Site icon Vistara News

BBK SEASON 10: ಕುಟುಂಬದಿಂದ ದೂರ ಇರುವಂತೆ ಸಲಹೆ ನೀಡಿದ ಗುರೂಜಿ; ಪ್ರತಾಪ್‌ಗೆ ಶಾಕ್‌!

drone pratap

drone pratap

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10(BBK SEASON 10) ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಇದೀಗ ಮನೆಯ ಸ್ಪರ್ಧಿಗಳಿಗೆ ಹೊಸ ವರ್ಷದಲ್ಲಿ ಮಹಾಗುರುಗಳ ಆಶೀರ್ವಾದ ಸಿಕ್ಕಿದೆ. ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಬಿಗ್‌ಬಾಸ್‌ ಮನೆಯೊಳಗೆ ಆಗಮಿಸಿ ಎಲ್ಲರನ್ನೂ ಆಶೀರ್ವದಿಸಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಪೂಜೆ ಮಾಡಿ ಮಂಗಳಾರತಿ ಪ್ರಸಾದ ನೀಡಿದ ಸ್ವಾಮೀಜಿ ಎಲ್ಲ ಸ್ಪರ್ಧಿಗಳನ್ನೂ ಪ್ರತ್ಯೇಕವಾಗಿ ಕರೆದು ಅವರ ಬದುಕಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಮಧ್ಯೆ ಅವರು ತಮ್ಮ ಬಗ್ಗೆ ನುಡಿದ ಮಾತುಗಳನ್ನು ಕೇಳಿ ಡ್ರೋನ್‌ ಪ್ರತಾಪ್‌ ಶಾಕ್‌ಗೆ ಒಳಗಾಗಿದ್ದಾರೆ. ಅಷ್ಟಕ್ಕೂ ಸ್ವಾಮೀಜಿ ಹೇಳಿದ್ದೇನು ಎನ್ನುವುದರ ವಿವರ ಇಲ್ಲಿದೆ.

ಡ್ರೋನ್‌ ಪ್ರತಾಪ್ ಅವರನ್ನು ಬಳಿಗೆ ಕರೆದ ಸ್ವಾಮೀಜಿ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ʼʼಈ ವಿಚಾರ ಹೇಳುವುದಕ್ಕೆ ನನಗೆ ಸಂಕಟವಾಗುತ್ತಿದೆ. ಆದರೂ ಹೇಳುತ್ತಿದ್ದೇನೆ. ನೀನು ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ಧೂಪವಾಗ್ತೀಯೋ ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದುʼʼ ಎಂದು ಸ್ವಾಮೀಜಿ ಪ್ರತಾಪ್‌ಗೆ ಎಚ್ಚರಿಕೆ ನೀಡಿದ್ದಾರೆ. ಅವರ ಮಾತುಗಳನ್ನು ಕೇಳಿ ಪ್ರತಾಪ್ ಕಣ್ಣುಗಳಲ್ಲಿ ನೀರು ತುಂಬಿ ಬಂದಿದೆ.

ಚಿಕ್ಕ ವಯಸ್ಸಿಗೇ ಪ್ರತಾಪ್‌ ಸಾಕಷ್ಟು ನೋವು ಅನುಭವಿಸಿದ್ದಾರೆ. ಅವರು 3 ವರ್ಷಗಳಿಂದ ಕುಟುಂಬದಿಂದ ದೂರವೇ ಉಳಿದಿರುವ ಬಗ್ಗೆ ಬಿಗ್‌ಬಾಸ್‌ ಮನೆಯಲ್ಲಿ ಹಲವು ಬಾರಿ ನೋವಿನಿಂದಲೇ ಹೇಳಿಕೊಂಡಿದ್ದರು. ತಮ್ಮ ತಂದೆ, ತಾಯಿ ಬಳಿ ಕ್ಷಮೆ ಕೋರಬೇಕು, ಅವರ ಜತೆ ಮಾತನಾಡಬೇಕು ಎಂದು ಅವರು ಹೇಳಿದ್ದರು.

ಬಿಗ್‌ಬಾಸ್‌ ಮನೆಯಲ್ಲಿ ಅಪ್ಪ-ಮಗನ ಸಮಾಗಮ

ಇತ್ತೀಚೆಗೆ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಸರ್‌ಪ್ರೈಸ್‌ ನೀಡಲಾಗಿತ್ತು. ಹಲವು ದಿನಗಳ ಕಾಲ ಮನೆಯವರಿಂದ ದೂರವಿದ್ದ ಸ್ಪರ್ಧಿಗಳಿಗೆ ಕುಟುಂಬದವರೊಂದಿಗೆ ಬೆರೆಯುವ ಅವಕಾಶ ನೀಡಲಾಗಿತ್ತು. ಅದರಂತೆ ಪ್ರತಾಪ್‌ ಅವರ ತಂದೆ-ತಾಯಿ ಕೂಡ ಆಗಮಿಸಿದ್ದರು. ಒಂದು ಕ್ಷಣ ಅಪ್ಪ ಅಮ್ಮನನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆರಂಭದಲ್ಲಿ ಪ್ರತಾಪ್‌ ಅವರ ತಂದೆ-ತಾಯಿ ಬಿಗ್‌ಬಾಸ್‌ ಮನೆಗೆ ಬಂದಾಗ ಬಾಗಿಲು ತೆರೆದಿರಲಿಲ್ಲ. ತಂದೆಯ ಧ್ವನಿ ಮಾತ್ರ ಕೇಳಿ ಪ್ರತಾಪ್‌ ಬಾಗಿಲು ತೆರೆಯುವಂತೆ ಗೋಗರೆದಿದ್ದರು. ಬಳಿಕ ಅವರು ಒಳಗೆ ಬಂದಿದ್ದರು. ತಂದೆ-ತಾಯಿಯನ್ನು ನೋಡಿದ ಪ್ರತಾಪ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು, ಕೆಲ ಸಮಯ ಅವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ ಹಗುರವಾಗಿದ್ದರು. ಈ ನಡುವೆ ಪ್ರತಾಪ್​ ಮದುವೆ ವಿಷಯವೂ ಮನೆಯಲ್ಲಿ ಚರ್ಚೆ ನಡೆದಿತ್ತು.

ಪ್ರತಾಪ್‌ ಮತ್ತು ಅವರ ಕುಟುಂಬ ಸದಸ್ಯರ ಮಧ್ಯೆ ಇದ್ದ ಮೈಮನಸ್ಸು ಕರಗಿ ಎಲ್ಲರೂ ಒಂದಾಗಿದ್ದು, ಅಭಿಮಾನಿಗಳಿಗೆ ಸಮಾಧಾನ ತಂದಿತ್ತು. ಆದರೆ ಇದೀಗ ಸ್ವಾಮೀಜಿ ನುಡಿದ ಭವಿಷ್ಯ ಕೇಳಿ ಪ್ರತಾಪ್‌ ಮತ್ತು ಅಭಿಮಾನಿಗಳಿಗೆ ಮತ್ತೆ ಆತಂಕ ಕಾಡಲು ಆರಂಭವಾಗಿದೆ. ಕುಟುಂಬದಿಂದ ದೂರವೇ ಇರಲು ಅವರು ಸಲಹೆ ನೀಡಿರುವುದರಿಂದ ಪ್ರತಾಪ್‌ ಆಘಾತದಿಂದ ಕುಸಿದು ಹೋಗಿದ್ದಾರೆ.

ಇದನ್ನೂ ಓದಿ: BBK SEASON 10: ಬಿಗ್‌ಬಾಸ್‌ ಮನೆಯೊಳಗೆ ಹಾರಿಬಂತು ಡ್ರೋನ್‌; ಹೆಮ್ಮೆಯಿಂದ ಬೀಗಿದ ಪ್ರತಾಪ್‌

Exit mobile version