Site icon Vistara News

BBK SEASON 10: ಮಾನಸ ಕಾಮಿಡಿಗೆ ಕನ್ನಡಿಗರು ಫಿದಾ; ಸೀಸನ್‌ 11ಕ್ಕೆ ʻತುಕಾಲಿ ಪತ್ನಿʼ ಬರಲಿ ಅಂದ್ರು ಫ್ಯಾನ್ಸ್‌!

Kannadigas Fida for tukali Wife Manasa comedy

ಬೆಂಗಳೂರು: ʻಬಿಗ್‌ ಬಾಸ್‌ ಸೀಸನ್‌ʼ 10ರ (BBK SEASON 10)ರಲ್ಲಿ ಸದಸ್ಯ ಕುಂಟುಂಬದವರು ಮನೆಗೆ ಬಂದಿದ್ದರು. ಆಗ ತುಕಾಲಿ ಹಾಗೂ ಪತ್ನಿ ಮಾನಸ ಅವರ ತಮಾಷೆ, ತರಲೆ ವೀಕ್ಷಕರನ್ನು ನಗಿಸಿತ್ತು. ತುಕಾಲಿ ಹಾಗೂ ಮಾನಸ ದಂಪತಿ ಮನೆಯಲ್ಲಿ ತಮ್ಮ ಕಾಮಿಡಿ ಲೈಫ್‌ ಹಾಗೂ ಕಷ್ಟ ಪಟ್ಟು ಬಂದಿರುವ ಜರ್ನಿಯನ್ನು ಹಂಚಿಕೊಂಡಿದ್ದರು. ಇಬ್ಬರ ದಾಂಪತ್ಯವನ್ನು ಕಂಡ ಕನ್ನಡಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಇಬ್ಬರ ಅನ್ಯೂನ್ಯತೆಯನ್ನು ಮನಗಂಡ ವೀಕ್ಷಕರು ಜೋಡಿಗೆ ಹಾರೈಸಿದ್ದಾರೆ. ಮಾತ್ರವಲ್ಲ ಮಾನಸ ಅವರ ಕಾಮಿಡಿ ಪಂಚ್‌ ಡೈಲಾಗ್‌ ಕಂಡು ಮುಂದಿನ ʻಬಿಗ್ ಬಾಸ್ ಸೀಸನ್ 11ʼಕ್ಕೆ ಮಾನಸ ಬರಲೇಬೇಕು ಎಂದು ಹೇಳಿದ್ದಾರೆ.

ಮಾನಸ ಮನೆಯೊಳಗೆ ಎಂಟ್ರಿ ಕೊಟ್ಟಾಗ ತುಕಾಲಿ ಅವರ ಮಾತಿಗೆ ಸಖತ್‌ ಪಂಚ್‌ ಕೊಡುತ್ತಿದ್ದರು. ಅಷ್ಟೇ ಅಲ್ಲ, ಕಿಚ್ಚ ಸುದೀಪ್‌ ಅವರಿಗೂ ಮಾನಸ ಅವರ ಮಾತುಗಳು ಇಷ್ಟವಾಗಿತ್ತು. ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಕೂಡ ತುಕಾಲಿ ಸಂತೋಷ್ ಬಗ್ಗೆ ಪ್ರಶ್ನೆಯನ್ನು ಕೇಳುತ್ತಿದ್ದರೆ, ಸರಳವಾದ ಮಾತಿನಲ್ಲಿ ಸಖತ್‌ ಪಂಚ್‌ ಕೊಡುತ್ತಿದ್ದರು. ಇದೀಗ ಮಾನ ನೇರ ಮಾತಿನಿಂದಲೇ ಮಾನಸ ಪ್ರತಿಯೊಬ್ಬರ ಮನಸ್ಸನ್ನು ಗೆದ್ದುಬಿಟ್ಟಿದ್ದಾರೆ.

ಇದನ್ನೂ ಓದಿ: BBK SEASON 10: ಬಿಗ್‌ಬಾಸ್‌ ಪಯಣ ಸ್ಮರಣೀಯ; ತುಕಾಲಿ ಸಂತೋಷ್

ರಿಯಾಲಿಟಿ ಶೋನಲ್ಲಿ ಮಾನಸ ಭಾಗಿ

‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನಲ್ಲಿ ಮಾನಸ ಭಾಗಿಯಾದ ಮೇಲೆ ಜೋಡಿ ನಂ.1 ಕಾರ್ಯಕ್ರಮದಲ್ಲಿ ಭಾಗಿಯಾದ ಮೇಲೆ ಜನಪ್ರಿಯತೆ ಪಡೆದುಕೊಂಡಿದೆ. ತುಕಾಲಿ ಸಂತೋಷ್‌ ಅವರೇ ಮಾನಸ ಅವರಿಗೆ ಕಾಮಿಡಿ ಮಾಡುವುದನ್ನು ಕಲಿಸಿದ್ದಾರೆ ಎಂದು ಸಂತೋಷ್‌ ಬಿಗ್‌ ಬಾಸ್‌ ಮನೆಯಲ್ಲಿ ಹೇಳಿಕೊಂಡಿದ್ದರು. ಈ ಹಿಂದೆ ಬಿಗ್‌ ಬಾಸ್‌ ಮನೆಯಲ್ಲಿ ತುಕಾಲಿ ಅವರು ಮಾನಸಾರಿಗೆ ʻʻಇವಳು ಎಮ್ಮೆಯನ್ನು ಕಾಯುತ್ತಾ ನಿಂತಿದ್ದಳು” ಎಂದು ಹಾಸ್ಯ ಮಾಡಿದಾಗ, “ನೀನು ಅರಮನೆಯ ಮುಂದೆ ಅರ್ಜುನನ್ನು ಕಾಯುತ್ತಾ ಇದ್ಯಾ?ʼʼಎಂದು ತುಕಾಲಿಗೆ ಕೌಂಟರ್‌ ಕೊಟ್ಟಿದ್ದಾರೆ.

ತುಕಾಲಿ ಅವರ ಹೆಂಡತಿ ಮಾನಸ ಮನೆಗೆ ಎಂಟ್ರಿ ಆಗುತ್ತಿದ್ದಂತೆ ಕೋಲಿನಲ್ಲಿ ತುಕಾಲಿಗೆ ಚೆನ್ನಾಗಿ ಬಾರಿಸಿದ್ದರು. ತುಕಾಲಿ ಕೂಡ ನೋವನ್ನು ತಾಳಲಾರದೆ ಮನೆತುಂಬ ಓಡಾಡಿದ್ದರು. ಸಂತು, ಮಾನಸ ನಡುವೆ ಸಾಕಷ್ಟು ತಮಾಷೆಯ ಮಾತುಕತೆ ನಡೆದಿತ್ತು. ಅಷ್ಟೇ ಅಲ್ಲದೇ ತುಕಾಲಿ ಅವರು ಮನೆಯಲ್ಲಿ ನಮ್ರತಾಗೆ ಕ್ಲೋಸ್‌ ಎನ್ನುವುದು ಗೊತ್ತೇ ಇದೆ. ʻʻನನಗೆ ಒಂದಿನವೂ ಲಿಪ್‌ಸ್ಟಿಕ್ ಹಚ್ಚಿಲ್ಲ, ಕಾರ್ತಿಕ್, ಮಾನಸಾಗೆ ಯಾಕೆ ಲಿಪ್‌ಸ್ಟಿಕ್ ಹಚ್ಚಿದೆ? ನಮ್ರತಾ ಅಕ್ಕ ಜತೆ ಹಾಗೆ ನುಲಿದುಕೊಂಡು ಡ್ಯಾನ್ಸ್ ಮಾಡ್ತೀಯಾ?” ಎಂದು ತುಕಾಲಿಗೆ ತಮಾಷೆ ಮಾಡಿದ್ದರು.

ತುಕಾಲಿ ಮದುವೆ ಆದ ಮೇಲೆ ಜೀವನ ಚೆನ್ನಾಗಿದೆ!

ಇವರಿಬ್ಬರು ತಮಾಷೆ ಮಾಡುತ್ತಿರುವುದುನ್ನು ಸ್ವತಃ ಬಿಗ್‌ ಬಾಸ್‌ ಖುಷಿ ಪಟ್ಟಿದ್ದರು. ಹಾಗೆ ಕಾಮಿಡಿ ತುಕಾಲಿ, ಬಿಗ್‌ ಬಾಸ್‌ ತುಕಾಲಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರ ಬಗ್ಗೆ ಗೊತ್ತಿರದ ಸಂಗಿತಿಯ ಬಗ್ಗೆ ತಿಳಿಸಿ ಎಂದು ಮಾನಸ ಅವರಿಗೆ ಬಿಗ್‌ ಬಾಸ್‌ ಹೇಳಿದರು. ಆಗ ಮಾನಸ ಅವರು ತುಕಾಲಿ ಬಗ್ಗೆ ಮಾತನಾಡಿ ಭಾವುಕರಾಗಿದ್ದರು.

ಇದನ್ನೂ ಓದಿ: BBK SEASON 10: ಬಿಗ್‌ಬಾಸ್‌ ಮನೆಯಿಂದ ಸ್ನೇಹ ಸಂಬಂಧ ಕೊಂಡೊಯ್ಯುತ್ತಿದ್ದೇನೆ; ವರ್ತೂರು ಸಂತೋಷ್

ʻʻಹುಟ್ಟಿದಾಗಿನಿಂದ 22 ವರ್ಷದವರೆಗೆ ನಾನು ಜೀವನದಲ್ಲಿ ಖುಷಿಯನ್ನೇ ಕಂಡಿರಲಿಲ್ಲ. ಇವನನ್ನು ಮದುವೆ ಆದಮೇಲೆ ನನ್ನ ಜೀವನ ಚೆನ್ನಾಗಿದೆ. ಮದುವೆ ಆಗೋಕೆ ಮುನ್ನ ಇಡೀ ಮನೆ ಹುಡುಕಿದರೂ ನನ್ನ ಮನೆಯಲ್ಲಿ ಒಂದು ರೂಪಾಯಿಯೂ ಸಿಗುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಊಟ ಮಾಡೋಕೂ ಹಣ ಇರಲಿಲ್ಲ. ಮದುವೆ ಆಗುವಾಗಲೇ ನನಗೆ ಕಾಫಿ ಮಾಡೋಕೂ ಬರಲ್ಲ ಅಂತ ಹೇಳಿದ್ದೆ, ನಾನೇ ಎಲ್ಲ ಮಾಡ್ತೀನಿ, ಕಲಿಸಿಕೊಡ್ತೀನಿ ಅಂತ ಅವನು ಹೇಳಿದ್ದ. ಜೀವನದಲ್ಲಿ ಇದಕ್ಕಿಂತ ಒಳ್ಳೆಯ ವ್ಯಕ್ತಿ ನನಗೆ ಸಿಗುತ್ತಲೇ ಇರಲಿಲ್ಲ” ಎಂದು ಮಾನಸ ಅವರು ಹೇಳಿದ್ದಾರೆ.

Exit mobile version