಾಗದೇ ನಾಯಕತ್ವಕ್ಕೆ ವಿದಾಯವನ್ನೂ ಹೇಳಿದ್ದಾರೆ. ಇದೀಗ ರೋಹಿತ್​ ಶರ್ಮ ಸರದಿ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್​ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್​ನಲ್ಲಿ ಸೋಲುವ ಮೂಲಕ ಹೊರಬಿದ್ದಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಭಾರತದ ಅತಿಥ್ಯದಲ್ಲಿ ಏಕ ದಿನ ವಿಶ್ವ ಕಪ್​ ನಡೆಯಲಿದೆ. ಹೀಗಾಗಿ ರೋಹಿತ್​ ನಾಯಕತ್ವ ಮತ್ತೊಮ್ಮೆ ಪರೀಕ್ಷಗೆ ಒಳಪಡಲಿದೆ. ಈ ವಿಷಯದ ಕುರಿತು ಮಾತನಾಡಿದ ಆರ್​. ಅಶ್ವಿನ್​, ವಿಶ್ವ ಕಪ್​ ಗೆಲ್ಲದಿರುವುದಕ್ಕೆ ನಾಯಕರನ್ನು ತೆಗಳುವ ಕ್ರಮ ಸರಿಯಲ್ಲ ಎಂದು ಹೇಳಿದ್ದಾರೆ.

ಐಸಿಸಿ ಟ್ರೋಫಿಗಳನ್ನು ಗೆಲ್ಲುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದಕ್ಕಾಗಿ ಸಾಕಷ್ಟು ವರ್ಷಗಳನ್ನು ಕಾಯಬೇಕಾಗುತ್ತದೆ. ಹಲವು ಪ್ರಯತ್ನಗಳನ್ನು ನಡೆಸಬೇಕಾಗುತ್ತದೆ. 1983ರಲ್ಲಿ ಭಾರತ ತಂಡ ವಿಶ್ವ ಕಪ್​ ಗೆದ್ದ ನಂತರದ ವಿಶ್ವ ಕಪ್​ ಗೆದ್ದಿರುವುದು 2007ರಲ್ಲಿ ಟಿ20 ವಿಶ್ವ ಕಪ್. ಇದೊಂದು ಸುದೀರ್ಘ ಹೋರಾಟದ ಫಲ ಎಂದು ಅಶ್ವಿನ್ ತಮ್ಮ ಯೂಟ್ಯೂಚ್​ ಚಾನೆಲ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | R Ashwin | ಟೀಮ್​ ಇಂಡಿಯಾದ ಸ್ಪಿನ್​ ಬೌಲರ್​​ ಆರ್​ ಅಶ್ವಿನ್​ ಅವರ ಟೆಸ್ಟ್​ ಬೌಲಿಂಗ್​ ಸಾಧನೆ ಈ ರೀತಿ ಇದೆ

ಸಚಿನ್​ ತೆಂಡೂಲ್ಕರ್ ಅವರು 1992, 1996, 1999, 2003 ಹಾಗೂ 2007ರ ಏಕ ದಿನ ವಿಶ್ವ ಕಪ್​ನಲ್ಲಿ ಆಡಿ ವಿಶ್ವ ಕಪ್​ ಗೆದ್ದಿರಲಿಲ್ಲ. ಆದರೆ, 2011ರಲ್ಲಿ ಧೋನಿ ನಾಯಕತ್ವದಡಿ ಅವರು ಚಾಂಪಿಯನ್​ ಪಟ್ಟ ಅಲಂಕರಿಸಿದರು. ಹಾಗೆಂದು ಎಲ್ಲರಿಗೂ ಬಂದ ತಕ್ಷಣವೇ ಟ್ರೋಫಿ ಸಿಗುವುದಿಲ್ಲ. ಮಹೇಂದ್ರ ಸಿಂಗ್​ ಧೋನಿಗೆ ಮಾತ್ರ ಅದು ಸಾಧ್ಯವಾಯಿತು ಎಂಬುದಾಗಿ ಅಶ್ವಿನ್​ ನುಡಿದಿದ್ದಾರೆ.

Exit mobile version