Edited By: Pragati Bhandari

ವಿನಯ್‌ ಗೌಡ ಅವ ಬೆರಳಿಗೆ ಏಟಾದರೆ, ಕಾರ್ತಿಕ್‌ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದಕ್ಕೆಲ್ಲ ಕಾರಣ . ʻಕೊಳೆ ಒಳ್ಳೇದಲ್ಲ’ ಟಾಸ್ಕ್‌.

ಈ ಟಾಸ್ಕ್‌ ಆಡುವಾಗ ವಿನಯ್‌ ಅವರು ಬಹಳ ಅಗ್ರೆಸಿವ್‌ ಆಗಿ ಆಡಿದರು. ಅವರ ಕೈ ಬೆರಳಿಗೆ ಏಟು ಆಗಿದೆ. ಈ ಕಾರಣದಿಂದ ಅವರು ಗೇಮ್​ನಿಂದ ಹೊರಗೆ ಇರುವ ಪರಿಸ್ಥಿತಿ ಬಂದಿದೆ. 

 ತುಕಾಲಿ ಸಂತೋಷ್ ಅವರು ವಿನಯ್​ಗೆ ಈ ವಿಚಾರದಲ್ಲಿ ಮೊದಲೇ ಎಚ್ಚರಿಕೆ ನೀಡಿದ್ದರು. ‘

ಆದರೂ ವಿನಯ್‌ ಅವರು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಇನ್ನು ಕಾರ್ತಿಕ್‌ ಅವರಿಗೆ ಬೆನ್ನು ನೋವಾದ ಕಾರಣ ಮಲಗಿ ರೆಸ್ಟ್‌ ಮಾಡುತ್ತಿದ್ದಾರೆ.

ಅಗ್ರೆಸ್ಸಿವ್ ಆದ ಕಾರಣ, ವಿನಯ್ ಅವರನ್ನ 2 ನಿಮಿಷ ಆಚೆ ನಿಲ್ಲಿಸಿದರು ಉಸ್ತುವಾರಿ ಸಿರಿ.

ಮೂರನೇ ಸುತ್ತಿನಲ್ಲಿ ಎರಡು ತಂಡಗಳಿಂದ ತಲಾ ಇಬ್ಬರು ಮಾತ್ರ ಆಟದಲ್ಲಿ ಭಾಗವಹಿಸಬೇಕಿತ್ತು. 

ಈ ಸುತ್ತಿನಲ್ಲಿ ತುಕಾಲಿ ಹಾಗೂ ಮೈಕಲ್‌ ನುಡವೆ ಕೂಡ ಕುಸ್ತಿ ಆಯಿತು. ತುಕಾಲಿ ಸಂತು ಹಾಗೂ ಮೈಕಲ್ ಮಧ್ಯೆ ತಳ್ಳಾಟ ನಡೆಯಿತು. 

ಮೊದಲ ಸುತ್ತಿನಲ್ಲಿ ಸಂಗೀತಾ ತಂಡ ಗೆಲುವು ಸಾಧಿಸಿತು. ಎರಡನೇ ಸುತ್ತಿನಲ್ಲಿ ತನಿಷಾ ತಂಡ ಗೆದ್ದರೆ, ಮೂರನೇ ಸುತ್ತಿನಲ್ಲಿ ಸಂಗೀತಾ ತಂಡ ಗೆಲುವು ಸಾಧಿಸಿತು. 

ತನಿಷಾ ಹಾಗೂ ಸಂಗೀತಾ ಅವರು ಒಮ್ಮತದ ನಿರ್ಧಾರ ಹೇಳುವಲ್ಲಿ ಸೋತರು. ಹೀಗಾಗಿ ಬಿಗ್‌ ಬಾಸ್‌ 500 ರೂ. ಹಿಂಪಡೆದರು.