Site icon Vistara News

Shubman Gill: ಗಾಯ ತೀವ್ರ ಸ್ವರೂಪದ್ದಲ್ಲ ಎಂದ ಗಿಲ್; ನಿಟ್ಟುಸಿರು ಬಿಟ್ಟ ಬಿಸಿಸಿಐ

shubman gill injury

ಮುಂಬಯಿ: ಇಂಗ್ಲೆಂಡ್(IND vs ENG)​ ವಿರುದ್ಧದ ದ್ವಿತೀಯ ಪಂದ್ಯದ ಮೂರನೇ ದಿನದಾಟದ ವೇಳೆ ಭಾರತ ತಂಡದ ಆಟಗಾರ ಶುಭಮನ್​ ಗಿಲ್(Shubman Gill)​ ಬೆರಳಿಗೆ ಗಾಯಗೊಂಡು ನಾಲ್ಕನೇ ದಿನ ಫೀಲ್ಡಿಂಗ್​ ನಡೆಸಿರಲಿಲ್ಲ. ಹೀಗಾಗಿ ಭಾರತ ತಂಡಕ್ಕೆ ಆತಂಕವೊಂದು ಕಾಡಿತ್ತು. ಆದರೆ ಆತಂಕವನ್ನು ಸ್ವತಃ ಶುಭಮನ್​ ಗಿಲ್(shubman gill injury update) ಅವರೇ ದೂರ ಮಾಡಿದ್ದಾರೆ. ಯಾವುದೇ ಗಂಭೀರ ಸ್ವರೂಪದ ಗಾಯವಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಇದರಿಂದ ಟೀಮ್​ ಇಂಡಿಯಾ ನಿಟ್ಟುಸಿರು ಬಿಟ್ಟಿದೆ.

ವಿರಾಟ್​ ಕೊಹ್ಲಿ ಅವರ ಆಗಮನದ ಬಗ್ಗೆ ಇದುವರೆಗೆ ಯಾವುದೇ ಖಚಿತತೆ ಇಲ್ಲದೆ, ಅತ್ತ ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮತ್ತು ಕೆ.ಎಲ್​ ರಾಹುಲ್​ ಗಾಯಗೊಂಡು ದ್ವಿತೀಯ ಪಂದ್ಯದಿಂದ ಹೊರಗುಳಿದಿದ್ದರು. ಅಲ್ಲದೆ ಮೂರನೇ ಪಂದ್ಯದಲ್ಲಿಯೂ ಆಡುವುದು ಖಚಿತವಿಲ್ಲ. ಹೀಗಿರುವಾಗಲೇ ಗಿಲ್​ ಬೆರಳಿಗೆ ಗಾಯವಾದ ತಕ್ಷಣ ಸಹಜವಾಗಿಯೇ ಒಂದು ಕ್ಷಣ ಬಿಸಿಸಿಐ ಆತಂಕಕ್ಕೆ ಒಳಗಾಗಿತ್ತು. ಗಿಲ್​ ಫಿಟ್​ ಆಗಿದ್ದು ಮೂರನೇ ಪಂದ್ಯದಲ್ಲಿ ಆಡಲಿದ್ದಾರೆ. ಸ್ಕ್ಯಾನಿಂಗ್​ ವೇಳೆಯೂ ಗಿಲ್​ಗೆ ಅಪಾಯವಿಲ್ಲ ಎನ್ನುವುದು ತಿಳಿದುಬಂದಿದೆ.

ಇದನ್ನೂ ಓದಿ IND vs ENG: ಮೂರು ವಿಕೆಟ್​ ಕಿತ್ತು ಕನ್ನಡಿಗ ಚಂದ್ರಶೇಖರ್‌ ದಾಖಲೆ ಮುರಿದ ಅಶ್ವಿನ್

ಗಿಲ್​ ಅವರ ಬದಲು ಸೋಮವಾರ ಸರ್ಫರಾಜ್ ಖಾನ್ ಫೀಲ್ಡಿಂಗ್​ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಗಿಲ್​ ನಾಲ್ಕು ಕ್ಯಾಚ್ ಕೂಡ ಪಡೆದಿದ್ದರು. 11 ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡು ಭಾರಿ ಟೀಕೆಗೆ ಗುರಿಯಾಗಿದ್ದ ಅವರು​ ಈ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು. 147 ಎಸೆತ ಎದುರಿಸಿ 11 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 104 ರನ್​ ಬಾರಿಸಿದ್ದರು. 

ಬಹು ದಿನಗಳ ಬಳಿಕ ಶತಕ ಬಾರಿಸಿದ ಶುಭಮನ್​ ಗಿಲ್​ಗೆ​ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​(Sachin Tendulkar) ಅವರು ಟ್ವೀಟ್​ ಮೂಲಕ ಮೆಚ್ಚು ಸೂಚಿಸಿದ್ದರು. ಗಿಲ್​ ಅವರ ಶತಕದ ಫೋಟೊ ಹಂಚಿಕೊಂಡು, “ಶುಭಮನ್ ಗಿಲ್ ಅವರ ಈ ಇನ್ನಿಂಗ್ಸ್ ಕೌಶಲ್ಯದಿಂದ ತುಂಬಿತ್ತು! ಉತ್ತಮ ಸಮಯ. ಶತತಕ್ಕೆ ಅಭಿನಂದನೆಗಳು!” ಎಂದು ಸಚಿನ್​ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಶತಕದ ಶ್ರೇಯವನ್ನು ಅಯ್ಯರ್​ಗೆ ಅರ್ಪಿಸಿದ್ದ ಗಿಲ್​


ಗಿಲ್​ ಅವರು ಈ ಶತಕವನ್ನು ಅಯ್ಯರ್​ಗೆ ಅರ್ಪಿಸಿದ್ದರು. ಏಕೆಂದರೆ ಅಯ್ಯರ್​ ರಿವ್ಯೂ ಪಡೆಯುವಂತೆ ಒತ್ತಾಯಿಸದಿದ್ದರೆ ಈ ಶತಕ ಸಾಧ್ಯವಾಗುತ್ತಿರಲಿಲ್ಲ ಹೀಗಾಗಿ ನಾನು ಈ ಶತಕದ ಶ್ರೆಯವನ್ನು ಅಯ್ಯರ್​ಗೆ ಸಲ್ಲಿಸುತ್ತೇನೆ ಎಂದು ಪಂದ್ಯದ ಬಳಿಕ ಹೇಳಿದ್ದರು.

4 ರನ್​ ಗಳಿಸಿದ್ದ ವೇಳೆ ಟಾಮ್​ ಹಾರ್ಟ್ಲಿ ಎಸೆತದಲ್ಲಿ ಗಿಲ್​ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. ಅಂಪೈರ್​ ಕೂಡ ಔಟ್​ ನೀಡಿದರು. ಆದರೆ, ನಾನ್​ ಸ್ಟ್ರೈಕ್​ನಲ್ಲಿದ್ದ ಶ್ರೇಯಸ್​ ಅವರು ಗಿಲ್​ಗೆ ರಿವ್ಯೂ ಪಡೆಯುವಂತೆ ಒತ್ತಾಯಿಸಿದರು. ಅಯ್ಯರ್​ ಅವರ ಸೂಚನೆಯಂತೆ ಗಿಲ್​ ರಿವ್ಯೂ ಪಡೆದಿದ್ದರು. ಈ ವೇಳೆ ಚೆಂಡು ಮೊದಲು ಬ್ಯಾಟ್​ಗೆ ಬಡಿದು ಆ ಬಳಿಕ ಪ್ಯಾಡ್​ಗೆ ಬಡಿದಿರುವುದು ಕಂಡುಬಂತು. ಅಂಪೈರ್​ ತಮ್ಮ ಮನವಿಯನ್ನು ಹಿಂಪಡೆದು ನಾಟ್ ಔಟ್​ ತೀರ್ಪು ನೀಡಿದ್ದರು. ಜೀವಾದಾನ ಪಡೆದ ಶತಕ ಬಾರಿಸಿ ಮಿಂಚಿದ್ದರು.

Exit mobile version