Site icon Vistara News

BBK SEASON 10: ಹೊಸ ವರ್ಷದಂದು ಮಹಾಗುರುಗಳ ಆಗಮನ; ಸ್ಪರ್ಧಿಗಳ ಬಗ್ಗೆ ಏನಂದ್ರು?

guruji

guruji

ಬೆಂಗಳೂರು: ಹಲವು ವಿಶೇಷತೆಗಳೊಂದಿಗೆ ಆರಂಭವಾದ ಈ ಬಾರಿಯ ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಫೈನಲ್‌ ಹಂತಕ್ಕೆ ಸಮೀಪಿಸುತ್ತದೆ. ವಿಭಿನ್ನ ಕಾನ್ಸೆಟ್‌, ಸ್ಪರ್ಧಿಗಳ ಜಗಳ, ಸ್ನೇಹ ಮುಂತಾದ ವಿಚಾರಗಳಿಂದ ಸದ್ದು ಮಾಡಿದ್ದ ಬಿಗ್‌ಬಾಸ್‌ ಟಿಆರ್‌ಪಿ ವಿಚಾರದಲ್ಲೂ ದಾಖಲೆ ಬರೆದಿದೆ. ಕಳೆದ ವಾರ ಸ್ಪರ್ಧಿಗಳ ಕುಟುಂಬ ಸದಸ್ಯರು ಮನೆಯೊಳಗೆ ಬಂದು ಸರ್‌ಪ್ರೈಸ್‌ ಕೊಟ್ಟಿದ್ದರು. ಈ ಬಾರಿ ಹೊಸ ವರ್ಷದ ಅಂಗವಾಗಿ ವಿಶೇಷ ವ್ಯಕ್ತಿಯೊಬ್ಬರು ಮನೆಯೊಳಗೆ ಆಗಮಿಸಿ ಸ್ಪರ್ಧಿಗಳನ್ನು ಹರಿಸಿದ್ದಾರೆ. ಅವರ ಭವಿಷ್ಯ ನುಡಿದಿದ್ದಾರೆ. ಅವರೇ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ.

ಗುರೂಜಿ ಹೇಳಿದ್ದೇನು?

ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸಿದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರನ್ನು ಸ್ಪರ್ಧಿಗಳು ಗೌರವದಿಂದ ಸ್ವಾಗತಿಸುತ್ತಿರುವುದು ಪ್ರೋಮೊದಲ್ಲಿ ಕಂಡು ಬಂದಿದೆ. ಬಳಿಕ ಗುರೂಜಿ ಪ್ರತಿ ಸ್ಪರ್ಧಿಗಳನ್ನು ಕರೆದು ಪ್ರತ್ಯೇಕವಾಗಿ ಮಾತನಾಡಿದ್ದಾರೆ. ಅವರ ಭವಿಷ್ಯ ಹೇಳಿದ್ದಾರೆ. ವರ್ತೂರು ಸಂತೋಷ್‌ ಜತೆ ಮಾತನಾಡಿದ ಗುರೂಜಿ, ʼʼನೀವು ಕಾಲಿನ ಭಾಗದಲ್ಲಿ ಹಾಕಬಾರದ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಂಡು ಬಂದ ದಿನದಿಂದಲೇ ನಿಮ್ಮ ಮನಸ್ಸಿನ ನೆಮ್ಮದಿಯೆಲ್ಲ ಹೊರಟು ಹೋಯ್ತುʼʼ ಎಂದರು. ಇದಕ್ಕೆ ವರ್ತೂರ್‌ ಸಂತೋಷ್‌ ʼʼಹೌದುʼʼ ಎಂದರು. ಇನ್ನು ನಮ್ರತಾ ಭವಿಷ್ಯ ನುಡಿದ ಗುರೂಜಿ, ʼʼನಿಮ್ಮ ಜೀವನದಲ್ಲಿ ಹೊಸ ಬೆಳಕು ಮೂಡಲಿದೆ. ಹೊಸ ವ್ಯಕ್ತಿಯ ಆಗಮನವಾಗಲಿದೆʼʼ ಎಂದು ತಿಳಿಸಿದರು.

ಡ್ರೋನ್‌ ಪ್ರತಾಪ್‌ ಬಳಿ, ʼʼಇದನ್ನು ಹೇಳಲು ಸಂಕಟವಾಗುತ್ತದೆʼʼ ಎಂದೇ ಮಾತು ಆರಂಭಿಸಿದ ಗುರೂಜಿ, ʼʼನಿನ್ನ ಕುಟುಂಬ ಜೀವನ ಯಾಕೋ ಸರಿ ಇಲ್ಲ. ಹೀಗಾಗಿ ದೂರ ಇದ್ದು ಧೂಪವಾಗುತ್ತೀಯೋ ಅಥವಾ ಹತ್ತಿರ ಹೋಗಿ ಹೇಸಿಗೆ ಆಗ್ತಿಯೋ ಅದು ನಿನಗೆ ಬಿಟ್ಟಿದ್ದುʼʼ ಎಂದು ಎಚ್ಚರಿಸಿದರು. ಇದಕ್ಕೆ ಪ್ರತಾಪ್‌ ನೋವಿನಿಂದ ಕಣ್ಣೀರು ಸುರಿಸಿದರು. ಸದ್ಯ ಹೊರ ಬಂದಿರುವ ಈ ಪ್ರೋಮೊ ಕುತೂಹಲ ಮೂಡಿಸಿದೆ.

ಸಿರಿ ಔಟ್‌

ಕಳೆದ ವಾರ ಬಿಗ್‌ಬಾಸ್‌ ಮನೆಯ ಜರ್ನಿ ಮುಗಿಸಿ ಸಿರಿ ಹೊರ ಬಂದಿದ್ದಾರೆ. ಸಿರಿ ಸೇರಿದಂತೆ, ಸಂಗೀತಾ ಶೃಂಗೇರಿ, ವಿನಯ್ ಗೌಡ, ವರ್ತೂರು ಸಂತೋಷ್, ಮೈಕಲ್, ಕಾರ್ತಿಕ್, ತನಿಷಾ, ತುಕಾಲಿ ಸಂತು ನಾಮಿನೇಟ್ ಆಗಿದ್ದರು. ಮೈಕಲ್‌ ಹಾಗೂ ಸಿರಿ ಅವರ ಮಧ್ಯೆ ಭಾರಿ ಫೈಟ್‌ ಆಗಿದ್ದು, ಕೊನೆಗೆ ಸಿರಿ ಮನೆಯಿಂದ ಔಟ್‌ ಆದರು.

ಇದನ್ನೂ ಓದಿ: BBK SEASON 10: ನಿಮಗೆ ಸೆಕೆಂಡ್‌ ಚಾನ್ಸ್‌ ಇಲ್ಲ ವಿನಯ್‌; ಕಿಚ್ಚನ ಖಡಕ್‌ ಎಚ್ಚರಿಕೆ!

ಎಲಿಮಿನೇಟ್‌ ಪ್ರಕ್ರಿಯೆಯ ಕೊನೆಗೆ ಸಿರಿ, ಮೈಕಲ್, ವರ್ತೂರು ಸಂತೋಷ್ ಮಾತ್ರ ಉಳಿದುಕೊಂಡಿದ್ದರು. ಈ ಮೂವರಲ್ಲಿ ವರ್ತೂರು ಸಂತೋಷ್ ಅವರನ್ನು ಸೇಫ್ ಮಾಡಲಾಯಿತು. ಕೊನೆಗೆ ಸಿರಿ ಮತ್ತು ಮೈಕಲ್ ಮಾತ್ರ ಉಳಿದುಕೊಂಡರು. ಇವರಿಬ್ಬರಲ್ಲಿ ಮೈಕಲ್ ಸೇಫ್ ಆಗಿ ಸಿರಿ ಅವರು ಶೋನಿಂದ ಹೊರಗೆ ಬರಬೇಕಾಯ್ತು. ಸಿರಿ ಮೊದಲಿಂದಲೂ ಸೇಫ್‌ ಗೇಮ್‌ ಆಡಿಗೊಂಡು ಬಂದಿದ್ದರು ಎನ್ನುವುದು ಕೆಲವರ ಅಭಿಪ್ರಾಯ. ಮನರಂಜನೆ ನೀಡುವಲ್ಲಿ ಹಿಂದೆ ಉಳಿದವರು ಎಂಬ ಆರೋಪವೂ ಇದೆ. ಸಿರಿ ತಮ್ಮ ಅಭಿಪ್ರಾಯವನ್ನು ಓಪನ್ ಆಗಿ ಹೇಳುತ್ತಿರಲಿಲ್ಲ. ಸುದೀಪ್ ಅವರ ಗಮನಕ್ಕೂ ಈ ವಿಚಾರ ಬಂದಿತ್ತು. ಕಿಚ್ಚ ಕೂಡ ಈ ಬಗ್ಗೆ ಮಾತನಾಡಿದ್ದರು. ಆದರೆ ಸಿರಿ ಯಾವುದೇ ಗುಂಪಿನಲ್ಲಿ ಗುರುತಿಸಿಕೊಂಡಿರಲಿಲ್ಲ. ಅವರು ಸ್ವತಂತ್ರವಾಗಿ ಇದ್ದರು. ಅವರು ಎಂದಿಗೂ ಜಗಳ ಮಾಡಿದವರಲ್ಲ. ಟಾಸ್ಕ್​ ಬಂದಾಗ ಅಗ್ರೆಸ್ ಆಗಿ ಆಡಿದವರಲ್ಲ. ಇದೆಲ್ಲವೂ ಗಮನಿಸಿಯೇ ಜನ ವೋಟ್‌ ಹಾಕಿಲ್ಲ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version