Site icon Vistara News

Karnataka Election | ಕಾಂಗ್ರೆಸ್‌ನವರು ಸತ್ಯ ಹೇಳಿದ ದಿನ ಸಾವು ಬರುತ್ತದೆ: ಗೋವಿಂದ ಕಾರಜೋಳ ವಾಗ್ದಾಳಿ

karnataka-elections-‌congress will die when congressmen starts saying truth

ಬೆಂಗಳೂರು: ಕಾಂಗ್ರೆಸ್‌ನವರು ಯಾವತ್ತೂ ಸತ್ಯವನ್ನು ಹೇಳಿಲ್ಲ. ಅವರು ಸತ್ಯ ಹೇಳಿದ ದಿನ ಸಾವು ಬರುತ್ತದೆ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.

ತಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ಘೋಷಣೆ ಕುರಿತು ಪ್ರತಿಕ್ರಿಯೆ ನೀಡಿದ ಕಾರಜೋಳ, ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ 60 ವರ್ಷ ಕಾಂಗ್ರೆಸ್ ಅವರು ಆಡಳಿತ ಮಾಡಿ ಪಾಪದ ರಾಶಿ ಹಾಕಿದru. ಈಗ ಅದನ್ನು ಸ್ವಚ್ಛ ಮಾಡುತ್ತಿದ್ದಾರೆ. ಪೊರಕೆ ಹಿಡಿದುಕೊಂಡು ಕ್ಲೀನ್ ಮಾಡುತ್ತಿದ್ದಾರೆ.

ಕಾಂಗ್ರೆಸ್‌ನವರಿಗೆ ಈಗ ಪ್ರಾಯಶ್ಚಿತ್ತ ಆಗಿದೆ. ಅದಕ್ಕೆ ಈ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ಅವರಿಗೆ ಶಾಶ್ವತವಾಗಿ ಕಸ ಗುಡಿಸುವ ಕೆಲಸ ಖಾಯಂ ಆಗಿ ಇರುತ್ತದೆ. ಕಾಂಗ್ರೆಸ್ 60 ವರ್ಷ ಜನರಿಗೆ ಮೋಸ ಮಾಡಿತು. ಗರೀಬಿ ಹಠಾವೋ ಎಂದರು, ಆದರೆ ಗರೀಬಿ ಹಠಾವೋ ಆಯಿತ? ಕಾಂಗ್ರೆಸ್‌ ಗರೀಬಿ ಹಟಾವೋ ಆಯಿತು ಅಷ್ಟೆ.

ದಲಿತರನ್ನು 100% ವಿದ್ಯಾವಂತರಾಗಿ ಮಾಡುತ್ತೇವೆ ಎಂದರು,ಅದನ್ನೂ ಮಾಡಲಿಲ್ಲ. ಅನಕ್ಷರಸ್ಥರಾಗಿ ಮಾಡಿಕೊಂಡು ದಲಿತರನ್ನು ಓಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದರು. ನಮ್ಮ ಸರ್ಕಾರ ಈಗಾಗಲೇ 75 ಯುನಿಟ್ ವಿದ್ಯುತ್ ದಲಿತರಿಗೆ ಉಚಿತವಾಗಿ ಕೊಡುತ್ತಿದೆ. ನಾವು ಘೋಷಣೆ ಮಾಡಿಲ್ಲ. ಅನುಷ್ಠಾನ ಮಾಡಿದ್ದೇವೆ. ಕಾಂಗ್ರೆಸ್‌ನವರು ಸುಳ್ಳು ಘೋಷಣೆ ಮಾಡುತ್ತಿದ್ದಾರೆ. ಈಗ ಉಚಿತ ವಿದ್ಯುತ್ ಕೊಡುತ್ತೇವೆ ಎನ್ನುವವರು 60 ವರ್ಷ ಏಕೆ ಕೊಡಲಿಲ್ಲ? ಈಗ 200 ಯುನಿಟ್‌ ವಿದ್ಯುತ್ ಎಲ್ಲಿಂದ ಕೊಡುತ್ತಾರೆ? ಮೋಸ ಮಾಡುವುದು ಕಾಂಗ್ರೆಸ್ ಗುಣ ಎಂದರು.

10 ಕೆಜಿ ಅಕ್ಕಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಪ್ರಧಾನಿ ಮೋದಿಯವರು 10 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಆಹಾರ ಭದ್ರತೆ, ಗರೀಬ್‌ ಕಲ್ಯಾಣ ಅಡಿ 10 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಕಾಂಗ್ರೆಸ್‌ನವರು ಈಗ ಮತ್ತೆ 10 ಕೆ.ಜಿ. ಅಕ್ಕಿ ಎಲ್ಲಿಂದ ಕೊಡುತ್ತಾರೆ? ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ಅಕ್ಕಿ ಮೋದಿಯದ್ದು, ಚೀಲದ ಮೇಲೆ ಸಿದ್ದರಾಮಯ್ಯ ಫೋಟೊ ಇತ್ತು ಅಷ್ಟೆ. ಕಾಂಗ್ರೆಸ್‌ನವರು ಯಾವತ್ತೂ ಸತ್ಯ ಹೇಳಿಲ್ಲ. ಕಾಂಗ್ರೆಸ್‌ ಬೋಗಸ್. ಕಾಂಗ್ರೆಸ್‌ನವರು ಸತ್ಯ ಹೇಳಿದ ದಿನ ಕಾಂಗ್ರೆಸ್ ಸಾಯುತ್ತದೆ ಎಂದರು.

ತಮ್ಮ ಪುತ್ರ ಧಮ್ಕಿ ಹಾಕಿರುವ ಆಡಿಯೋ ಕುರಿತು ಪ್ರತಿಕ್ರಿಯಿಸಿ, ಅದೆಲ್ಲಾ ಬೋಗಸ್ ಆಡಿಯೋ ಎಂದರು.

ಇದನ್ನೂ ಓದಿ | Congress Guarantee | ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಉಚಿತ ವಿದ್ಯುತ್‌: ಪ್ರಜಾಧ್ವನಿ ಯಾತ್ರೆಯಲ್ಲಿ ಮೊದಲನೆ ಘೋಷಣೆ

Exit mobile version