Site icon Vistara News

Accidental death | ಪಾಳುಬಿದ್ದ ಕಲ್ಲು ಕೋರೆಯಲ್ಲಿ ಈಜಲು ತೆರಳಿದ್ದ ಯುವಕ ಸಾವು

utaara kannada death

ಕಾರವಾರ: ಪಾಳು ಬಿದ್ದ ಕಲ್ಲಿನ ಕೋರೆಯಲ್ಲಿ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿ ಗ್ರಾಮದ ಹುಲ್ಲುಕ್ಕಿಯ ಕೆಂಪುಕಲ್ಲು ಕ್ವಾರಿಯಲ್ಲಿ ಈ ಘಟನೆ ನಡೆದಿದೆ. ಕಾರ್ಗದ್ದೆ ನಿವಾಸಿ ಜುಬೇರ್ ಇರ್ಶಾದ್ ಅಲಿ ಅಕ್ಬರ್ ಮೃತ ದುರ್ದೈವಿ.

ನೀರಲ್ಲಿ ಮುಳುಗಿದ ಇರ್ಷಾದ್‌ ಅವರನ್ನು ಮೇಲೆತ್ತಿ ತರುತ್ತಿರುವುದು.

ಜುಬೇರ್ ಇರ್ಶಾದ್ ಅಲಿ ಅಕ್ಬರ್ ಅವರು ಶುಕ್ರವಾರ ರಜೆಯಿದ್ದ ಕಾರಣಕ್ಕಾಗಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದರು. ಮಳೆಯಿಂದಾಗಿ ನೀರು ನಿಂತಿದ್ದ ಕ್ವಾರಿಯಲ್ಲಿ ಆಳ ತಿಳಿಯದೆ ಧುಮುಕಿದ್ದಾರೆ. ಆದರೆ, ಅತಿಯಾದ ಆಳವಿದ್ದುದರಿಂದ ಈಜುತ್ತಿದ್ದ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳದಲ್ಲಿ ಸೇರಿದ ಜನರು

ಹಲವು ವರ್ಷಗಳ ಹಿಂದೆ ಕಲ್ಲು ಗಣಿಗಾರಿಕೆ ನಡೆಸಿ ಬಂದ್ ಆಗಿದ್ದ ಕೋರೆ ಇದು. ಇತ್ತೀಚೆಗೆ ಭಾರಿ ಮಳೆ ಸುರಿದಿದ್ದುದಿಂದ ನೀರು ತುಂಬಿತ್ತು. ವಿಷಯ ತಿಳಿದು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಕೊನೆಗೆ ನೀರೆಲ್ಲ ಜಾಲಾಡಿ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ನೀರಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿದ ಮಹಿಳೆ; ಶಿಶುವನ್ನು ನೆಲದ ಮೇಲೆ ಮಲಗಿಸಿ ನಾಲೆಗೆ ಹಾರಿ ಸಾಹಸ!

Exit mobile version