Site icon Vistara News

Virat Kohli : ಅಪರೂಪಕ್ಕೆ ಕೊಹ್ಲಿಯನ್ನು ಹೊಗಳಿದ ಗೌತಮ್ ಗಂಭೀರ್​!

Virat kohli

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಚೆಪಾಕ್ ಕ್ರೀಡಾಂಗಣದ ಸವಾಲಿನ ಟ್ರ್ಯಾಕ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿಯನ್ನು (Virat Kohli) ಭಾರತದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ. ವಿರಾಟ್​ ಕೊಹ್ಲಿಯ ಕಾಯಂ ಟೀಕಾಕಾರರಾಗಿರುವ ಗಂಭೀರ್​ ಅವರೇ ಈ ಮಾತು ಹೇಳಿದ್ದು ವಿಶೇಷ ಎನಿಸಿದೆ.

ಚೆನ್ನೈನಲ್ಲಿ ಶುಕ್ರವಾರ (ಅಕ್ಟೋಬರ್ 8) ನಡೆದ ಪಂದ್ಯದಲ್ಲಿ ಕೊಹ್ಲಿ 85 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾವನ್ನು 6 ವಿಕೆಟ್​ಗಳಿಂದ ಸೋಲಿಸಲು ಭಾರತಕ್ಕೆ ಸಹಾಯ ಮಾಡಿದರು. ವಿಶ್ವ ಕಪ್​ 2023ರಲ್ಲಿ ಮೆನ್ ಇನ್ ಬ್ಲೂ ಗೆಲುವಿನ ಆರಂಭವನ್ನು ಪಡೆದ ನಂತರ, ಗಂಭೀರ್ ಅವರು ಏಕದಿನ ಅಂತಹ ಕಠಿಣ ಪಿಚ್​ನಲ್ಲಿ ಚೇಸಿಂಗ್ ಮಾಡುವಾಗ ಆಟವನ್ನು ಅರಿತುಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಈ ವೇಳೆ ಕೊಹ್ಲಿಯಿಂದ ಒತ್ತಡವನ್ನು ಸಹಿಸಿಕೊಳ್ಳುವ ಕಲೆಯನ್ನು ಕಲಿಯುವಂತೆ ಯುವಕರಿಗೆ ಸಲಹೆ ನೀಡಿದರು.

ನಿಮ್ಮ ತಂಡಕ್ಕೆ ಭದ್ರ ಬುನಾದಿ ನಿರ್ಮಿಸಲು ಕೇವಲ ದೊಡ್ಡ ಶಾಟ್​ಗಳಿಗಿಂತ ಒತ್ತಡವನ್ನು ನಿಭಾಯಿಸಿ, ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳುವ ಕ್ರಿಕೆಟ್​​ನತ್ತ ಗಮನ ಹರಿಸುವ ಮಹತ್ವವನ್ನು ಅವರು ಒತ್ತಿಹೇಳಿದ್ದಾರೆ.

ಸ್ಟಾರ್ ಸ್ಪೋಟ್ಸ್​​ನಲ್ಲಿ ಮಾತನಾಡಿದ ಗೌತಮ್ ಗಂಭೀರ್, “ಆಟಗಾರ ಆಟವನ್ನು ಅರಿತುಕೊಳ್ಳುವ ರೀತಿ ಪ್ರಮುಖವಾಗಿರುತ್ತದೆ ನಾನು ಭಾವಿಸುತ್ತೇನೆ. ಮೊದಲನೆಯದಾಗಿ, ನೀವು ಆ ದೊಡ್ಡ ಮೊತ್ತವನ್ನು ಬೆನ್ನಟ್ಟಬೇಕಾದಾಗ ನೀವು ಒತ್ತಡವನ್ನು ನಿಭಾಯಿಸಬೇಕಾಗುತ್ತದೆ. ನೀವು ಈ ಆತ್ಮವಿಶ್ವಾಸವನ್ನು ಹೊಂದಿರಬೇಕು, ನೀವು ಅದನ್ನು ಯಾವುದೇ ಪರಿಸ್ಥಿತಿ ಮತ್ತು ಸ್ಥಾನದಿಂದ ಬ್ಯಾಟಿಂಗ್ ಆರಂಭಿಸಬಹುದು. ಆದರೆ, ಏಕದಿನ ಕ್ರಿಕೆಟ್​​ನಲ್ಲಿ ಮೊದಲು ಒತ್ತಡವನ್ನು ನಿಭಾಯಿಸಬೇಕು. ದೊಡ್ಡ ಶಾಟ್​​ಗಳನ್ನು ಹೊಡೆಯುವುದಕ್ಕೆ ಅಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

ವಿಕೆಟ್​ಗಳ ನಡುವಿನ ಓಟವೂ ಮುಖ್ಯ

2011 ರ ವಿಶ್ವಕಪ್ ವಿಜೇತ ಗಂಭೀರ್​ ಮಾತು ಮುಂದುವರಿಸಿ, ವಿಕೆಟ್​ಗಳ ನಡುವೆ ಓಡುವ ಬಗ್ಗೆಯೂ ಅರಿತುಕೊಳ್ಳಬೇಕು. ಕಡಿಮೆ ಡಾಟ್ ಬಾಲ್ ಗಳನ್ನು ಆಡಿದಷ್ಟೂ, ಬ್ಯಾಟರ್​ ವಿಶ್ವಾಸ ಹೆಚ್ಚುತ್ತದೆ. ಏಕೆಂದರೆ ಈ ಹೊಸ ನಿಯಮದಲ್ಲಿ 30 ಯಾರ್ಡ್​ ಸರ್ಕಲ್​ ಒಳಗೆ ಒಳಗೆ ಐದು ಫೀಲ್ಡರ್ ಗಳು ಇರುತ್ತದೆ. ಜತೆಗೆ ರನ್​ ಗಳಿಗೆ ವೇಗ ಹೆಚ್ಚಿಸಲು ಹೊಸ ಚೆಂಡಿನ ಅನುಕೂಲವೂ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ICC World Cup 2023 : ಹಿಂದೂ ವಿರೋಧಿ ಹೇಳಿಕೆ; ಪಾಕ್​ನ ಸುಂದರಿ ಆ್ಯಂಕರ್​ಳನ್ನು ಒದ್ದೋಡಿಸಿದ ಭಾರತ

ತಂಡವು ತಂಡವು ಒತ್ತಡದಲ್ಲಿದ್ದಾಗ ಆಡಬೇಕಾಗುತ್ತದೆ. ಅದು ಕಡಿಮೆ ಅಪಾಯದ ಕ್ರಿಕೆಟ್ ಎನಿಸಿಕೊಳ್ಳುತ್ತದೆ. ತಂಡಕ್ಕೆ ರನ್​ ಅಡಿಪಾಯ ನಿರ್ಮಿಸುವುವೂ ಮುಖ್ಯ. ವಿರಾಟ್​ ಕೇವಲ 5 ಬೌಂಡರಿಗಳೊಂದಿಗೆ 70 ರನ್ ಗಳಿಸಿದ್ದಾರೆ. ಉಳಿದ ರನ್​ಗಳು ವಿಕೆಟ್​ಗಳ ನಡುವಿನ ಓಟದಿಂದ ಬಂದಿದೆ. ಸ್ಪಿನ್ ಬೌಲಿಂಗ್​ಗೆ ಆಡುವ ಸಾಮರ್ಥ್ಯವನ್ನು ತೋರಿಸುತ್ತದೆ. ಸ್ಪಿನ್ ಬೌಲಿಂಗ್ ವಿರುದ್ಧ ಸ್ಟ್ರೈಕ್ ಬದಲಾಯಿಸಉವ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹೇಳಿದರು.

ಕಠಿಣ ಸಂದರ್ಭಗಳಲ್ಲಿ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಯುವಕರು ಖಂಡಿತವಾಗಿಯೂ ಕೊಹ್ಲಿಯಿಂದ ಕಲಿಯಬೇಕಾಗಿದೆ ಎಂದು ಗಂಭೀರ್ ಹೇಳಿದರು.

ವಿರಾಟ್​ ಕೊಹ್ಲಿ ತುಂಬಾ ಸ್ಥಿರವಾಗಿದ್ದಾರೆ. ಡ್ರೆಸ್ಸಿಂಗ್ ರೂಮ್​​ನಲ್ಲಿರುವ ಈ ಯುವ ಕ್ರಿಕೆಟಿಗರು ಫಿಟ್ನೆಸ್​ ಮಹತ್ವ, ವಿಕೆಟ್ ನಡುವೆ ಓಡುವ ಪ್ರಾಮುಖ್ಯತೆ ಮತ್ತು ಮಧ್ಯದಲ್ಲಿ ಸ್ಟ್ರೈಕ್ ಅನ್ನು ಬದಲಾಯಿಸಬೇಕು ಎಂಬುದರ ಮಹತ್ವವನ್ನು ವಿರಾಟ್​ ಕೊಹ್ಲಿಯಿಂದ ಕಲಿಯುತ್ತಾರೆ ಎಂದು ನನಗೆ ಖಾತ್ರಿಯಿದೆ, ಏಕೆಂದರೆ ಟಿ 20 ಕ್ರಿಕೆಟ್​ನ ಜನಪ್ರಿಯತೆ ಬಳಿಕ ಹೊಸ ಹುಡುಗರು ಚೆಂಡನ್ನು ಮೈದಾನದಿಂದ ಹೊರಗೆ ಹೊಡೆಯಲು ಮಾತ್ರ ಬಯಸುತ್ತಾರೆ ಎಂಬುದಾಗಿ ಗಂಭೀರ್​ ನುಡಿದರು.

Exit mobile version