Site icon Vistara News

Suryakumar Yadav : ಪಿಚ್​ ಹೇಗಿದ್ದರೂ ಸರಿ ಎಂದು ಲಖನೌ ಪಿಚ್​ ವಿವಾದ ತಣ್ಣಗಾಗಿಸಿದ ಸೂರ್ಯಕುಮಾರ್​

suryakumar yadav

ಅಹಮದಾಬಾದ್​ : ಭಾರತ ಹಾಗೂ ಪ್ರವಾಸಿ ನ್ಯೂಜಿಲ್ಯಾಂಡ್​ ವಿರುದ್ಧದ ಮೂರನೇ ಟಿ20 ಪಂದ್ಯ ಬುಧವಾರ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಈ ಸರಣಿಯಲ್ಲಿ ಇತ್ತಂಡಗಳು ತಲಾ ಒಂದು ಪಂದ್ಯ ಗೆದ್ದಿರುವ ಕಾರಣ ಕೊನೇ ಪಂದ್ಯ ಹೆಚ್ಚು ಪೈಪೋಟಿಯಿಂದ ಕೂಡಿರಲಿದೆ. 1 ಲಕ್ಷಕ್ಕೂ ಮಿಕ್ಕಿ ಅಭಿಮಾನಿಗಳನ್ನು ಹೊಂದುವ ಸಾಮರ್ಥ್ಯ ಇರುವ ಈ ಸ್ಟೇಡಿಯಮ್​ನಲ್ಲಿ ಭರ್ಜರಿ ಮ್ಯಾಚ್ ನಡೆಯುವುದು ಖಾತರಿ. ಇವೆಲ್ಲದರ ನಡುವೆ ಹಿಂದಿನ ಲಖನೌ ಪಿಚ್​ನ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನವನ್ನು ಭಾರತ ತಂಡದ ಉಪನಾಯಕ ಸೂರ್ಯಕುಮಾರ್​ ಮಾಡಿದ್ದಾರೆ. ಪಿಚ್​ ಹೇಗಿದ್ದರೂ ಸರಿ ಸ್ಪರ್ಧಾತ್ಮ ಕ್ರಿಕೆಟ್ ನಡೆಯುವುದು ಮುಖ್ಯ ಎಂಬುದಾಗಿ ಹೇಳುವ ಮೂಲಕ ಒಟ್ಟು ಸಮಸ್ಯೆಗೆ ತೆರೆ ಎಳೆಯಲು ಅವರು ಮುಂದಾಗಿದ್ದಾರೆ.

ಲಖನೌ ಪಿಚ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲ್ಯಾಂಡ್​ ತಂಡ 99 ರನ್​ಗಳನ್ನು ಪೇರಿಸಿತ್ತು. ಗುರಿ ಬೆನ್ನಟ್ಟಲು ಹೊರಟ ಭಾರತ ತಂಡ ಆ ರನ್​ ಗಳಿಸಲು ಪರದಾಡಿ ಕೊನೇ ಎಸೆತ ಬಾಕಿ ಇರುವಾಗ ಜಯ ಗಳಿಸಿತ್ತು. ಇಷ್ಟೊಂದು ಕಠಿಣವಾಗಿರುವ ಪಿಚ್​ ಇಟ್ಟಿರುವ ಬಗ್ಗೆ ಭಾರತ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಅಸಮಧಾನ ವ್ಯಕ್ತಪಡಿಸಿದ್ದರು. ಆ ಬಳಿಕ ಪಿಚ್ ಕ್ಯುರೇಟರ್​ ಅನ್ನು ವಜಾಗೊಳಿಸಲಾಗಿತ್ತು.

ಈ ವಿವಾದದ ಕುರಿತು ಮಾತನಾಡಿರುವ ಸೂರ್ಯಕುಮಾರ್ ಯಾದವ್​, ಯಾವ ರೀತಿಯ ಪಿಚ್​ ಇರುತ್ತದೆ ಎಂಬುದು ನಮಗೆ ವಿಷಯವಲ್ಲ. ಸ್ಪರ್ಧಾತ್ಮಕ ಕ್ರಿಕೆಟ್​ ನಡೆಯಬೇಕು ಎಂಬುದೇ ನನ್ನ ಅಭಿಪ್ರಾಯ. ಆ ಪಿಚ್​ಗೆ ಹೊಂದಾಣಿಕೆ ಮಾಡಿಕೊಂಡು ಆಡಬೇಕಾಗಿದೆ. ಈ ಮೂಲಕವೂ ಆ ಪಂದ್ಯ ರೋಚಕವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | Suryakumar Yadav | ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಭೇಟಿ ಮಾಡಿದ ಸೂರ್ಯಕುಮಾರ್​ ಯಾದವ್​

ಟೆಸ್ಟ್​ ಆಗಲಿ, ಏಕ ದಿ ಪಂದ್ಯವಾಗಲಿ ಅಥವಾ ಟಿ 20 ಪಂದ್ಯವೇ ಆಗಲಿ. ಸ್ಪರ್ಧಾತ್ಮಕ ವಿಕೆಟ್​ ಇಡುವುದರಿಂದ ಯಾವುದೇ ತೊಂದರೆ ಇಲ್ಲ. ಅಲ್ಲಿನ ಸವಾಲುಗಳನ್ನು ಸ್ವೀಕರಿಸಲೇಬೇಕು ಎಂಬದಾಗಿ ಅವರು ಹೇಳಿದ್ದಾರೆ.

Exit mobile version