Site icon Vistara News

Ram Mandir: ದೇಶದೆಲ್ಲೆಡೆ ಬೆಳಗಿದ ಜ್ಯೋತಿ; ರಾಮನಿಗೆ ಬೆಳಕಿನ ಆರತಿ

ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರದ (Ayodhya Ram Mandir) ರಾಮ ಲಲ್ಲಾ ವಿಗ್ರಹ (Ram Lalla Idol) ಪ್ರಾಣ ಪ್ರತಿಷ್ಠಾಪನೆಯನ್ನು (Prana Pratishta) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನೆರವೇರಿಸಿದರು. ಪ್ರಾಣ ಪ್ರತಿಷ್ಠಾಪನೆಯ ಮುಖ್ಯ ಯಜಮಾನರಾಗಿದ್ದ ಮೋದಿ ಅವರು ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಧನ್ಯತೆಯನ್ನು ಪ್ರದರ್ಶಿಸಿದರು. ಬಳಿಕ ಸೋಮವಾರ ಸಂಜೆ, ರಾಮ ಜ್ಯೋತಿ (Ram Jyoti) ಬೆಳಗಿಸಿದರು. ಇದಕ್ಕೂ ಮೊದಲೇ ರಾಮ ಮಂದಿರ ಉದ್ಘಾಟನೆ ಶುಭ ಸಂದರ್ಭದಲ್ಲಿ ರಾಮ ಜ್ಯೋತಿ ಬೆಳಗಿಸುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದರು. ಇದಕ್ಕೆ ನಾಗರಿಕರು ಅದ್ಭುತವಾಗಿ ಸ್ಪಂದಿಸಿದರು.

Exit mobile version