Site icon Vistara News

BCCI Contracts | ಬಿಸಿಸಿಐ ಗುತ್ತಿಗೆಯಲ್ಲಿ ಯಾರಿಗೆಲ್ಲ ಪ್ರಮೋಶನ್, ಡಿಮೋಶನ್ ಆಗಬಹುದು?

BCCI Contracts

ಮುಂಬಯಿ : ಟೀಮ್​ ಇಂಡಿಯಾದಲ್ಲಿ ಯುವ ಆಟಗಾರರಿಗೆ ಹೆಚ್ಚು ಆದ್ಯತೆ ನೀಡಬೇಕು ಎಂಬ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ, ಭಾರತ ತಂಡದ ಇಬ್ಬರು ಟೆಸ್ಟ್​ ಸ್ಪೆಷಲಿಸ್ಟ್​ಗಳಿಗೆ ಕೇಂದ್ರೀಯ ಗುತ್ತಿಗೆ (BCCI Contracts) ನಷ್ಟವಾಗುವ ಸಾಧ್ಯತೆಗಳಿವೆ. ಡಿಸೆಂಬರ್​ 21ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಧಾರ ಪ್ರಕಟವಾಗಲಿದೆ.

ಟೆಸ್ಟ್​ ತಂಡದ ಉಪನಾಯಕ ಅಜಿಂಕ್ಯ ರಹಾನೆ ಹಾಗೂ ವೇಗದ ಬೌಲರ್​ ಇಶಾಂತ್​ ಶರ್ಮ ಕೇಂದ್ರೀಯ ಗುತ್ತಿಗೆಯ ಅವಕಾಶ ನಷ್ಟ ಮಾಡಿಕೊಳ್ಳಲಿರುವ ಪ್ರಮುಖ ಆಟಗಾರರು. ಇದರ ಜತೆಗೆ ಮಾಜಿ ವಿಕೆಟ್​ಕೀಪರ್​ ಬ್ಯಾಟರ್​ ವೃದ್ಧಿಮಾನ್​ ಸಾಹ ಅವರೂ ಪಟ್ಟಿಯಿಂದ ಹೊರಕ್ಕೆ ಬೀಳಲಿದ್ದಾರೆ. ಯಾಕೆಂದರೆ ಅವರನ್ನು ಮತ್ತೆ ತಂಡಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಈ ಹಿಂದೆಯೇ ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​ ಸಂದೇಶ ರವಾನೆ ಮಾಡಿತ್ತು. ಹೀಗಾಗಿ ಅವರನ್ನು ಮತ್ತೆ ಪಟ್ಟಿಗೆ ಸೇರಿಸುವುದಿಲ್ಲ. ಅದರೆ, ಇಶಾಂತ್​ ಹಾಗೂ ಅಜಿಂಕ್ಯ ರಹಾನೆ ಇನ್ನೂ ವಿದಾಯ ಘೋಷಣೆ ಮಾಡಿಲ್ಲ. ಆದರೆ, ಅವರಿಗೆ ಅವಕಾಶವನ್ನೂ ನೀಡಲಾಗುತ್ತಿಲ್ಲ.

ಬಿಸಿಸಿಐನಲ್ಲಿ ಎ+, ಎ, ಬಿ ಮತ್ತು ಸಿ ಎಂಬ ಮೂರು ಗ್ರೇಡ್​ಗಳ ಗುತ್ತಿಗೆಯಿದೆ. ಗ್ರೇಡ್​ಗೆ ತಕ್ಕಂತೆ ಆಟಗಾರರು ಅನುಕ್ರಮವಾಗಿ ವಾರ್ಷಿಕವಾಗಿ 7 ಕೋಟಿ, 5 ಕೋಟಿ, 3 ಕೋಟಿ ಹಾಗೂ 1 ಕೋಟಿ ರೂಪಾಯಿ ಪಡೆಯುತ್ತಾರೆ. ಎ+ ಮತ್ತು ಎ ಗ್ರೇಡ್​ನ ಆಟಗಾರರು ಮೂರು ಮಾದರಿಯ ಕ್ರಿಕೆಟ್ ತಂಡದಲ್ಲಿ ಕಾಯಂ ಸದಸ್ಯರಾಗಿರಬೇಕು. ಅಂತೆಯೇ ಬಿ ಗ್ರೇಡ್​ನವರು ಎರಡು ಮಾದರಿ ಹಾಗೂ ಸಿ ಗ್ರೇಡ್​ನ ಆಟಗಾರರು ಒಂದು ಮಾದರಿಯಲ್ಲಿ ಆಡುತ್ತಿರಬೇಕು.

ಯಾರಿಗೆಲ್ಲ ಪ್ರಮೋಶನ್​?

ಪ್ರಸ್ತುತ ಟೀಮ್​ ಇಂಡಿಯಾದಲ್ಲಿ ಅವಕಾಶ ಪಡೆಯುವವರ ಪಟ್ಟಿಯನ್ನು ನೋಡಿದಾಗ ಶುಬ್ಮನ್​ ಗಿಲ್​, ಸೂರ್ಯಕುಮಾರ್​ ಯಾದವ್ ಹಾಗೂ ಹಾರ್ದಿಕ್​ ಪಾಂಡ್ಯಗೆ ಪ್ರಮೋಶನ್​ ಸಿಗಬಹುದು. ಶುಬ್ಮನ್​ ಏಕ ದಿನ ಹಾಗೂ ಟೆಸ್ಟ್​ ಮಾದರಿಯಲ್ಲಿ ಆಡುತ್ತಿದ್ದರೆ, ಸೂರ್ಯಕುಮಾರ್​ಗೆ ಏಕ ದಿನ ಹಾಗೂ ಟಿ20 ಮಾದರಿಯಲ್ಲಿ ಅವಕಾಶ ನೀಡಲಾಗುತ್ತಿದೆ. ಹಾರ್ದಿಕ್ ಅವರನ್ನು ಟಿ20 ತಂಡದ ನಾಯಕ ಎಂದೇ ಬಿಂಬಿಸಲಾಗುತ್ತಿದೆ. ಇವರೆಲ್ಲರೂ ಈ ಸಿ ಗುಂಪಿನಲ್ಲಿದ್ದಾರೆ. ಈ ಸ್ಥಾನದಿಂದ ಬಿ ಅಥವಾ ಎ ಗುಂಪಿಗೆ ಬಡ್ತಿ ಪಡೆಯಲಿದ್ದಾರೆ ಈ ಆಟಗಾರರು.

ಡಿಸೆಂಬರ್​ 12ರಂದು ಸಭೆ ನಡೆಯಲಿದ್ದು, 12 ಕಾರ್ಯಸೂಚಿಯ ಬಗ್ಗೆ ಚರ್ಚೆ ನಡೆಯಲಿದೆ. ಸಭೆ ವಿಡಿಯೊ ಕಾನ್ಫರೆನ್ಸ್​ ಮಾದರಿಯಲ್ಲಿ ನಡೆಯಲಿದೆ ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ | Suryakumar Yadav | ರಣಜಿ ಪಂದ್ಯದಲ್ಲಿ ಆಡಲಿದ್ದಾರೆ ಸೂರ್ಯಕುಮಾರ್‌ ಯಾದವ್‌; ಯಾಕೆ ಗೊತ್ತೇ?

Exit mobile version