Site icon Vistara News

INDvsAUS : ಇಂದೋರ್​ ಪಂದ್ಯದಲ್ಲಿ ರಾಹುಲ್​ಗೆ ಅವಕಾಶ ನೀಡದಿರುವುದೇ ಒಳ್ಳೆಯದಾಯಿತು ಎಂದ ಮಾಜಿ ಕ್ರಿಕೆಟಿಗ

The former cricketer said that it was a good thing that Rahul was not allowed in the Indore match

#image_title

ಮುಂಬಯಿ: ಭಾರತ ಹಾಗೂ ಆಸ್ಟ್ರೇಲಿಯಾ (INDvsAUS) ನಡುವಿನ ಟೆಸ್ಟ್​ ಸರಣಿ ಪಂದ್ಯಗಳು ನಡೆದಿರುವ ಪಿಚ್​ಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಪಿಚ್​ಗಳೆಲ್ಲವೂ ಬ್ಯಾಟರ್​ಗಳಿಗೆ ದುಸ್ವಪ್ನವಾಗಿದ್ದವು ಎಂದು ಕ್ರಿಕೆಟ್​ ಕಾರಿಡಾರ್​ನಲ್ಲಿ ಜೋರು ಚರ್ಚೆ ನಡೆಯುತ್ತಿದೆ. ಇದೇ ವೇಳೆ ಟೀಮ್​ ಇಂಡಿಯಾದ ಆರಂಭಿಕ ಬ್ಯಾಟರ್​ ಕೆ. ಎಲ್​ ರಾಹುಲ್​ ಪ್ರದರ್ಶನದ ಬಗ್ಗೆಯೂ ವಿಶ್ಲೇಷಣೆಗಳು ನಡೆಯುತ್ತಿವೆ. ಮೂರು ಪಂದ್ಯ ನಡೆದ ಪಿಚ್​ಗಳಲ್ಲಿ ಬ್ಯಾಟ್​ ಮಾಡುವುದು ಸುಲಭದ ಸಂಗತಿಯಲ್ಲ ಎಂದು ಹೇಳಲಾಗುತ್ತಿದ್ದರೂ, ರಾಹುಲ್ ವಿಚಾರದಲ್ಲಿ ಅವರನ್ನೇ ನೇರವಾಗಿ ಟೀಕೆ ಮಾಡಲಾಗುತ್ತಿದೆ. ಸತತವಾಗಿ ಟೀಕೆಗಳು ಎದುರಾದ ಕಾರಣ ಅವರನ್ನು ಮೂರನೇ ಪಂದ್ಯದಲ್ಲಿ ಆಡಿಸಿಲ್ಲ. ಬದಲಾಗಿ ಶುಭ್​ಮನ್ ಗಿಲ್​ಗೆ ಅವಕಾಶ ನೀಡಲಾಗಿತ್ತು. ಅವರು ಕೂಡ ವೈಫಲ್ಯ ಎದುರಿಸಿದ್ದರು. ಈ ಕುರಿತು ಮಾತನಾಡಿದ ವಿಶ್ವ ಕಪ್ ವಿಜೇತ ಭಾರತ ತಂಡದ ಅಟಗಾರ ಕೃಷ್ಣಮಾಚಾರಿ ಶ್ರೀಕಾಂತ್​, ಮೂರನೇ ಪಂದ್ಯದಲ್ಲಿ ರಾಹುಲ್​ಗೆ ಅವಕಾಶ ನೀಡದಿರುವುದೇ ಒಳಿತಾಯಿತು ಎಂದು ಹೇಳಿದ್ದಾರೆ.

ಮೂರನೇ ಪಂದ್ಯ ನಡೆದ ಇಂದೋರ್​ ಪಿಚ್​ನಲ್ಲಿ ಬ್ಯಾಟ್​ ಮಾಡುವುದು ಸಾಧ್ಯವೇ ಇರಲಿಲ್ಲ. ಅದು ಬೌಲಿಂಗ್​ ವಿಭಾಗಕ್ಕೆಂದೇ ಮಾಡಲಾದ ಪಿಚ್. ಈ ಪಿಚ್​ನಲ್ಲಿ ಭಾರತ ತಂಡದ ಎಲ್ಲ ಬ್ಯಾಟರ್​ಗಳು ವೈಫಲ್ಯ ಎದುರಿಸಿದ್ದಾರೆ. ಒಂದು ವೇಳೆ ರಾಹುಲ್​ ಆಡಿದ್ದರೂ ಅವರು ವೈಫಲ್ಯ ಎದುರಿಸುತ್ತಿದ್ದರು. ಹಾಗಾಗಿದ್ದರೆ ಅವರ ಬಗ್ಗೆ ಮತ್ತಷ್ಟು ಟೀಕೆಗಳು ಬರುತ್ತಿದ್ದವು ಹಾಗೂ ಅವರ ಕ್ರಿಕೆಟ್ ಬದುಕೇ ಮುಗಿದು ಹೋಗುತ್ತಿತ್ತು ಎಂದು ಕೃಷ್ಣಮಾಚಾರಿ ಶ್ರೀಕಾಂತ್​ ಹೇಳಿದ್ದಾರೆ.

ಕೆ. ಎಲ್​ ರಾಹುಲ್ ಮೊದಲೆರಡು ಪಂದ್ಯದಲ್ಲೂ ವೈಫಲ್ಯ ಕಂಡಿದ್ದರು. ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರಾಹುಲ್ ಕೇವಲ 20 ರನ್ ಗಳಿಸಿದ್ದರು. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 17 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 1 ರನ್ ಗಳಿಸಿದ್ದರು. ಒಟ್ಟಾರೆಯಾಗಿ 38 ರನ್​ಗಳನ್ನು ಮಾತ್ರ ಗಳಿಸಿದ್ದರು.

ಇದನ್ನೂ ಓದಿ : IND VS AUS: ಇಂದೋರ್​ ಪಿಚ್​ಗೆ ಕಳಪೆ ​ ರೇಟಿಂಗ್ಸ್​ ಕೊಟ್ಟ ಐಸಿಸಿ​

ಮೂರನೇ ಪಂದ್ಯ ನಡೆದ ಇಂದೋರ್​ ಪಿಚ್​ನಲ್ಲಿ ವಿರಾಟ್ ಕೊಹ್ಲಿಯಂಥ ಬ್ಯಾಟರ್​​ಗಳಿಗೆ ಆಡಲು ಸಾಧ್ಯವಾಗಿಲ್ಲ. ಹೀಗಾಗಿ ರಾಹುಲ್​ಗೂ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಶ್ರೀಕಾಂತ್​ ಹೇಳಿದ್ದಾರೆ. ಇದೇ ವೇಳೆ ಅವರು ಪಿಚ್​ ಬಗ್ಗೆಯೂ ಟೀಕೆ ವ್ಯಕ್ತಪಡಿಸಿದ್ದು, ನಾನು ಬೌಲಿಂಗ್​ ಮಾಡಿದ್ದರೂ ವಿಕೆಟ್​ ಪಡೆಯುತ್ತಿದ್ದೆ ಎಂದು ಹೇಳಿದ್ದಾರೆ.

Exit mobile version