Site icon Vistara News

BBK Season 10: ಜೈಲು ಸೇರಿದ ಭಾಗ್ಯಶ್ರೀ; ಸೀರೆಯುಟ್ಟಿದ್ದೇ ತಪ್ಪಾಯ್ತಾ? ನನಗೇನು ವಯಸ್ಸಾಗಿಲ್ಲ ಎಂದು ಕಣ್ಣೀರು!

Bhagyashree Rao crying in bigg boss

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಮೊದಲನೇ ವಾರದ ಕಳಪೆ ಹಾಗೂ ಅತ್ಯತ್ತಮ ಪಟ್ಟಿ ಇದೀಗ ಹೊರಬಿದ್ದಿದೆ. ಬಿಗ್‌ ಬಾಸ್‌ ಮನೆಯಲ್ಲಿ ಎರಡು ಗುಂಪುಗಳಿವೆ. ಸಮರ್ಥರು ಹಾಗೂ ಅಸಮರ್ಥರು. ಮನೆಯ ಸದಸ್ಯರೆಲ್ಲ ಸೇರಿ ಕಳಪೆ ಹಾಗೂ ಉತ್ತಮ ಎಂಬುದನ್ನು ನೀಡಬೇಕಿತ್ತು. ಇದರಲ್ಲಿ ಅಸಮರ್ಥರು ಭಾಗಿಯಾಗುವಂತೆ ಇಲ್ಲ. ಆದರೆ, ಉತ್ತಮ ಎಂಬುದನ್ನು ಅಸಮರ್ಥರಲ್ಲಿ ಒಬ್ಬರಿಗೆ ನೀಡಬೇಕು. ಹೀಗಾಗಿ, ‘ಉತ್ತಮ ಪ್ರದರ್ಶನ’ ಪಟ್ಟ ಅಸಮರ್ಥರಿಗೆ ಸಿಕ್ಕರೆ, ಕಳಪೆ ಪಟ್ಟ ಸಮರ್ಥರಿಗೆ ಲಭಿಸಿದೆ.

ಇದರಲ್ಲಿ ಉತ್ತಮ ಪಟ್ಟ ಅಸಮರ್ಥ ತಂಡದ ಸದಸ್ಯೆ ತನಿಷಾಗೆ ಲಭಿಸಿದೆ. ಅದೇ ರೀತಿ ಕಳಪೆ ಸಮರ್ಥ ತಂಡದ ಭಾಗ್ಯಶ್ರೀಗೆ ಸಿಕ್ಕಿದೆ. ಇನ್ನು ತನಿಷಾ ಅವರನ್ನು ಕರಿತು ಸ್ಪರ್ಧಿಗಳು ಕೊಂಡಾಡಿದರು. ತನಿಷಾ ಅವರಿಗೆ 9 ವೋಟ್‌ಗಳು ಲಭಿಸಿತ್ತು. ಅದರಲ್ಲಿ ಇಶಾನಿ, ಮೈಕಲ್, ತುಕಾಲಿ ಸಂತು, ನಮ್ರತಾ ಗೌಡ, ಭಾಗ್ಯಶ್ರೀ, ಗೌರೀಶ್ ಅಕ್ಕಿ, ಸಿರಿ, ನೀತು, ವಿನಯ್ ಗೌಡ ಅವರು ತನಿಷಾ ಅವರನ್ನು ಹೊಗಳಿದ್ದರು. ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದ ಮೊದಲನೇ ವಾರದ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಪಡೆದುಕೊಂಡ ಹೆಮ್ಮೆ ತನಿಷಾ ಅವರದ್ದಾಯ್ತು. ತನಿಷಾ ಅವರ ಅಡುಗೆ, ಸ್ಪರ್ಧಿಗಳನ್ನು ನೋಡಿಕೊಳ್ಳುವ ಪರಿ ಹೀಗೆ ಸ್ಪರ್ಧಿಗಳು ಅವರನ್ನು ಮೆಚ್ಚಿದರು.

ನನಗೇನು ವಯಸ್ಸಾಗಿಲ್ಲ, ಸೀರೆ ಉಡೋದೇ ತಪ್ಪಾ?

ಹೆಚ್ಚಾಗಿ ಭಾಗ್ಯಶ್ರೀ ಅವರನ್ನೇ ಸ್ಪರ್ಧಿಗಳು ಕಳಪೆ ಎಂದು ಪರಿಗಣಿಸಿದರು. ಭಾಗ್ಯಶ್ರೀ ವಿರುದ್ಧ ಮೈಕಲ್, ತುಕಾಲಿ ಸಂತು, ಇಶಾನಿ, ನಮ್ರತಾ ಗೌಡ, ನೀತು ವೋಟ್‌ ಮಾಡಿದರು. ʻʻಟಾಸ್ಕ್‌ ಕೂಡ ಚೆನ್ನಾಗಿ ನಿಬಾಯಿಸಿಲ್ಲ. ನಮಗೆ ಬರಬೇಕಾದ ಲಕ್ಸುರಿ ಮಿಸ್ ಆಯ್ತುʼʼ ಹೀಗೆ ಅನೇಕ ಕಾರಣಗಳನ್ನು ಹೇಳಿದರು. ಇದಾದ ಬಳಿಕ ಭಾಗ್ಯಶ್ರೀ ಅವರು ಜೈಲಿಗೆ ಸೇರಿದರು. ಸೇರಿದ ಬಳಿಕ ತುಕಾಲಿ ಸಂತೋಷ್‌ ಅವರ ಕಾರಣ ಬಗ್ಗೆ ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: BBK Season 10: ಬಾತ್‌ ರೂಮ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಡ್ರೋನ್‌ ಪ್ರತಾಪ್‌; ಕ್ಷಮೆ ಕೇಳಿದ ಸ್ಪರ್ಧಿಗಳು!

ತುಕಾಲಿ ಸಂತೋಷ್ ಅವರು ʼಭಾಗ್ಯಶ್ರೀ ಅವರು ಎಮೋಷನಲ್‌ ಜಾಸ್ತಿ. ಅದು ಬಿಗ್‌ ಬಾಸ್‌ನಲ್ಲಿ ವರ್ಕ್‌ ಆಗಲ್ಲʼ ಎಂದು ಕಾರಣ ಕೊಟ್ಟಿದ್ದರು. ಈ ಬಗ್ಗೆ ಭಾಗ್ಯಶ್ರೀ ಜೈಲಿನಲ್ಲಿ ಕುಳಿತು ಸಂತು ಅವರಿಗೆ ಈ ಕಾರಣ ತನಗೆ ಇಷ್ಟವಾಗಲಿಲ್ಲ ಎಂದು ಬೇಸರ ಹೊರ ಹಾಕಿದರು.

ಅಮ್ಮ ಎಂದು ಕರೆಯಬೇಡಿ

ʻʻಸಂತು ಕೊಟ್ಟಿದ್ದು ಇಷ್ಟವಾಗಲಿಲ್ಲ. ಸೆಂಟಿಮೆಂಟ್ ಆಗಿ‌ ಇರುವುದು ಇಷ್ಟವಾಗಲಿಲ್ಲ. ಎಲ್ಲದಕ್ಕೂ ನಾವೇ ಫಸ್ಟ್ ಎಂದು ಹೋಗುತ್ತಾರೆ. ಸೆಂಟಿಮೆಂಟ್ ಅಂತ ಯಾಕೆ ಕೊಡುತ್ತಾರೆ? ನಾನು ಆ ತರ ಇಲ್ಲ. ಇವರೇ ಎಲ್ಲ ಗುಂಪುಗಳನ್ನು ಮಾಡಿಕೊಂಡು, ಮುಂದೆ ಹೋಗುತ್ತಾರೆʼʼ ಎಂದು ಭಾಗ್ಯಶ್ರೀ ಅತ್ತರು. ಅಷ್ಟೇ ಅಲ್ಲದೇ ಉಳಿದ ಸ್ಪರ್ಧಿಗಳಿಗೂ ಕೂಡ ಭಾಗ್ಯಶ್ರೀ ಮಾತನಾಡಿ ʻʻಇವರೆಲ್ಲಾ ಚೆನ್ನಾಗಿ ಆಡಿದ್ದಾರಾ? ಫಿಟ್ ಅಂಡ್ ಫೈನ್ ಆಗಿರೋರು ಗೆದ್ದಿದ್ದಾರಾ? ನನಗೆ ಆ ಕಾರಣನಾ ಕೊಡಬಾರದಿತ್ತು. ವಿನಯ್ ಎಲ್ಲಾದಕ್ಕೂ ಹೋದ್ರಲ್ವಾ? ಯಾವುದರಲ್ಲಿ ಗೆದ್ದರು? ಅವರವರೇ ಟೀಮ್ ಮಾಡಿಕೊಂಡರು. ಇಶಾನಿ ಏನು ಮಾಡ್ತಿದ್ದಾಳೆ ಹೇಳಿ. ಎಲ್ಲಾದರೂ ಕಾಣಿಸಿದ್ತಾಳಾ? ಹೇಗೆ ಕಳಪೆ ಅಂತ ಅವಳು ನನಗೆ ಹೇಳ್ತಾಳೆ?’’ ಎಂದು ಭಾಗ್ಯಶ್ರೀ ಬೇಸರ ವ್ಯಕ್ತಪಡಿಸಿದರು. ʼʻನನ್ನನ್ನು ಅಮ್ಮ ಎಂದು ಕರೆಯಬೇಡಿ. ಸೀರೆಯುಟ್ಟ ಮಾತ್ರಕ್ಕೆ ಎಲ್ಲರೂ ಡೌನ್ ಆಗ್ತಾರಾ? ನೀವೆಲ್ಲಾ ಸಮಾಜಕ್ಕೆ ತೋರಿಸೋದು ಇದನ್ನೇ ಅಲ್ವಾ?’’ ಎಂದು ಭಾಗ್ಯಶ್ರೀ ಕಣ್ಣೀರು ಹಾಕಿದರು.

Exit mobile version