Site icon Vistara News

U19 World Cup: ಅಂಡರ್‌-19 ವಿಶ್ವಕಪ್​ನಲ್ಲಿ ಭಾರತದ ಸಾಧನೆ ಹೇಗಿದೆ? ಚೊಚ್ಚಲ ಕಪ್​ ಗೆದ್ದಿದ್ದು ಯಾವಾಗ?

India U19

ಬ್ಲೋಮ್‌ಫಾಂಟೀನ್‌: ಅಂಡರ್‌-19 ಏಕದಿನ ವಿಶ್ವಕಪ್‌(U19 World Cup) ಕ್ರಿಕೆಟ್‌ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವಾಗಿರುವ, ಸರ್ವಾಧಿಕ 5 ಸಲ ಚಾಂಪಿಯನ್‌ ಆಗಿರುವ ಭಾರತ ತಂಡ(India U19) ಈಗಾಗಕೇ ಫೈನಲ್​ ಪ್ರವೇಶಿಸಿದೆ. ಮಂಗಳವಾರ ನಡೆದ ರೋಚಕ ಸೆಮಿಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕೆಡವಿ ಫೈನಲ್​ಗೆ ಲಗ್ಗೆಯಿಟ್ಟಿತ್ತು. ಫೈನಲ್​ನಲ್ಲಿ ಆಸ್ಟ್ರೇಲಿಯಾ ಅಥವಾ ಪಾಕಿಸ್ತಾನ ಎದುರಾಗುವ ಸಾಧ್ಯತೆ ಇದೆ.

6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ ಕಿರಿಯರ ತಂಡ ಮೊದಲ ಸಲ ಅಂಡರ್‌-19 ವಿಶ್ವಕಪ್​ನಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದು 2002 ರಲ್ಲಿ. ಮೊಹ್ಮಮದ್‌ ಕೈಫ್ ನಾಯಕತ್ವದಲ್ಲಿ ಭಾರತಕ್ಕೆ ಚೊಚ್ಚಲ ಅಂಡರ್‌-19 ವಿಶ್ವಕಪ್​ ಕಪ್ ದೊರಕಿತ್ತು. ಆ ಬಳಿಕ 2008, 2012, 2018 ಮತ್ತು 2022ರಲ್ಲಿ ಪ್ರಶಸ್ತಿ ಎತ್ತಿತ್ತು. ಈ ಬಾರಿಯೂ ಭಾರತವೇ ಪ್ರಶಸ್ತಿ ಗೆಲ್ಲುವ ಫೇವರಿಟ್​ ತಂಡವಾಗಿ ಕಾಣಿಸಿಕೊಂಡಿದೆ.

ಭಾರತ ಉತ್ತಮ ಆಲ್‌ರೌಂಡರ್‌ಗಳನ್ನೊಳಗೊಂಡ ಸಶಕ್ತ ಪಡೆಯನ್ನು ಹೊಂದಿದೆ. ಮಹಾರಾಷ್ಟ್ರದ ಸವ್ಯ ಸಾಚಿ ಅರ್ಶಿನ್‌ ಕುಲಕರ್ಣಿ, ವಿಕೆಟ್‌ ಕೀಪರ್‌-ಬ್ಯಾಟರ್‌ ಎ. ಅವನೀಶ್‌ ರಾವ್‌, ಎಡಗೈ ಸ್ಪಿನ್ನರ್‌-ಉಪನಾಯಕ ಸೌಮಿ ಕುಮಾರ್‌ ಪಾಂಡೆ, ನಾಯಕ ಉದಯ್‌ ಸಹಾರಣ್‌, ಮುಂಬಯಿಯ ಮುಶೀರ್‌ ಖಾನ್‌, ಸಚಿನ್​ ದಾಸ್​ ಅವರೆಲ್ಲ ತಂಡದ ಸ್ಟಾರ್‌ ಬ್ಯಾಟರ್​ ಹಾಗೂ ಆಲ್‌ರೌಂಡರ್​ಗಳು. ಇವರಲ್ಲಿ ಅರ್ಶಿನ್‌ ಕುಲಕರ್ಣಿ ಮತ್ತು ಅವನೀಶ್‌ ರಾವ್‌ ಈಗಾಗಲೇ ಐಪಿಎಲ್‌ ತಂಡ ಗಳಿಂದಲೂ ಕರೆ ಪಡೆದಿದ್ದಾರೆ.

ಟೂರ್ನಿಯಲ್ಲಿ ಅತ್ಯಧಿಕ ರನ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನವನ್ನು ಭಾರತ ತಂಡದ ಆಟಗಾರರೆ ಪಡೆದಿದ್ದಾರೆ. ಉದಯ್‌ ಸಹಾರಣ್‌(389) ಮೊದಲ ಸ್ಥಾನದಲ್ಲಿದ್ದರೆ,ಮುಶೀರ್‌ ಖಾನ್‌ (338) ಮತ್ತು ಸಚಿನ್​ ದಾಸ್​(294) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ವಿಕೆಟ್​ ಟೇಕಿಂಗ್​ನಲ್ಲಿ ಸೌಮಿ ಕುಮಾರ್‌ ಪಾಂಡೆ 17 ವಿಕೆಟ್​ ಕಿತ್ತು ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಭಾರತ ಅಂಡರ್​ 19 ತಂಡ ಈ ಹಿಂದಿನ ತಂಡಗಳಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ವೈವಿಧ್ಯಮಯವಾಗಿದೆ. ಫೈನಲ್​ ಪಂದ್ಯದಲ್ಲಿಯೂ ಭಾರತ ಉತ್ತಮ ಪ್ರದರ್ಶನ ತೋರುವ ಮೂಲಕ 6ನೇ ಬಾಎರಿ ಪ್ರಶಸ್ತಿ ತನ್ನದಾಗಿಸಿಕೊಳ್ಳಲಿ ಎನ್ನುವುದು ಭಾರತೀಯರ ಆಶಯ.

ಇದನ್ನೂ ಓದಿ U19 World Cup: ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ದಕ್ಷಿಣ ಆಫ್ರಿಕಾದ ವಿಲೋಮೂರ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 244 ರನ್‌ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡವು 32 ರನ್​ಗೆ 4 ವಿಕೆಟ್​ ಕಳೆದುಕೊಂಡರೂ ಕೂಡ ಸಹಾರಣ್‌(81) ಮತ್ತು ಸಚಿನ್(96)​ ಅವರ ಬ್ಯಾಟಿಂಗ್​ ಸಾಹಸದಿಂದ 2 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು.

ಭಾರತ ತಂಡ


ಉದಯ್‌ ಸಹಾರಣ್‌ (ನಾಯಕ), ಅರ್ಶಿನ್‌ ಕುಲಕರ್ಣಿ, ಆದರ್ಶ್‌ ಸಿಂಗ್‌, ರುದ್ರ ಮಯೂರ್‌ ಪಟೇಲ್‌, ಸಚಿನ್‌ ದಾಸ್‌, ಪ್ರಿಯಾಂಶು ಮೋಲಿಯಾ, ಮುಶೀರ್‌ ಖಾನ್‌, ಎ. ಅವನೀಶ್‌ ರಾವ್‌, ಸೌಮ್ಯ ಕುಮಾರ್‌ ಪಾಂಡೆ, ಮುರುಗನ್‌ ಅಭಿಷೇಕ್‌, ಇನ್ನೇಶ್‌ ಮಹಾಜನ್‌, ಧನುಷ್‌ ಗೌಡ, ಆರಾಧ್ಯ ಶುಕ್ಲಾ, ರಾಜ್‌ ಲಿಂಬಾನಿ, ನಮನ್‌ ತಿವಾರಿ

Exit mobile version