Site icon Vistara News

INDvsBAN | ರೋಹಿತ್​ ಶರ್ಮಗೆ ಮನೆಯಲ್ಲೇ ಕುಳಿತುಕೊಳ್ಳಲು ಹೇಳಿ; ಹೀಗೆಂದಿದ್ದು ಯಾರು?

INDvsBAN

ಮುಂಬಯಿ : ಟೀಮ್​ ಇಂಡಿಯಾ ಕಾಯಂ ನಾಯಕ ರೋಹಿತ್​ ಶರ್ಮ ಗಾಯದಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಮೀರ್​ಪುರದಲ್ಲಿ ನಡೆಯುವ ಎರಡನೇ ಟೆಸ್ಟ್​ ಪಂದ್ಯದಲ್ಲಿ (INDvsBAN) ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ರೋಹಿತ್​ ಶರ್ಮ ಮತ್ತೆ ಬಾಂಗ್ಲಾಗೆ ಪ್ರವಾಸ ಮಾಡಿ ಎರಡನೇ ಪಂದ್ಯದಲ್ಲಿ ಆಡುವುದು ಅವರ ಅಪ್ಪಟ ಅಭಿಮಾನಿಗಳಿಗೆ ಬಿಟ್ಟು ಇನ್ಯಾರಿಗೂ ಬೇಕಾಗಿಲ್ಲ. ಅದು ಭಾರತ ತಂಡದ ಮಾಜಿ ಆಟಗಾರ ಮಾತಿನಲ್ಲೂ ವ್ಯಕ್ತಗೊಂಡಿದೆ.

ರೋಹಿತ್​ ಶರ್ಮ ಅವರ ಹೆಬ್ಬೆರಳ ಗಾಯದ ಸಮಸ್ಯೆಯ ವರದಿ ಬಂದಿದ್ದು, ಅವರಿಗೆ ಯಾವುದೇ ಅಪಾಯ ಇಲ್ಲ ಎಂಬುದಾಗಿ ಗೊತ್ತಾಗಿದೆ. ಹೀಗಾಗಿ ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ್ದಾರೆ ಎನ್ನಲಾಗಿದೆ. ಇದರಿಂದ ಅವರು ಬಾಂಗ್ಲಾದೇಶಕ್ಕೆ ಹಾರಿ ಅಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಒಂದು ವೇಳೆ ಅವರು ಬಾಂಗ್ಲಾ ವಿಮಾನ ಏರಿದರೆ ಮುಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ ಬದಲಾವಣೆ ಆಗಲಿದೆ. ಯಾಕೆಂದರೆ ಆರಂಭಿಕ ಬ್ಯಾಟರ್​ ಸ್ಥಾನಕ್ಕೆ ರೋಹಿತ್ ಶರ್ಮ ಬರಲಿದ್ದು, ಶುಬ್ಮನ್​ ಗಿಲ್ ಅವಕಾಶ ಕಳೆದುಕೊಳ್ಳುತ್ತಾರೆ. ಆದರೆ, ಶುಬ್ಮನ್​ ಗಿಲ್​ ಮೊದಲ ಪಂದ್ಯದ ಎರಡನೇ ಇನಿಂಗ್ಸ್​ನಲ್ಲಿ ಶತಕ ಬಾರಿಸಿದ್ದಾರೆ. ಹೀಗಾಗಿ ಅವರನ್ನು ಬೆಂಚು ಕಾಯಿಸಿದರೆ ವಿರೋಧ ನಿಶ್ಚಿತ.

ಈ ಬಗ್ಗೆ ಸೋನಿ ಟಿವಿಯಲ್ಲಿ ಮಾತನಾಡಿದ ಅಜಯ್ ಜಡೇಜಾ, ಒಬ್ಬ ಆಟಗಾರ ಬೆರಳಿಗೆ ಗಾಯಮಾಡಿಕೊಂಡರೆ 10 ದಿನಗಳ ಕಾಲ ಬ್ಯಾಟ್​ ಮಾಡಲಾಗುವುದಿಲ್ಲ. ಹಾಗೊಂದು ವೇಳೆ ಗುಣಮುಖರಾದರೂ ಮರುದಿನವೇ ಆಡುವುದು ಸರಿಯಲ್ಲ. ಅದಾಗಿ 15 ದಿನ ಕಾಯಬೇಕು. ಹೀಗಾಗಿ ರಾಹುಲ್​ ವಿಚಾರದಲ್ಲಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬಾರದು ಕಾಯಂ ಪರಿಹಾರ ಹುಡುಕಬೇಕು. ಅದಕ್ಕಾಗಿ ರೋಹಿತ್​ ಶರ್ಮ ಮನೆಯಲ್ಲಿಯೇ ಉಳಿಯಬೇಕು, ಎಂದು ಹೇಳಿದ್ದಾರೆ.

ಇದನ್ನೂ ಓದಿ | INDvsBAN | ಎರಡನೇ ಟೆಸ್ಟ್​ಗೆ ಶುಬ್ಮನ್​ ಗಿಲ್​ ಔಟ್?; ಸುಳಿವು ಕೊಟ್ಟ ಕೆ ಎಲ್​ ರಾಹುಲ್

Exit mobile version