Site icon Vistara News

BBK Season 10: ಸಂಗೀತಾಗೆ ನಾನ್‌ ಯಾಕ್‌ ಕಾಳಜಿ ತೋರಿಸ್ಲಿ ಎಂದು ಸಿಟ್ಟಾದ ವಿನಯ್‌; ಕಾಲಿಗೆ ಬಿದ್ದ ಭಾಗ್ಯಶ್ರೀ!

An angry Vinay Bigg boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಎರಡನೇ ವಾರ ಸ್ಪರ್ಧಿಗಳ ಮಧ್ಯೆ ದಿನೇದಿನೆ ವೈಮನಸ್ಸು ಹೆಚ್ಚಾಗುತ್ತಲೇ ಇದೆ. ಬಿಗ್‌ ಬಾಸ್‌ ಶುರುವಾಗಿನಿಂದಲೂ ವಿನಯ್‌ ಹಾಗೂ ಸಂಗೀತಾ ನಡುವೆ ಇರುವ ಮನಸ್ತಾಪ ಇನ್ನೂ ಬಗೆಹರಿದಿಲ್ಲ. ಇದೀಗ ವಿನಯ್‌ ಅವರು ಮನೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಎರಡನೇ ವಾರ ಕೂಡ ವಿನಯ್‌ ಅವರೇ ತನ್ನನ್ನು ಟಾರ್ಗೆಟ್‌ ಮಾಡಿದ್ದಾರೆ ಎಂತಲೂ ಸಂಗೀತಾ ಭಾವಿಸಿದ್ದಾರೆ.

ಅದೆಷ್ಟೋ ಬಾರಿ ಸಂಗೀತಾ ಕೂಡ ತಾನು ಇಲ್ಲಿಗೆ ಬರಬಾರದಿತ್ತು ಎಂದು ಕ್ಯಾಮೆರಾ ಮುಂದೆ ಅತ್ತಿದ್ದಿದೆ. ಇದೀಗ ಭಾಗ್ಯಶ್ರಿ ಅವರ ಎಂಟ್ರಿ ಈ ಕಲಾಪದಲ್ಲಿ ಆಗಿದೆ. ವಿನಯ್‌ ಅವರ ಬಳಿ ಭಾಗ್ಯಶ್ರಿ ಅವರು ಸಂಗೀತಾ ಬಗ್ಗೆ ಪ್ರಸ್ತಾಪಿಸಿದರು. ಭಾಗ್ಯಶ್ರೀ ಮಾತನಾಡಿ ʻʻಒಂದು ಮಾತು ಕೇಳ್ತೀನಿ. ಬೇಜಾರು ಮಾಡಿಕೊಳ್ಳಬೇಡಿ. ಸಂಗೀತಾ ತುಂಬಾ ಡಿಸ್ಟರ್ಬ್ ಆಗಿದ್ದಾರೆ. ಏನ್ಮಾಡಿದ್ದೀರಾ ನೀವು..? ನಂಗೆ ಅರ್ಥಾನೇ ಆಗ್ತಿಲ್ಲ. ಮಧ್ಯಾಹ್ನ ಕಾರ್ತಿಕ್ ಹತ್ತಿರ ಮಾತನಾಡಿದೆ. ನನಗೆ ಬೇಜಾರಾಯ್ತು. ರಾತ್ರಿಯೆಲ್ಲಾ ಸಂಗೀತಾ ಒಬ್ಬೊಬ್ಬರೇ ಮಾತನಾಡುವ ಹಂತಕ್ಕೆ ಡಿಪ್ರೆಶನ್‌ಗೆ ಹೋಗ್ತಿದ್ದಾರೆ. ಕ್ಯಾಮೆರಾ ಮುಂದೆ ಎಲ್ಲ ಹೋಗಿ ಮಾತನಾಡುತ್ತಿದ್ದಾರೆ. ಇವೆಲ್ಲಾ ಆಗ್ತಾಯಿರೋದು ವಿನಯ್ ಅವರಿಂದ ಎಂದು ನನ್ನನ್ನು ಕೇಳಿದರು. ನೀವ್ಯಾಕೆ ಅವರಿಗೆ ತುಂಬಾ ಹರ್ಟ್ ಮಾಡಿದ್ದೀರಾ?ನಿಮಗೆ ಕಾಳಜಿ ಇಲ್ವಾ ಫ್ರೆಂಡ್ ಆಗಿʼʼಎಂದು ಮಾತನಾಡಿದರು.

ವಿನಯ್‌ ಕೂಡ ಈ ಬಗ್ಗೆ ಮಾತನಾಡಿ ʻʻನನ್ನನ್ನ ಯಾಕೆ ನೀವು ಬಂದು ಕೇಳ್ತಿದ್ದೀರಾ? ಅವಳೇನು ನನ್ನನ್ನ ಲವ್ ಮಾಡ್ತಿದ್ದಾಳಾ? ಅವಳ್ಯಾರು ಅಂತ ನಾನು ಕಾಳಜಿ ತೋರಿಸ್ಲಿ..? ಇದು ತುಂಬಾ ಡ್ಯಾಮೇಜಿಂಗ್ʼʼ ಎಂದು ಹೇಳಿಕೊಂಡಿದ್ದಾರೆ. ಇಷ್ಟಾದ ಮೇಲೆ ನೇರವಾಗಿ ಕಾರ್ತಿಕ್‌ ಕಡೆ ಹೋಗಿ ವಿನಯ್‌ ಈ ಬಗ್ಗೆ ಪ್ತಸ್ತಾಪಿಸಿದರು. ಆದರೆ ಕಾರ್ತಿಕ್‌ ಹೇಳಿದ್ದು ಮಾತ್ರ ʻʻನಾನು ಏನು ಹೇಳಿಲ್ಲʼʼಎಂದಿದ್ದಾರೆ. ಆಗ ವಿನಯ್‌ ಅವರು ಭಾಗ್ಯಶ್ರೀ ಅವರಿಗೆ ಇದು ತಪ್ಪು ಮೇಡಂ ಎಂದಿದ್ದಾರೆ. ಭಾಗ್ಯಶ್ರೀ ಕೂಡ ʻಕನ್ಸರ್ನ್‌ ಮಾಡೋದು ತಪ್ಪಾ?ʼʼಎಂದು ಕೇಳಿದರು.

ವಿನಯ್ ಗೌಡ ಕಾಲನ್ನು ಮುಟ್ಟಿ ಕ್ಷಮೆ ಕೇಳಿದ ಭಾಗ್ಯಶ್ರೀ

‘’ನಾನು ಕನ್ಸರ್ನ್‌ನಿಂದ ಕೇಳಿದೆ ಅಷ್ಟೇ. ಸಮಸ್ಯೆ ಬಗೆಹರಿಯಲಿ ಅಂತ ಕೇಳಿದೆ ಅಷ್ಟೇ’’ ಎಂದು ವಿನಯ್ ಗೌಡ ಕಾಲನ್ನ ಮುಟ್ಟಿ ಭಾಗ್ಯಶ್ರೀ ಕ್ಷಮೆ ಕೇಳಿದರು.

ಇದನ್ನೂ ಓದಿ: BBK Season 10: ಕಾರ್ತಿಕ್-ವಿನಯ್ ಸ್ನೇಹದಲ್ಲಿ ‘ಸಂಗೀತ’ವೆಂಬ ಅಪಸ್ವರ?

ಕಣ್ಣೀರಿಟ್ಟ ವಿನಯ್‌

ಇದಾದ ಮೇಲೆ ವಿನಯ್‌ ತುಂಬ ಬೇಸರಗೊಂಡರು. ನನ್ನ ಹೆಂಡತಿ, ಮಗ, ಫ್ಯಾಮಿಲಿ ಇಲ್ಲಿ ನನ್ನನ್ನು ನೋಡುತ್ತಿರುತ್ತಾರೆ. ನನಗೆ ನನ್ನ ಮಗ ಅಷ್ಟೇ ಬೇಕಾಗಿರೋದುʼʼಎಂದು ಕಣ್ಣೀರಿಟ್ಟರು. ಈ ವೇಳೆ ಮನೆಯ ಸದಸ್ಯರು ವಿನಯ್‌ ಅವರನ್ನು ಸಮಾಧಾನ ಮಾಡಿದ್ದಾರೆ.

ಶಿಕ್ಷೆ ಅನುಭವಿಸಿದ ಭಾಗ್ಯಶ್ರೀ

ಈ ವಾರ ಟಾಸ್ಕ್‌ನಲ್ಲಿ ಸೋತಿದ್ದೇ ಆದರೆ ಯಾರಾದರೂ ಒಬ್ಬರು ಶಿಕ್ಷಗೆ ಗುರಿಯಾಗಬೇಕು. ರಣಶಕ್ತಿ ತಂಡ ಮಾಣಿಕ್ಯ ತಂಡದಿಂದ ಭಾಗ್ಯಶ್ರೀ ಅವವರನ್ನು ಆಯ್ಕೆ ಮಾಡಿದರು. ಮಾರನೇ ದಿನದ ಬೆಳಗ್ಗೆವರೆಗೂ ಕಡ್ಡಾಯವಾಗಿ ಗಾರ್ಡನ್ ಏರಿಯಾದಲ್ಲೇ ಒಬ್ಬರು ಇರಬೇಕಿತ್ತು. ಶಿಕ್ಷೆಗೆ ಗುರಿಯಾದವರು ಯಾವುದೇ ಕಾರಣಕ್ಕೂ ಮನೆಯೊಳಗೆ ಪ್ರವೇಶಿಸುವಂತಿರಲಿಲ್ಲ. ಈ ಶಿಕ್ಷೆ ಭಾಗ್ಯಶ್ರೀ ಅವರ ಪಾಲಾಯ್ತು.

ಭಾವುಕರಾದ ಭಾಗ್ಯಶ್ರೀ

ಇಷ್ಟಾದರೂ ಕಥೆ ಇಲ್ಲಿಗೆ ಮುಗಿದಿಲ್ಲ. ʻʻಹ್ಯಾಪಿ ಬಿಗ್‌ ಬಾಸ್‌ ಎಂದು ಕರೆದು. ಆದರೆ ನನ್ನ ಮೈಕ್‌ನಲ್ಲಿ ಹ್ಯಾಪಿ ಅಂತ ಇದ್ದದ್ದು ಕಿತ್ತು ಹೋಯ್ತು. ಟಾಸ್ಕ್‌ನಲ್ಲಿಯೂ ತುಂಬಾ ಶ್ರಮ ವಹಿಸಿದೆ ಆದರೆ ಹೀಗಾಯ್ತುʼʼ ಎಂದು ಕಣ್ಣೀರಿಟ್ಟರು. ಬಿಗ್‌ ಬಾಸ್‌ ಪ್ರತಿನಿತ್ಯ ಕಲರ್ಸ್‌ ಕನ್ನಡದಲ್ಲಿ ರಾತ್ರಿ 9.30ಕ್ಕೆ ಹಾಗೂ ಜಿಯೋ ಸಿನಿಮಾದಲ್ಲಿಯೂ ಪ್ರಸಾರ ಕಾಣುತ್ತಿದೆ.

Exit mobile version