Site icon Vistara News

INDvsAUS : ವೆಂಕಟೇಶ್​ ಪ್ರಸಾದ್​ಗೆ ಒಂದೇ ಮಾತಿನಲ್ಲಿ ತಿರುಗೇಟು ಕೊಟ್ಟ ಸುನೀಲ್​ ಶೆಟ್ಟಿ; ಏನಂದರು ಅವರು?

Sunil Shetty hit back at Venkatesh Prasad in one word; What are they?

ಮುಂಬಯಿ: ಭಾರತ ತಂಡದ ವಿಕೆಟ್​ಕೀಪರ್ ಬ್ಯಾಟರ್​ ಕೆ. ಎಲ್​ ರಾಹುಲ್​ ವಿರುದ್ಧ ಮಾಜಿ ಕ್ರಿಕೆಟಿಗ ವೆಂಕಟೇಶ್​ ಮಾಡಿರುವ ಟೀಕೆಗಳ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ರಾಹುಲ್​ ಅಜೇಯ 75 ರನ್​ ಬಾರಿಸಿದ ತಕ್ಷಣ ಬಹುತೇಕ ಮಂದಿ ವೆಂಕಟೇಶ್​ ಪ್ರಸಾದ್​ಗೆ ತಿರುಗೇಟು ಕೊಟ್ಟಿದ್ದಾರೆ. ಆದರೆ, ಟೀಕೆಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದ ವೆಂಕಟೇಶ್​ ಪ್ರಸಾದ್​, ಕೆ. ಎಲ್​ ರಾಹುಲ್ ಅವರ ಪ್ರದರ್ಶನವನ್ನು ಟ್ವೀಟ್ ಮಾಡಿ ಕೊಂಡಾಡಿದ್ದರು. ಇದೆಲ್ಲವೂ ಮುಗಿದ ಬಳಿಕ ಇದೀಗ ಕೆ. ಎಲ್​ ರಾಹುಲ್ ಅವರ ಮಾವ ಸುನೀಲ್​ ಶೆಟ್ಟಿ ವೆಂಕಟೇಶ್​ ಪ್ರಸಾದ್​ ಪರೋಕ್ಷೆ ಹೇಳಿಕೆ ನೀಡುವ ಮೂಲಕ ಟೀಕೆ ಮಾಡಿದ್ದಾರೆ. ನಿಮ್ಮ ಮಾತಿಗೆ ಯಾವುದೇ ಬೆಲೆಯಿಲ್ಲ ಎಂಬರ್ಥದಲ್ಲಿ ಹೇಳಿಕೆ ಕೊಟ್ಟಿದ್ದಾರೆ.

ಸುನೀಲ್​ ಶೆಟ್ಟಿ ಪ್ರತಿಕ್ರಿಯೆ ಹೀಗಿತ್ತು

ಮುಂಬಯಿಯಲ್ಲಿ ಸುನೀಲ್ ಶೆಟ್ಟಿ ಎದುರು ಸಿಕ್ಕಾಗ ಪತ್ರಕರ್ತರು ರಾಹುಲ್ ಅವರ ಪ್ರದರ್ಶನದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದೇ ವೇಳೆಗೆ ವೆಂಕಟೇಶ್​ ಪ್ರಸಾದ್ ಅವರ ಟೀಕೆಯ ಬಗ್ಗೆಯೂ ಕೇಳಿದ್ದರು. ಅದಕ್ಕೆ ನಿರುಮ್ಮಳವಾಗಿ ಉತ್ತರಿಸಿದ ಸುನೀಲ್​ ಶೆಟ್ಟಿ, ಮೇಲಿರುವ ದೇವರು ಎಲ್ಲವನ್ನೂ ನೋಡುತ್ತಿದ್ದಾನೆ. ಅಂಥದ್ದರಲ್ಲಿ. ಹೊರಗಿರುವ ವ್ಯಕ್ತಿಗಳು ಏನೇ ಟೀಕೆ ಮಾಡಿದರೂ ಅದಕ್ಕೆ ಬೆಲೆಯಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ಈ ಮೂಲಕ ವೆಂಕಟೇಶ್​ ಪ್ರಸಾದ್ ಅವರ ಟೀಕೆಗಳಿಗೆ ಕಿಮ್ಮತ್ತಿಲ್ಲ. ನಮಗೆ ದೇವರ ವರವಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ.

ಟೀಕೆಗೆ ಒಳಗಾಗಿದ್ದ ರಾಹುಲ್​

ಕೆ. ಎಲ್​ ರಾಹುಲ್​ ಕಳೆದ ಕೆಲವು ದಿನಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರಲಿಲ್ಲ. ಬಾಂಗ್ಲಾದೇಶ ಪ್ರವಾಸ, ಶ್ರೀಲಂಕಾ ವಿರುದ್ಧದ ಸರಣಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಸತತವಾಗಿ ವೈಫಲ್ಯ ಎದುರಿಸಿದ್ದರು. ಈ ಬಗ್ಗೆ ಟೀಕೆ ವ್ಯಕ್ತಗೊಂಡ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಎರಡನೇ ಪಂದ್ಯದ ಬಳಿಕ ರಾಹುಲ್ ಅವರ ಉಪನಾಯಕ ಪಟ್ಟವನ್ನು ವಾಪಸ್​ ಪಡೆಯಲಾಗಿತ್ತು. ಜತೆಗೆ ತಂಡದಲ್ಲಿ ಆಡುವ ಅವಕಾಶವನ್ನೂ ನೀಡಿರಲಿಲ್ಲ. ಇದೇ ವೇಳೆ ರಾಹುಲ್ ಅವರ ಬಗ್ಗೆ ಸತತವಾಗಿ ಟೀಕೆಗಳು ವ್ಯಕ್ತಗೊಂಡಿದ್ದವರು. ಆದರೆ, ಟೀಕಾಕಾರರಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಂತಿದ್ದ ವೆಂಕಟೇಶ್ ಪ್ರಸಾದ್​ ಅವರು ಹೇಳಿಕೆಗಳನ್ನು ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಆಕಾಶ್​ ಚೋಪ್ರಾ ಹೇಳಿಕೆ ನೀಡಿದ್ದರು ಅವರಿಬ್ಬರ ನಡುವಿನ ವಾದ- ವಿವಾದ ಜೋರಾಗಿ ನಡೆದು ಕೊನೆಗೆ ಮಾವ ಸುನೀಲ್​ ಶೆಟ್ಟಿಯ ತನಕ ಮುಂದುವರಿದಿತ್ತು. ಹೀಗಾಗಿ ಪತ್ರಕರ್ತರು ಸುನೀಲ್​ ಶೆಟ್ಟಿಗೆ ಪ್ರಶ್ನೆ ಕೇಳಿದ್ದರು. ಅದಕ್ಕವರು ದೇವರಿದ್ದಾನೆ ಎಂದು ಪ್ರಶ್ನೆ ಉತ್ತರ ಕೊಟ್ಟಿದ್ದರು.

ಇದನ್ನೂ ಓದಿ : INDvsAUS : ಭಾರತ ತಂಡಕ್ಕೆ ಐದು ವಿಕೆಟ್ ವಿಜಯ, ಅಜೇಯ 75 ರನ್​ ಬಾರಿಸಿದ ಕೆ. ಎಲ್​ ರಾಹುಲ್​

ಇಷ್ಟಾದರೂ ಕೆ. ಎಲ್​ ರಾಹುಲ್​ ಎರಡನೇ ಪಂದ್ಯದಲ್ಲಿ ಉತ್ತಮವಾಗಿ ಆಡಿರಲಿಲ್ಲ. 9 ರನ್​ ಬಾರಿಸಿ ಅವರು ಔಟಾಗಿದ್ದಾರೆ. ಅದೇ ರೀತಿ 117 ರನ್​ಗಳಿಗೆ ಭಾರತ ತಂಡ ಆಲ್​ಔಟ್​ ಆಗಿತ್ತು. ಆಸ್ಟ್ರೇಲಿಯಾ ತಂಡ ವಿಕೆಟ್ ನಷ್ಟವಿಲ್ಲದೆ 121 ರನ್​ ಬಾರಿಸಿ ವಿಜಯ ಸಾಧಿಸಿತ್ತು.

Exit mobile version