Site icon Vistara News

Team India: ಬಾಂಗ್ಲಾ ಸವಾಲು ಎದುರಿಸಲು ಪುಣೆ ತಲುಪಿದ ಟೀಮ್​ ಇಂಡಿಯಾ

Team India

ಪುಣೆ: ಹ್ಯಾಟ್ರಿಕ್ ಗೆಲುವು ಸಾಧಿಸಿ ಮುನ್ನುಗುತ್ತಿರುವ ಟೀಮ್​ ಇಂಡಿಯಾ(Team India) ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಬಾಂಗ್ಲಾದೇಶ(India vs Bangladesh) ವಿರುದ್ಧ ಗುರುವಾರ ಪಂದ್ಯವನ್ನಾಡಲಿದೆ. ಈ ಪಂದ್ಯ ಪುಣೆಯಲ್ಲಿ ನಡೆಯಲಿದೆ. ಇದಕ್ಕಾಗಿ ಭಾರತೀಯ ಆಟಗಾರರು ಪುಣೆ(Pune) ತಲುಪಿದ್ದಾರೆ. ಆಟಗಾರರು ಪುಣೆ ತಲುಪಿದ ವಿಚಾರವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ವಿಡಿಯೊ ಹಂಚಿಕೊಂಡು ಪ್ರಕಟಿಸಿದೆ.

ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಕೆ.ಎಎಲ್​ ರಾಹುಲ್​, ಆರ್​.ಅಶ್ವಿನ್​ ಸೇರಿ ಎಲ್ಲ ಆಟಗಾರರು ಅಹಮದಾಬಾದ್​ನ ವಿಮಾನ ನಿಲ್ದಾಣದಿಂದ ಪುಣೆ ತಲುಪಿರುವ ದೃಶ್ಯವನ್ನು ಬಿಸಿಸಿಐ ವಿಡಿಯೊದಲ್ಲಿ ಕಾಣಬಹುದಾಗಿದೆ. ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಭಾರತ ಈ ಪಂದ್ಯವನ್ನು ಗೆದ್ದು ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿದೆ.

ಅಭ್ಯಾಸ ಆರಂಭ

ಪುಣೆ ತಲುಪಿರುವ ಭಾರತ ತಂಡದ ಆಟಗಾರರು ಇಂದು(ಸೋಮವಾರ) ರಾತ್ರಿಯ ವೇಳೆ ಅಭ್ಯಾಸ ನಡೆಸಲಿದ್ದಾರೆ. ಡೆಂಗ್ಯೂ ಜ್ವರದಿಂದ ಚೇತರಿಕೆ ಕಂಡು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಲಿಳಿದ ಶುಭಮನ್​ ಗಿಲ್​ಗೆ ಹೆಚ್ಚಿನ ಬ್ಯಾಟಿಂಗ್​ ಅಭ್ಯಾಸ ನಡೆಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಏಕೆಂದರೆ ಅವರು ಇನ್ನೂ ಕೂಡ ಕೊಂಚ ಫಿಟ್​ ಆಗಬೇಕಿದೆ.

ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ. ರಾಹುಲ್​ ಸೇರಿ ಎಲ್ಲ ಆಟಗಾರರು ಉತ್ತಮ ಫಾರ್ಮ್​ನಲ್ಲಿದ್ದಾರೆ. ಚಿಂತೆ ಇರುವುದು ಶಾರ್ದೂಲ್​ ಠಾಕೂರ್​. ಅವರನ್ನು ಆಡಿಸುವ ಬದಲು ಮೊಹಮ್ಮದ್​ ಶಮಿ ಅವರಿಗೆ ಅವಕಾಶ ನೀಡಿದರೆ ಬೌಲಿಂಗ್​ ವಿಭಾಗ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಶಾರ್ದೂಲ್​ಗೆ ಅವಕಾಶ ನೀಡಿದರೂ ಅವರಿಂದ ತಂಡಕ್ಕೆ ಯಾವುದೇ ಪ್ರಯೋಜವಾಗುತ್ತಿಲ್ಲ. ಅವರಿಗೆ ನೀಡುತ್ತಿರುವು ಕೇವಲ ಒಂದೆರಡು ಓವರ್​. ಅಲ್ಲದೆ ಬ್ಯಾಟಿಂಗ್​ ಕೂಡ ನಿರೀಕ್ಷಿತ ಮಟ್ಟದಲ್ಲಿ ತೋರುತ್ತಿಲ್ಲ. ಹೀಗಿರುವಾಗ ಅನುಭವಿ ಬೌಲರ್​ ಶಮಿಗೆ ಅವಕಾಶ ನೀಡಿದರೆ ತಂಡ ಮತ್ತಷ್ಟು ಬಲಿಷ್ಠಗೊಳ್ಳಲಿದೆ.

ಇದನ್ನೂ ಓದಿ Viral Video: ರನ್​ ನೀಡಿದ ಸಿಟ್ಟಿನಲ್ಲಿ ಕ್ಯಾಮೆರಾ ತಳ್ಳಿಹಾಕಿದ ಇಂಗ್ಲೆಂಡ್ ಆಲ್​ರೌಂಡರ್​

ಭಾರತ ವಿಶ್ವಕಪ್​ ತಂಡ

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ,ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ಜಸ್​ಪ್ರೀತ್​, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್.

ಭಾರತ ವಿಶ್ವಕಪ್​ ಗೆಲ್ಲಲಿದೆ

ಸಂದರ್ಶನವೊಂದರಲ್ಲಿ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶೋಯೆಬ್​ ಅಖ್ತರ್​, “ತವರಿನಲ್ಲಿ ನಡೆಯುತ್ತಿರುವ 2023ನೇ ಸಾಲಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕಪ್​ ಗೆಲ್ಲಲಿದೆ ಎಂಬ ಸಂಪೂರ್ಣ ನಂಬಿಕೆ ಮತ್ತು ಭರವಸೆ ನನಗಿದೆ” ಎಂದು ಹೇಳಿದ್ದಾರೆ.

“2011ರ ವಿಶ್ವಕಪ್​ ಇತಿಹಾಸ ಮತ್ತೆ ಮರುಕಳಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ತವರಿನಲ್ಲಿ ಭಾರತವನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಭಾರತ ಸೆಮಿಫೈನಲ್ ಹಂತ ದಾಟಿದ್ದೇ ಆದರೆ ಕಪ್​ ತನ್ನದಾಗಿಸಿಕೊಳ್ಳುತ್ತದೆ. ಭಾರತ ತಂಡ ಅತ್ಯಂತ ಶ್ರೇಷ್ಠ ಪ್ರದರ್ಶನ ತೋರುತ್ತಿದೆ. 2019ರಲ್ಲಿಯೂ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಅದೃಷ್ಟ ಕೈಕೊಟ್ಟ ಕಾರಣ ಭಾರತ ಸೆಮಿಯಲ್ಲಿ ಸೋಲು ಕಂಡಿತು. ಎಲ್ಲ ಸಾಮರ್ಥ್ಯವಿರುವ ಭಾರತಕ್ಕೆ ಈ ಬಾರಿ ಅದೃಷ್ಟವೊಂದು ಕೈಹಿಡಿದರೆ ಕಪ್​ ಗ್ಯಾರಂಟಿ” ಎಂದು ಅಖ್ತರ್​ ಭವಿಷ್ಯ ನುಡಿದಿದ್ದಾರೆ.

Exit mobile version