Site icon Vistara News

Bigg Boss Kannada | ಜೋಕರ್‌ ವೇಷ ಧರಿಸಿ ಅರುಣ್‌ ಸಾಗರ್‌ ಜನುಮದಿನ ಆಚರಿಸಿದ ಮನೆಮಂದಿ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ (Bigg Boss Kannada) ಮನೆಯಲ್ಲಿ ಈ ವಾರ ಮಯೂರಿ ಮನೆಯಿಂದ ಹೊರ ನಡೆದದ್ದು ಒಂದು ಕಡೆ ಸ್ಪರ್ಧಿಗಳಿಗೆ ಬೇಸರ ಸಂಗತಿಯಾಗಿದೆ. ಆದರೆ, ಇನ್ನೊಂದು ಕಡೆ ಅರುಣ್‌ ಸಾಗರ್‌ ಅವರ ಜನುಮದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ. ಜೋಕರ್‌ ವೇಷ ಧರಿಸುವ ಮೂಲಕ ಅರುಣ್‌ ಸಾಗರ್‌ ಅವರಿಗೆ ಸ್ಪರ್ಧಿಗಳು ಸರ್ಪೈಸ್‌ ನೀಡಿದರು.

ಬಿಗ್‌ ಬಾಸ್‌ ಅರುಣ್‌ ಸಾಗರ್‌ ಅವರಿಗೆ ಕೇಕ್‌ ಕಳುಹಿಸಿದ್ದರು. ಅರುಣ್‌ ಸಾಗರ್‌ ಅವರದ್ದು ಮನೆಯಲ್ಲಿ ಮನೋರಂಜನೆ ನೀಡಲು ಎತ್ತಿದ ಕೈ. ಸ್ಪರ್ಧಿಗಳು ಜೋಕರ್‌ ರೀತಿ ಮೇಕಪ್‌ ಮಾಡಿಕೊಳ್ಳುವದರ ಮೂಲಕ ಅರುಣ್‌ ಸಾಗರ್‌ ಅವರ ಜನುಮದಿನ ಆಚರಿಸಿದ್ದಾರೆ. ʻʻಜೋಕರ್‌ ಆದವನು ಮಳೆ ಹನಿ ಬಿದ್ದರೂ ಆವಾಗ ಅವನು ಅಳಬೇಕಂತೆ, ಬಿಸಿಲಲ್ಲಿದ್ದಾಗ ಅವನು ನಗುತ್ತಾ ಇರಬೇಕೆಂತೆ. ಹಾಗೇ ನಮ್ಮ ಅಳು, ನೋವು ಮಳೆಯಲ್ಲಿ ತೊಯ್ದು ಹೋಗಲಿ. ನಗು ಯಾವಾಗಲೂ ಬಿಸಿಲಲ್ಲಿಯೂ ಕಾಣಿಸುತ್ತಾ ಇರಲಿ. ನಾವು ಚೆನ್ನಾಗಿರೋಣʼʼ ಎಂದು ಸಂತಸ ವ್ಯಕ್ತಪಡಿಸಿದರು ಅರುಣ್‌ ಸಾಗರ್‌.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಿಂದ ನಟಿ ಮಯೂರಿ ಔಟ್‌!

ಮೊದಲನೇ ವಾರ ಅರುಣ್‌ ಸಾಗರ್‌ ವರ್ತನೆ ಮನೆಯಲ್ಲಿ ಮಿತಿ ಮೀರಿದಂತಿದೆ ಎಂದು ಸ್ಪರ್ಧಿಗಳು ಆರೋಪಿಸಿದ್ದರು. ವಿದೂಷಕನೆಂಬ ಬ್ಯಾಂಡ್‌ ಅನ್ನು ಸಹ ಸ್ಪರ್ಧಿಗಳಿಂದ ಪಡೆದುಕೊಂಡಿದ್ದ ಅರುಣ್‌ ಸಾಗರ್‌, ಹುಚ್ಚನೆಂಬ ಬಿರುದನ್ನು ಸದಸ್ಯರು ನೀಡಿದ್ದರು. ಆದರೆ ಮೂರನೇ ವಾರ ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚನ ಚಪ್ಪಾಳೆ ಅರುಣ್‌ ಸಾಗರ್‌ ಅವರಿಗೆ ಸಿಕ್ಕಿತ್ತು.

ಗೋಲ್ಡ್‌ ಮೈನ್‌ ಕ್ಯಾಪ್ಟನ್‌ ಟಾಸ್ಕ್‌ನಲ್ಲಿ ಅರುಣ್‌ ಸಾಗರ್‌ ಜೋಕರ್‌ ಎಂಬಂತೆ ಪಾತ್ರವನ್ನು ಸೃಷ್ಟಿಸಿಕೊಂಡು ಮನೆಯಲ್ಲಿ ಆಟವನ್ನು ಚೆನ್ನಾಗಿ ನಿಭಾಯಿಸಿದ್ದರು. ಹಾಗೇ ಕಳ್ಳನಾಗಿ ಚಿನ್ನವನ್ನು ಕದ್ದು, ಮತ್ತೊಂದು ರೀತಿಯಲ್ಲಿ ಆಟ ಪ್ರದರ್ಶಿಸಿದ್ದರು. ಜೋಕರ್ ರೀತಿ ಮೇಕಪ್ ಮಾಡಿಕೊಂಡು ಆಗಾಗ ವಿಸರ್ಜಕರನ್ನು ಯಾಮಾರಿಸಿ, ತಿಜೋರಿಯಿಂದ ಚಿನ್ನವನ್ನು ಅರುಣ್ ಸಾಗರ್ ಕಳ್ಳತನ ಮಾಡುತ್ತಿದ್ದರು. ಅದೇ ಚಿನ್ನವನ್ನ ಇಟ್ಟುಕೊಂಡು ತಮ್ಮ ವಿರುದ್ಧ ಒಪ್ಪಂದ ಮಾಡಿಕೊಳ್ಳುವಂತಿಲ್ಲ ಅಂತಲೂ ವಿಭಿನ್ನವಾಗಿ ಡೀಲಿಂಗ್ ಮಾಡಿದ್ದರು. ಆದರೆ ಸ್ಪರ್ಧಿಗಳು ಈ ಆಟ ಬಿಗ್‌ ಬಾಸ್‌ ನಿಯಮದಲ್ಲೇ ಇಲ್ಲ ಎಂದು ಗರಂ ಆಗಿದ್ದರು. ಇದೇ ಕಾರಣವನ್ನು ಇಟ್ಟುಕೊಂಡು ಕಳಪೆಯನ್ನೂ ಅರುಣ್‌ ಸಾಗರ್‌ ಅವರಿಗೆ ನೀಡಿದ್ದರು. ಆದರೆ ಕೊನೆಯಲ್ಲಿ ಅರುಣ್‌ ಸಾಗರ್‌ ಕ್ರಿಯೇಟಿವ್‌ ಆಗಿ ಆಡಿದ್ದಕ್ಕೆ ಕಿಚ್ಚನ ಚಪ್ಪಾಳೆ ದೊರೆದಿತ್ತು.

ಇದನ್ನೂ ಓದಿ | Bigg Boss Kannada | ದೇವರು ನಿನ್ನನ್ನು ಮೆಚ್ಚೋದಿಲ್ಲಾ: ಸಾನ್ಯ ವಿರುದ್ಧ ಪ್ರಶಾಂತ್‌ ಸಂಬರಗಿ ಹಿಡಿ ಶಾಪ!

Exit mobile version