Site icon Vistara News

ಸಂಡೇ ರೀಡ್‌ | ಕ್ಯಾಪ್ಟನ್‌ ಗೋಪಿನಾಥ್‌ ಜೀವನದ ಒಳʼಹರಿವುʼ ತೆರೆದಿಡುವ ಪುಸ್ತಕ ʼನಮ್ಮ ಭಾರತʼ

Namma Bharata Book By Vijay Joshi

ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಅವರು ಬರೆದಂತಹ, ವಿಜಯ್ ಜೋಷಿ ಅವರು ಕನ್ನಡಕ್ಕೆ ಅನುವಾದಿಸಿದ ‘ನಮ್ಮ ಭಾರತ’ ಪುಸ್ತಕವನ್ನು ಹರಿವು ಬುಕ್ಸ್ ಪ್ರಕಟಮಾಡಿದೆ. ಇದು ಕ್ಯಾಪ್ಟನ್ ಗೋಪಿನಾಥ್ ಅವರು ಬರೆದಂಥ ಲೇಖನಗಳ ಗುಚ್ಛ. ಹಾಸನ ಜಿಲ್ಲೆಯ ಗೊರೂರು ಎಂಬ ಸಣ್ಣ ಗ್ರಾಮದ ಮೂಲದವರಾದ ಗೋಪಿನಾಥ್ ಅವರು ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದವರು. ೧೯೭೧ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಕೂಡ ಭಾಗಿಯಾದವರು. ಸೇನೆಯಿಂದ ನಿವೃತ್ತರಾದ ಬಳಿಕ ಇವರು ‘ಏರ್ ಡೆಕ್ಕನ್’ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮುಂದಾದರು. ಭಾರತದ ಬಡವರು, ಮಧ್ಯಮ ವರ್ಗದವರು ವಿಮಾನದಲ್ಲಿ ಹಾರಾಡುವಂತಾಗಬೇಕು ಎಂಬ ಕನಸನ್ನು ಹೋಮದಿದವರು. ಅತ್ಯಂತ ಕಡಿಮೆ ಬೆಲೆಯಲ್ಲಿ ವಿಮಾನ ಪ್ರಯಾಣದ ಅನುಭವವನ್ನು ಕೊಟ್ಟ ಉದ್ಯಮಿ ಕ್ಯಾಪ್ಟನ್ ಜಿ. ಆರ್. ಗೋಪಿನಾಥ್.

ಕ್ಯಾಪ್ಟನ್ ಜಿ. ಆರ್ ಗೋಪಿನಾಥ್ ಲೇಖನಗಳಲ್ಲಿ ಪ್ರಾಮಾಣಿಕವಾದ ಸಾಮಾಜಿಕ ಕಳಕಳಿಯನ್ನು ಕಾಣಬಹುದು. ರಾಜಕಾರಣ, ಉದ್ಯಮ ಹಾಗೂ ಅರ್ಥವ್ಯವಸ್ಥೆಯ ಬಗ್ಗೆ ಅವರಿಗುರುವ ಒಳನೋಟಗಳು ಲೇಖನಗಳಲ್ಲಿ ಇಣುಕುತ್ತವೆ. ವಸ್ತುನಿಷ್ಠವಾದ ಬರವಣಿಗೆ ಕೃತಿಯ ಶಕ್ತಿ ಎನ್ನಬಹುದು. ದೇಶದ ಅಭಿವೃದ್ಧಿಯ ಕುರಿತು ಹಾಗೂ ಸ್ಟಾರ್ಟ್ ಅಪ್ ಉದ್ಯೋಗಗಳ ಕುರಿತು ಹೊಸ ಹೊಳಹುಗಳನ್ನು ನೀಡಲಾಗಿದೆ. ದೇಶದ ವಾಸ್ತವ ಸ್ಥಿತಿಯ ಬಗ್ಗೆ ಹೇಳುತ್ತಲೇ ದೇಶಪ್ರೇಮವನ್ನು ವ್ಯಕ್ತಪಡಿಸುವ ಪ್ರಯತ್ನವನ್ನು ಇಲ್ಲಿ ಕಾಣಬಹುದು. ವಿಸ್ತಾರವಾದ ಓದು ಹಾಗೂ ಜೀವನಾನುಭವವದ ಆಧಾರದ ಮೇಲೆ ರಚಿಸಲಾಗಿರುವಂತಹ ಈ ಕೃತಿಯು ಓದುಗನನ್ನು ಆತ್ಮಾವಲೋಕನಕ್ಕೆ ಎಡೆಡಮಾಡಿಕೊಡುತ್ತದೆ. ಗಂಭೀರವಾದ ವಿಚಾರಗಳಿರುವ ಈ ಕೃತಿಯಲ್ಲಿ ವೈಯಕ್ತಿಕ ಸ್ಪರ್ಶವೂ ಇದೆ. ಇದರಿಂದ ಕೃತಿಯು ಆಪ್ತವಾಗುತ್ತದೆ. ಕ್ಯಾಪ್ಟನ್ ಗೋಪಿನಾಥ್ ಅವರ ವಿಚಾರಧಾರೆಗಳನ್ನು ಲೇಖಕ ವಿಜಯ್ ಜೋಷಿ ಸಶಕ್ತವಾಗಿ ನಿರೂಪಿಸಿದ್ದಾರೆ.

ಈ ಪುಸ್ತಕದ ಒಂದು ಅಧ್ಯಾಯ ಇಲ್ಲಿದೆ:

ಅಶಾಂತಿಯ ನಡುವೆ ಎಲ್ಲಿಯ ಔದ್ಯಮಿಕ ಉತ್ಸಾಹ?

ಬಲಿಷ್ಠ ನಾಯಕರು ಟೀಕೆಯನ್ನು ಕಂಡಾಗ ಕೋಪಗೊಳ್ಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನ್ ಪತ್ರಿಕಾ ಗೇಟ್‌ನ ಉದ್ಘಾಟನಾ ಸಮಾರಂಭದಲ್ಲಿ ‘ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಟೀಕೆಗಳು ಬಹಳ ಸಹಜ. ಆ ಟೀಕೆಗಳು ಪ್ರಜಾತಂತ್ರವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ’ ಎಂದರು. ಈ ಮಾತು ಮಿಷಿ ನೀಡಿತು, ಆಶ್ಚರ್ಯವನ್ನೂ ತರಿಸಿತು. ಅವರ ಮಾತಿನ ಹಿಂದೆ ಬೇರೆ ಯಾವ ಅರ್ಥವೂ ಇಲ್ಲ ಎಂದು ಭಾವಿಸಿ ನಾನು, ರೋಗಪೀಡಿತವಾಗಿರುವ ಅರ್ಥ ವ್ಯವಸ್ಥೆಯ ಕುರಿತು ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅರ್ಥ ವ್ಯವಸ್ಥೆಯ ಮನಶ್ವೇತನಕ್ಕೆ ಅಗತ್ಯವಿರುವ ವ್ಯವಸ್ಥೆಯೊಂದನ್ನು ಕಟ್ಟಲು ಪ್ರಧಾನಿಯವರು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಒಂದೆರಡು ಮಾತು ಆಡುತ್ತೇನೆ.

ಈ ವರ್ಷದ ಆರಂಭದಲ್ಲಿ, ಅಂದರೆ ಜನವರಿಯಲ್ಲಿ (2020ರ ಜನವರಿ) ಮೋದಿ ಅವರು ನವದೆಹಲಿಯಲ್ಲಿ ಉದ್ಯಮ ವಲಯದ ಕೆಲವು ಮುಖಂಡರನ್ನು ಭೇಟಿ ಮಾಡಿದರು. ಇವರು ಯುಪಿಎ ಸರ್ಕಾರದ ಅವಧಿಯಲ್ಲಿ ಕೂಡ ಸರ್ಕಾರದ ಪ್ರಮುಖರನ್ನು ಭೇಟಿ ಮಾಡುತ್ತಿದ್ದವರೇ, ದೇಶದ ಅರ್ಥ ವ್ಯವಸ್ಥೆಯ ನಿಯ ಬಗ್ಗೆ ಉದ್ಯಮದ ಪ್ರಮುಖರಿಂದ ಒಂದಿಷ್ಟು ಮಾಹಿತಿ ಪಡೆಯುವ ಉದ್ದೇಶ ಈ ಭಯ ಹಿಂದೆ ಇತ್ತು. ಅರ್ಥ ವ್ಯವಸ್ಥೆಯು ಆ ಹೊತ್ತಿಗಾಗಲೇ ಇಳಿಜಾರಿನ ಹಾದಿಯಲ್ಲಿತ್ತು. ನಂತರ ಕೋಡ್ ಉರಣದಿಂದಾಗಿ ಅದು ತೀರಾ ಕೆಟ್ಟ ಸ್ಥಿತಿಗೆ ಕುಸಿಯಿತು. ತೀರಾ ನೀರಸವಾದ ಬಜೆಟ್ ಮಂಡನೆ ಆದಾಗಲೂ ಅದನ್ನು ಹಾಡಿಹೊಗಳುವ ನಮ್ಮ ಉದ್ಯಮಗಳ ಕೆಲವು ನಾಯಕರು ಯಾವಾಗಲೂ ಮಾತನಾಡುವ ಸಂಗತಿಗಳ ಬಗ್ಗೆಯೇ ಮಾತನಾಡಿದರು. ಸಾಲ ಸಿಗದಿರುವುದು, ಬೇಡಿಕೆಯನ್ನು ಹೆಚ್ಚಿಸಬೇಕಿರುವುದು, ತೆರಿಗೆ ಭಯೋತ್ಪಾದನೆ, ಸರಕು ಮತ್ತು ಸೇವಾ ತೆಂಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಸರಳೀಕರಿಸುವುದು, ಹಣಕಾಸಿನ ನೀತಿಗಳು, ವಿತ್ತೀಯ ಕೊರತೆ ಇತ್ಯಾದಿ ಸಂಗತಿಗಳ ಬಗ್ಗೆ ಅವರು ಮಾತುಕತೆ ನಡೆಸಿದರು.

ಪ್ರಧಾನಿಯವರ ಹಲವು ಸಭೆಗಳಲ್ಲಿ ಹೇಳದೆ ಇದ್ದ ಸಂಗತಿಯು, ಸಭೆಗಳಲ್ಲಿ ಹೇಳಿದ ವಿಚಾರಗಳಿಗಿಂತ ಹೆಚ್ಚು ಮಹತ್ವದವು – ಅದು, ಸರ್ಕಾರ ಹಾಗೂ ದೇಶದ ಹಲವು ವರ್ಗಗಳ ನಡುವೆ ಉಂಟಾಗಿರುವ ವಿಶ್ವಾಸದ ಕೊರತೆಯನ್ನು ನೀಗಿಸುವುದು. ಇಂದಿನ ಬಲಪಂಥೀಯ ರಾಜಕಾರಣವು ಕೋಮು ಸೌಹಾರ್ದವನ್ನು ಮತ್ತೆ ಮತ್ತೆ ಕದಡುತ್ತಿದೆ, ಇದು ಸಾಮಾಜಿಕ ಸೌಹಾರ್ದ ಪಸರಿಸಲು ಅವಕಾಶ ಕೊಡುತ್ತಿಲ್ಲ. ಎಂಬುದನ್ನು ಮೋದಿ ಅವರಿಗೆ ಹೇಳಬೇಕಿತ್ತು, ಎಡಪಂಥದಲ್ಲಿ ಗುರುತಿಸಿಕೊಂಡಿರುವ, ಅತಿರೇಕದ ವರ್ತನೆ ತೋರುವ ಕೆಲವು ಸಂಘಟನೆಗಳು ಯಾವ ತಪ್ಪನ್ನೂ ಮಾಡುತ್ತಿಲ್ಲ ಎನ್ನಲು ಈ ಮಾತು ಹೇಳುತ್ತಿಲ್ಲ. ಆದರೆ ಒಕ್ಕೂಟ ಸರ್ಕಾರವು ದೇಶದ ರಾಜಕೀಯ ಹಾಗೂ ಸಾಮಾಜಿಕ ಬದುಕಿನಲ್ಲಿ ಇರುವ ಎಡ ಬಲ ಪಂಥೀಯ ಮತೀಯವಾದಿ, ಮೂಲಭೂತವಾದಿ ಸಂಘಟನೆಗಳ ವಿಚಾರದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳಬೇಕು, ತಂತವಾಗಿ ಮತ್ತು ನ್ಯಾಯಸಮ್ಮತವಾಗಿ ಅವುಗಳ ವಿರುದ್ಧ ಕ್ರಮ ಜರುಗಿಸಬೇಕು ಎನ್ನಲು ಈ ಮಾತು ಹೇಳಿದ್ದೇನೆ. ಇಷ್ಟೇ ಅಲ್ಲ, ಸರ್ಕಾರದ ಹೊಗಳುಭಟರ ವರ್ಗ ಹಾಗೂ ಸರ್ಕಾರದ ವಿರೋಧಿಗಳ ನಡುವಿನ ಕಂದಕವನ್ನು ಮುಚ್ಚುವ ಕೆಲಸ ಮಾಡಬೇಕು ಸಹ, ಅರ್ಥ ವ್ಯವಸ್ಥೆಯು ಮತ್ತೆ ಹಳಿಗೆ ಬರಬೇಕು ಎಂದಾದರೆ ಶಾಂತಿ ಮತ್ತು ಸ್ಥಿರತೆ ಮೂಲಭೂತ ಅಗತ್ಯಗಳು ಎಂಬ ಸರಳ ಮಾತನ್ನು ದೇಶದ ಉದ್ಯಮ ವಲಯವು ಪ್ರಧಾನಿಯವರಿಗೆ, ಅವರ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಹೇಳಬೇಕು, ದೇಶದ ಅರ್ಥ ವ್ಯವಸ್ಥೆಯನ್ನು ಕಾಡುತ್ತಿರುವ ಯಾವುದೇ ರೋಗಕ್ಕೆ ಮದ್ದು ನೀಡುವ ಮುನ್ನ ಶಾಂತಿ ಮತ್ತು ಸ್ಥಿರತೆ ಇರುವಂತೆ ನೋಡಿಕೊಳ್ಳಬೇಕು.

ಕೆಲವು ಕಂಪನಿಗಳ ಷೇರು ಮೌಲ್ಯವು ಹೆಚ್ಚಾಗುವಂತೆ ಮಾಡಿ, ಮೂಲಕ ಮಾರುಕಟ್ಟೆಯ ಸೂಚ್ಯಂಕಗಳು ಬರಿಕೆಯಲ್ಲಿ ಇರುವಂತೆ ಮಾಡಿದರೆ ಅರ್ಥ ವ್ಯವಸ್ಥೆಯ ಸಮಸ್ಯೆಗಳನ್ನು ಸರಿಪಡಿಸಲು ಆಗುವುದಿಲ್ಲ, ಸಾಮಾಜ ಸಂಘರ್ಷಗಳಿಗೆ ಕೊನೆಯೇ ಇಲ್ಲದಿದ್ದರೆ ನಾವು ಅರ್ಥಪೂರ್ಣ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ, ಬೇರೆ ಯಾವ ಸಂಗತಿಗಳೂ ತನಗೆ ಗೊತ್ತಿಲ್ಲ ಎಂಬಂತ ವರ್ತಿಸುವ, ಕೆಲವು ಪ್ರಯೋಜನಗಳಿಗೆ ಮಾತ್ರ ಒತ್ತಾಯಿಸುವ ಧೋರಣೆಯನ್ನು ದೇಶದ ಉದ್ಯಮ ವಲಯ ಕೈಬಿಡಬೇಕು. ಅಮೆರಿಕದಲ್ಲಿ ಜನಾಂಗೀಯ ಸಂಘರ್ಷ ನಡೆಯುತ್ತಿದ್ದ ಸಂದರ್ಭದಲ್ಲಿ ಎಮರ್ಸನ್, ‘ಶಾಂತಿ ಇರುವಲ್ಲಿ ಬೆಳೆಯುವ ಗಿಡ ವಾಣಿಜ್ಯ ವಹಿವಾಟು, ಇದು ಶಾಂತಿ ಸೃಷ್ಟಿಯಾದ ತಕ್ಷಣ ಬೆಳೆಯುತ್ತದೆ, ಶಾಂತಿ ಇರುವಷ್ಟು ಕಾಲ ಬೆಳೆಯುತ್ತ ಇರುತ್ತದೆ’ ಎಂದು ಹೇಳಿದ್ದ.

ಅಸಮಾನತೆಯು ವ್ಯಾಪಕವಾಗಿ ವಿಸ್ತರಿಸಿ ಬಹುಕಾಲ ಉಳಿದುಕೊಂಡರೆ, ಸಮಾಜದಲ್ಲಿ ಸಂಘರ್ಷವು ನಿರಂತರವಾಗಿ ಇದ್ದರೆ ವಾಣಿಜ್ಯ ವಹಿವಾಟುಗಳು ಹೆಚ್ಚು ಕಾಲ ಸಮೃದ್ಧಿಯಾಗಿ ನಡೆಯಲು ಸಾಧ್ಯವಿಲ್ಲ. (ರಾಜಕಾರಣಿಗಳು ಹಾಗೂ ಅಧಿಕಾರಶಾಹಿ ಜೊತೆ ಅಕ್ರಮ ನಂಟು ಬೆಳೆಸಿಕೊಂಡಿರುವ ವಾಣಿಜ್ಯ ವಹಿವಾಟುಗಳು ಕೂಡ ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಕಾಲ ಬೆಳವಣಿಗೆ ಕಾಣಲಾರವು. ವರ್ಗ, ಜಾತಿ, ಧರ್ಮದ ಹೆಸರಿನಲ್ಲಿ ನಡೆಯುವ ಸಂಘರ್ಷವು ಅರ್ಥ ವ್ಯವಸ್ಥೆ ಕುಸಿಯುವಂತೆ ಮಾಡುತ್ತದೆ. ಒಂದು ದೊಡ್ಡ ಹಡಗು ಮುಳುಗಿದರೆ ಅದರಲ್ಲಿ ಇರುವ ಎಲ್ಲರೂ ಮುಳುಗುತ್ತಾರೆ.

ಈಗ ಕೆಲವು ಪ್ರಾಮಾಣಿಕ ತನ್ನೊಪ್ಪಿಗೆಗಳು ಹಾಗೂ ಕಟು ಸತ್ಯಗಳ ಕಡೆ ಗಮನ ಹರಿಸೋಣ, ದೇಶದಲ್ಲಿ ಉದಾರವಾದಿ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ರಾಜಕಾರಣಿಗಳಿಗಿಂತಲೂ ಹೆಚ್ಚಾಗಿ ಉದ್ಯಮ ವಲಯದ ಕೆಲವು ದೈತ್ಯರೇ ದೊಡ್ಡ ತಡೆಸಲು, ಏಕೆಂದರೆ ಅವರಿಗೆ ಸ್ಪರ್ಧೆ ಇರುವುದು ಇಷ್ಟವಿಲ್ಲ. ಅಂಬಾಸೆಡರ್ ಕಾರುಗಳ ಕಾಲದ ಲೈಸೆನ್ಸ್ ರಾಜ್ ವ್ಯವಸ್ಥೆ ಅವರಿಗೆ ಮತ್ತೆ ಬೇಕು. ಉದ್ಯಮ ಜಗತ್ತಿನಲ್ಲಿ ಎತ್ತರಕ್ಕೆ ಏರಿದ ನಂತರ ಅವರು ತಾವು ಈ ಹಂತಕ್ಕೆ ಬಂದಿದ್ದಕ್ಕೆ ಕಾರಣ ಸುಧಾರಣೆಗಳು ಎಂಬುದನ್ನೇ ಮರೆತುಬಿಡುತ್ತಾರೆ. ನಿಯಮಗಳಿಗೆ ವಿಶೇಷ ವಿನಾಯಿತಿ ಕೋರಲು, ಸ್ಪರ್ಧೆಯಲ್ಲಿ ಬೇರೊಬ್ಬರಿಗಿಂತ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಮರೆಯಲ್ಲಿ ಲಾಬಿ ನಡೆಸುತ್ತಿರುವ ಉದ್ದಿಮೆಗಳು ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ (ಭಾರತದಲ್ಲಿಯೇ ತಯಾರಿಸಿ) ಕರೆಗೆ ವಿರುದ್ಧವಾಗಿವೆ, ಅಲ್ಲದೆ ವಿದೇಶಿ ನೇರ ಬಂಡವಾಳವನ್ನು (ಎಫ್ ಡಿಐ) ಆಕರ್ಷಿಸುವ, ವಾಣಿಜ್ಯೋದ್ಯಮ ನಡೆಸುವ ಪ್ರಕ್ರಿಯೆ ಸುಲಲಿತವಾಗಬೇಕು ಎಂದು ಮೋದಿ ಅವರು ಹೊಂದಿರುವ ಬಯಕೆಗೆ ಕೂಡ ಇವರ ನಡೆಗಳು ಪೂರಕವಾಗಿ ಇಲ್ಲ, ಕೆಲವು ಬಹುರಾಷ್ಟ್ರೀಯ ಕಂಪನಿಗಳು ಕೂಡ ಇದೇ ರೀತಿ ವರ್ತಿಸುವುದಿದೆ.

ಬೆಳವಣಿಗೆಯ ಯಶೋಗಾಥೆಯಿಂದ ಆಕರ್ಷಿತರಾಗಿ ಹೂಡಿಕೆದಾರರು ಭಾರತಕ್ಕೆ ಬರುತ್ತಾರೆ, ಪ್ರಧಾನಿಯವರು, ರಾಜ್ಯಗಳ ನಾಯಕರು ವಿದೇಶಗಳಿಗೆ ಹೋದಾಗ ಅವರ ಮಾತುಗಳಿಂದ ಆಕರ್ಷಿತರಾಗಿಯೂ ಅವರು ಭಾರತದಲ್ಲಿ ಹೂಡಿಕೆಗೆ ಮುಂದಾಗುತ್ತಾರೆ. ಆದರೆ ಒಮ್ಮೆ ಹೂಡಿಕೆ ಮಾಡಿದ ನಂತರದಲ್ಲಿ, ಇಲ್ಲಿ ಸ್ಥಳೀಯ ಉದ್ಯಮ ಪ್ರಮುಖರಿಗೆ ಅನುಕೂಲ ಆಗುವಂತೆ ನಿಯಮಗಳನ್ನು ಮನಸ್ಸಿಗೆ ಬಂದಂತೆ ಬದಲಾಯಿಸಲಾಗುತ್ತದೆ, ಖೆಡ್ಡಾ ತೋಡುವ ಜಾಣ ಅಧಿಕಾರಿಗಳು ನಿಯಮಗಳನ್ನು ತಾವೇ ವ್ಯಾಖ್ಯಾನಿಸುತ್ತಾರೆ, ತಮಗೆ (ವಿದೇಶಿ ಹೂಡಿಕೆದಾರರಿಗೆ) ಇಲ್ಲಿ ಬೆಳೆಯಲು ಅನುಕೂಲ ಕಲ್ಪಿಸುವುದಿಲ್ಲ ಎಂಬುದು ಗೊತ್ತಾದರೆ ಭವಿಷ್ಯದಲ್ಲಿ ಹೂಡಿಕೆಗಳು ಬರುವುದಿಲ್ಲ. ಆಗ ದೇಶದ ಸ್ಥಳೀಯ ಉದ್ದಿಮೆಗಳ ವಿಶ್ವಾಸವೂ ಅಲುಗಾಡುತ್ತದೆ.

ಅಮೆಜಾನ್ ಮತ್ತು ವಾಲ್‌ ಮಾರ್ಟ್ ಕಂಪನಿಗಳು ಈಗಾಗಲೇ ದೂರು ಹೇಳಲು ಆರಂಭಿಸಿವೆ. ವಿದೇಶಿ ಕಂಪನಿಗಳು ಭಾರತದಲ್ಲಿ ವಹಿವಾಟು ನಡೆಸುವುದಕ್ಕೂ, ಅವರಿಗೆ ಭಾರತದಲ್ಲಿ ಪರಿಚಯ ಯಾರದ್ದಿದೆ ಎಂಬುದಕ್ಕೂ ಸಂಬಂಧ ಇದೆ. ಎಂದು ವಿದೇಶಿ ಕಂಪನಿಗಳಿಗೆ ಅನ್ನಿಸುತ್ತಿದೆ. ಇದೊಂದು ರೀತಿಯಲ್ಲಿ ಹಾವು- ಏಣಿ ಆಟ ಇದ್ದಂತೆ, ಸರ್ಕಾರಗಳು ತಾವು ನೀಡಿದ್ದ ಭರವಸೆಯನ್ನು ಮರೆತು ಇತರ ಎಲ್ಲರಿಗಿಂತಲೂ ಹೆಚ್ಚಾಗಿ ಕೆಲವು ಉದ್ದಿಮೆಗಳಿಗೆ ಮಾತ್ರ ಆದ್ಯತೆ ನೀಡಿದರೆ ಅರ್ಥ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಔದ್ಯಮಿಕ ಉತ್ಸಾಹ ಬತ್ತುತ್ತದೆ. ನಮ್ಮ ದೇಶದಿಂದ ಆಗುವ ರಫ್ತುಗಳ ಮೇಲೆ, ನಮ್ಮ ದೇಶದ ಉದ್ಯಮಿಗಳು ವಿದೇಶಗಳಲ್ಲಿ ಮಾಡುವ ಹೂಡಿಕೆಗಳ ಮೇಲೆ ಪ್ರತೀಕಾರದ ಕ್ರಮವೂ ಎದುರಾಗುತ್ತದೆ.

ದೊಡ್ಡದೂ ಸಂಕೀರ್ಣವೂ ಆಗಿರುವ ದೇಶದ ಅರ್ಥ ವ್ಯವಸ್ಥೆಯನ್ನು ಮುನ್ನಡೆಸುವುದು ಸುಲಭದ ಕೆಲಸವಲ್ಲ. ಬಡತನ ಹಾಗೂ ಅಜ್ಞಾನದ ಸಮುದ್ರದ ನಡುವೆ ಸಂಪತ್ತಿನ ದ್ವೀಪಗಳು ಅಲ್ಲೊಂದು ಇಲ್ಲೊಂದು ಇರುವ ದೇಶದ ಅರ್ಥ ವ್ಯವಸ್ಥೆಯನ್ನು ಮುನ್ನಡೆಸುವುದು ಕಷ್ಟದ ಕೆಲಸ. ದೇಶಕ್ಕೆ ಮೂರು ಕಡೆಗಳಿಂದ ಸಮಸ್ಯೆಗಳು ಎದುರಾಗಿರುವಾಗ – ಅರ್ಥ ವ್ಯವಸ್ಥೆ ಕುಸಿಯುತ್ತಿರುವುದು, ಕೋವಿಡ್ ವೈರಾಣುವಿನ ಕಾಟ, ನೆರೆಯ ಚೀನಾ ಹೆಚ್ಚು ಆಕ್ರಮಣಕಾರಿ ಆಗುತ್ತಿರುವುದು – ಪ್ರಧಾನಿಯವರು ತಮ್ಮ ಸುತ್ತ ವಿಶ್ವದ ಅತ್ಯುತ್ತಮ ವ್ಯಕ್ತಿಗಳನ್ನು ಇರಿಸಿಕೊಳ್ಳಬೇಕು. ಆಂಥ ವ್ಯಕ್ತಿಗಳಿಗೆ ನಮ್ಮಲ್ಲಿ ಕೊರತೆಯೇನೂ ಇಲ್ಲ. ತಮ್ಮ ಟೀಕಾಕಾರರ ಜೊತೆ

ಸಂವಾದಿಸಲು ಪ್ರಧಾನಿಯವರು ತೋರಿರುವ ಉತ್ಸಾಹವನ್ನು ಮೆಚ್ಚಿಕೊಳ್ಳಬೇಕು. ಸದ್ಯದ ಸಂದರ್ಭದಲ್ಲಿ ಧ್ರುವೀಕೃತಗೊಂಡಿರುವ ದೇಶವನ್ನು ಒಗ್ಗೂಡಿಸಲು ಮೋದಿ ಅವರು ತಮಗೆ ದೊರೆತಿರುವ ಜನಾದೇಶ, ಪಕ್ಷದಲ್ಲಿ ತಮಗೆ ಇರುವ ಅಧಿಕಾರದ ಬಲದಿಂದ ಮುಂದಾಗಬೇಕು. ವಿಶ್ವದ ಸಂಪದ್ಭರಿತ ರಾಷ್ಟ್ರಗಳ ಸಾಲಿನಲ್ಲಿ ಒಂದಾಗಬೇಕು ಎಂಬ ಬಯಕೆಯನ್ನು ಹೊತ್ತಿರುವ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರದ ನಾಯಕ ಮೋದಿ, ಅವರು ಭರವಸೆಯನ್ನು ಮತ್ತೆ ಉದ್ದೀಪಿಸಬೇಕು. ಈಗಿನ ಸಂದರ್ಭವು ಎಷ್ಟೇ ಕಷ್ಟಕರವಾಗಿದ್ದರೂ ಪರಿಸ್ಥಿತಿ ಸರಿಯಾಗುತ್ತದೆ ಎಂದು ಆಶಿಸೋಣ. ಭವಿಷ್ಯದ ಬಗ್ಗೆ ಆಶಾಭಾವ ಹೊಂದಬಹುದು ಎಂದು ಆಶಿಸೋಣ. ಯಾವುದೇ ಅರ್ಥ ವ್ಯವಸ್ಥೆಯ ಪಾಲಿನ ಅಗೋಚರ ಇಂಧನವಾಗಿರುವ ‘ಭರವಸೆ’ ಸಮುದಾಯದ ತಳಮಟ್ಟದಲ್ಲಿ ಈಗ ಕಾಣಿಸುತ್ತಿಲ್ಲ. ನಮ್ಮ ಉದ್ದೇಶಗಳು ಎಷ್ಟೇ ಉದಾತ್ತವಾಗಿ ಇದ್ದರೂ ಅಕ್ಕಪಕ್ಕದ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೆ ಯಾವ ವಾಣಿಜ್ಯೋದ್ಯಮವೂ ಒಳ್ಳೆಯ ವಹಿವಾಟು ನಡೆಸಲಾರದು.

ಇದನ್ನೂ ಓದಿ | ಸಂಡೇ ರೀಡ್:‌ ಪ್ರಕೃತಿಯೇ ನಮ್ಮ ಮನೆ ಅನ್ನುವ ರಸ್ಕಿನ್‌ ಬಾಂಡ್

Exit mobile version