Site icon Vistara News

Murder Case: ಪತ್ನಿಯ ಕತ್ತು ಸೀಳಿದ ಪತಿ ಪರಾರಿ, ಸಣ್ಣದಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

#image_title

ಬೆಂಗಳೂರು: ಇಲ್ಲಿನ ನಂಜಪ್ಪ ಸರ್ಕಲ್‌ ಬಳಿ ಪತಿಯೊಬ್ಬ ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ (Murder Case) ಮಾಡಿರುವ ಘಟನೆ ಸೋಮವಾರ ನಡೆದಿದೆ. ಕೌಸರ್ ಮುಬೀನ್ (34) ಕೊಲೆಯಾದವರು.

ನದೀಂ ಹಾಗೂ ಕೌಸರ್‌ ವಿವಾಹವಾಗಿದ್ದರೂ, ಕುಟುಂಬ ಕಲಹ ಹಿನ್ನೆಲೆ ಇಬ್ಬರು ಪ್ರತ್ಯೇಕವಾಗಿ ವಾಸವಿದ್ದರು ಎನ್ನಲಾಗಿದೆ. ಸೋಮವಾರ ಕೌಸರ್‌ ಮನೆಗೆ ಬಂದವನೇ ಮನೆಬಾಗಿಲ ಬಳಿ ನಿಂತು ನದೀಂ ಜಗಳವಾಡಿದ್ದಾರೆ. ಜಗಳ ಅತಿರೇಖಕ್ಕೆ ತಿರುಗಿದ್ದು ಸಿಟ್ಟಿಗೆದ್ದ ನದೀಂ ಹತ್ಯೆ ಮಾಡಲೆಂದೇ ತಂದಿದ್ದ ಚಾಕುವಿನಿಂದ ಕೌಸರ್‌ನ ಕುತ್ತಿಗೆಗೆ‌ ಇರಿದಿದ್ದಾನೆ.

ಇದನ್ನೂ ಓದಿ: Assembly Session: ಇದು ಕೊನೆಯ ಸದನ; ಯಾರೂ ಮಿಸ್‌ ಮಾಡದೇ ಬನ್ನಿ: ಶಾಸಕರಿಗೆ ಮನವಿ ಮಾಡಿದ ಸ್ಪೀಕರ್‌ ಕಾಗೇರಿ

ಕೌಸರ್‌ ಮನೆ ಬಾಗಿಲ ಹೊಸ್ತಿಲಲ್ಲೆ ಬಿದ್ದು ರಕ್ತಸ್ರಾವವಾಗಿ ಪ್ರಾಣಬಿಟ್ಟಿದ್ದಾರೆ. ದಂಪತಿ ಜಗಳವಾಡುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹತ್ಯೆ ಮಾಡಿ ಆರೋಪಿ ನದೀಂ ನಾಪತ್ತೆ ಆಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಶ್ವಾನ‌ದಳ ಮತ್ತು FSL ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ರವಾನಿಸಿದ್ದಾರೆ.

Exit mobile version