Site icon Vistara News

Bigg Boss Kannada | ʼಕಳಪೆʼ ನೀಡುವಾಗ ಬೇಸರ ಹೊರಹಾಕಿದ ಅಮೂಲ್ಯ ಗೌಡ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9 (Bigg Boss Kannada) ಮುಕ್ತಾಯಗೊಳ್ಳಲು ಕೆಲವೇ ವಾರಗಳು ಇವೆ. ಪ್ರತಿ ಶುಕ್ರವಾರ ‘ಉತ್ತಮ’ ಹಾಗೂ ‘ಕಳಪೆ’ ಯಾರೆಂದು ನೋಡುಗರು ಕಾಯುತ್ತಿರುತ್ತಾರೆ. ಇದೀಗ ಅಮೂಲ್ಯ ಗೌಡ ತನಗೆ ಕಳಪೆ ಕೊಡಲು ಮನಸಾಕ್ಷಿ ಒಪ್ಪುತ್ತಿಲ್ಲ ಎಂದು ಆರ್ಯವರ್ಧನ್ ಗುರೂಜಿಗೆ ‘ಕಳಪೆ’ ಕೊಟ್ಟಿದ್ದಾರೆ.

ಈ ವಾರ ರೂಪೇಶ್‌ ಶೆಟ್ಟಿ ಉತ್ತಮ ಪ್ರದರ್ಶನಕಾರರಾಗಿ ಹೊರಹೊಮ್ಮಿದ್ದಾರೆ. ಆರ್ಯವರ್ಧನ್‌ ಗುರೂಜಿ ಬಿಗ್‌ ಬಾಸ್‌ ಮನೆಯ ಜೈಲು ಸೇರಿದ್ದಾರೆ. ರೂಪೇಶ್ ಶೆಟ್ಟಿ ಕ್ಯಾಪ್ಟನ್ ಆಗಿ ಮನೆಯನ್ನು ಉತ್ತಮವಾಗಿ ನಿಭಾಯಿಸಿದ್ದರು ಎಂಬ ಕಾರಣಕ್ಕೆ ರೂಪೇಶ್‌ಗೆ ಉತ್ತಮ ಕೊಡಲಾಗಿದೆ.

Bigg Boss Kannada

ಈ ಕಳಪೆಗೆ ಹೆಸರನ್ನ ಸೂಚಿಸಲು ಮೊದಲು ಅಮೂಲ್ಯ ಗೌಡ ಹಾಗೂ ಅರುಣ್ ಸಾಗರ್ ತಕರಾರು ಮಾಡಿದರು. ಆ ನಂತರ ಅರುಣ್ ಸಾಗರ್ ಅವರು ಗುರೂಜಿ ಹೆಸರನ್ನ ಕಳಪೆಗೆ ಸೂಚಿಸಿದರು. ಕಾರಣವನ್ನು ನೀಡಿದ ಅರುಣ್‌ ಸಾಗರ್‌ ʻಗುರೂಜಿ ಅವರು ಅಮೂಲ್ಯ ಅವರನ್ನು ತಂದೆಯ ಸ್ಥಾನದಲ್ಲಿ ನಿಂತು ಕ್ಷಮಿಸಬೇಕಿತ್ತುʼ ಎಂದು ಹೇಳಿಕೆ ನೀಡಿದರು. ಅಮೂಲ್ಯ ಅವರು ʻಕಳಪೆಗೆ ಹೆಸರು ಹೇಳಲೇಬೇಕು ಎಂದು ಎಲ್ಲರೂ ಹೇಳಿದ ಬಳಿಕ ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ. ನನಗೆ ನಾನೇ ಕಳಪೆ ಹೆಸರು ಹೇಳಲೇಬೇಕು ಎಂಬ ಕಾರಣಕ್ಕೆ ಗುರೂಜಿ ಹೆಸರು ಹೇಳುತ್ತಿದ್ದೇನೆ. ಆದರೆ, ಅವರು ನಿಜವಾಗಿಯೂ ಕಳಪೆ ಅಲ್ಲʼ ಎಂದು ಹೇಳಿದ್ದಾರೆ.

ಈ ವಾರ ‘ಬಿಗ್ ಬಾಸ್’ ಮನೆಯಿಂದ ಹೊರಗೆ ಹೋಗಲು ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ಆರ್ಯವರ್ಧನ್ ಗುರೂಜಿ, ಅನುಪಮಾ ಗೌಡ, ದೀಪಿಕಾ ದಾಸ್ ಹಾಗೂ ಅರುಣ್ ಸಾಗರ್ ನಾಮಿನೇಟ್ ಆಗಿದ್ದಾರೆ.

ಇದನ್ನೂ ಓದಿ | Bigg Boss Kannada | ಮನೆಯಲ್ಲಿ ಜೋರಾಗಿತ್ತು ಮಿಣ ಮಿಣ ಮೀನಾಕ್ಷಿ ಮದುವೆ!

Bigg Boss Kannada

ಇದನ್ನೂ ಓದಿ | Bigg Boss Kannada | ದೀಪಿಕಾರನ್ನು ಎತ್ತಿ ಕುಣಿದಾಡಿದ ಆರ್ಯವರ್ಧನ್‌: ಹಾಡಲ್ಲೇ ಹೂದೋಟವಾದ ಮನೆ ಅಂಗಳ!

Exit mobile version