Site icon Vistara News

Bigg Boss Kannada | ಚಿಂತೆ ಇಲ್ಲದ ನವಾಜ್‍ಗೆ ಸಂತೆಯಲ್ಲೂ ನಿದ್ದೆ: ಅರುಣ್‌ ಸಾಗರ್‌ ಬುದ್ಧಿಮಾತು ಹೇಳಿದ್ದೇನು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಮೊದಲನೇ ದಿನವೇ ಬಿಗ್‌ ಬಾಸ್‌ ಪ್ರವೀಣರ ಮುಂದೆ ನವೀನರು ತಮ್ಮ ಪರಿಚಯವನ್ನು ಮಾಡಿಕೊಳ್ಳುವ ಟಾಸ್ಕ್‌ ಒಂದನ್ನು ನೀಡಿದ್ದರು. ಅದರಲ್ಲಿ ನವೀನರಾಗಿ ನವಾಜ್‌ ಖಡಕ್‌ ಆಗಿ ಮೊದಲ ದಿನವೇ ಮಾತನಾಡಿದ್ದರು. ಎರಡನೇ ದಿನವೂ ನಿದ್ದೆ ಮಾಡುವುದರ ಮೂಲಕ ಬಿಗ್‌ ಬಾಸ್‌ ಕಣ್ಣಿಗೆ ಗುರಿಯಾಗಿದ್ದಾರೆ.

ಲಿವಿಂಗ್‌ ಏರಿಯಾದಲ್ಲಿ ಅರುಣ್‌ ಸಾಗರ್, ಅನುಪಮಾ ಗೌಡ, ರೂಪೇಶ್‌ ಶೆಟ್ಟಿ, ನೇಹಾ ಗೌಡ ಮತ್ತು ನವಾಜ್‌ ಕುಳಿತುಕೊಂಡಿದ್ದರು. ಅರುಣ್‌ ಸಾಗರ್‌ ಲಿಪ್‌ಸ್ಟಿಕ್‌ ವಿಚಾರಕ್ಕೆ ಕಾವ್ಯಶ್ರೀ ಗೌಡ ಬಗ್ಗೆ ಕಾಮಿಡಿ ಮಾಡುತ್ತಿದ್ದರು. ಅದೇ ಸಮಯದಲ್ಲಿ ನವಾಜ್‌ ಮಲಗಿದ್ದಾನೆ. ʻಎದ್ದೇಳು ಮಂಜುನಾಥ್‌ʼ ಹಾಡಿನ ಮೂಲಕ ಬಿಗ್‌ ಬಾಸ್‌ ಎಬ್ಬಿಸಿದ್ದಾರೆ. ಹಾಗೇ ಕುಳಿತವರು ನವಾಜ್‌ಗೆ ತಮಾಷೆ ಮಾಡಿದ್ದಾರೆ. ನಂತರ ಅರುಣ್‌ ಸಾಗರ್‌ ಜತೆಗೆ ಇದ್ದಾಗ ನವಾಜ್‌ ಅರುಣ್‌ ಸಾಗರ್‌ ಮುಂದೆ ʻʻನನಗೆ ಕೆಲವು ಸ್ಪರ್ಧಿಗಳು ಇಷ್ಟವಾಗುತ್ತಿಲ್ಲ. ನಾನಿನ್ನೂ ಕೋಪವನ್ನು ತೋರಿಸಿಕೊಂಡಿಲ್ಲ. ಅಷ್ಟು ಕೋಪ ಬರುತ್ತಿದೆ, ಬರಿಸುತ್ತಿದ್ದಾರೆʼʼ ಎಂದು ಹೇಳಿದ್ದಾರೆ.

ಅದಕ್ಕೆ ಅರುಣ್‌ ಸಾಗರ್‌ ನವಾಜ್‌ಗೆ ಬುದ್ದಿ ಮಾತನ್ನು ಹೇಳಿ ʻʻಕೋಪ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಕೋಪ ಮಾಡಿಕೊಳ್ಳಬಾರದು. ಹೊರಗಡೆ ಜಗತ್ತು ಬೇರೆ ಇದೆ. ಇಲ್ಲಿಯ ಜಗತ್ತು ಬೇರೆ. ಅದನ್ನು ನಿಭಾಯಿಸುವ ಕಲೆ ಕಲಿತುಕೊಳ್ಳಬೇಕು. ಹಾಗೇ ಮುಂದೆ ಮುಂದೆ ಹೋಗುತ್ತ ಹೋದಂತೆ ಬಿಗ್‌ ಬಾಸ್‌ ಮನೆಯಲ್ಲಿ ಪಾಠ ಕಲಿಯುತ್ತೀಯಾ ʼʼಎಂದು ಬುದ್ಧಿ ಮಾತು ಹೇಳಿದ್ದಾರೆ.

ಇದನ್ನೂ ಓದಿ | Bigg Boss Kannada | ಕನ್ನಡಕ್ಕಾಗಿ ಹೋರಾಟ, ರೂಪೇಶ್‌-ಪ್ರಶಾಂತ್‌ ಕಾದಾಟ!

ಜೋಡಿಗಳ ಆಯ್ಕೆ ಸಮಯದಲ್ಲಿಯೂ ಕೂಡ ಅರುಣ್‌ ಸಾಗರ್‌ ನವಾಜ್‌ನನ್ನು ಆಯ್ಕೆ ಮಾಡಿಕೊಂಡಿದ್ದರು. ʻʻಇವನು ಚಿಕ್ಕ ಮಗು. ಅವನು ನನ್ನ ಜತೆ ಇರಿಸಿಕೊಳ್ಳಲು ಇಷ್ಟ ಪಡುತ್ತೇನೆʼʼ ಎಂದಿದ್ದರು. ನವಾಜ್‌ ವಿಚಾರದಲ್ಲಿ ನಾಮಿನೇಟ್‌ ಮಾಡುವಾಗ ಉಳಿದ ಸ್ಪರ್ಧಿಗಳು ಬಿಗ್‌ ಬಾಸ್‌ ಮುಂದೆ ಅಸಮಾಧಾನವನ್ನು ಹೊರ ಹಾಕಿದ್ದರು. ಒಟ್ಟಾರೆ ಎರಡನೇ ದಿನ ಅರುಣ್‌ ಸಾಗರ್‌ ಕಾಮಿಡಿ ಮತ್ತು ಟಾಸ್ಕ್‌ ನಡೆಯುವ ಹೊತ್ತಿಗೆ ಅವರ ಆ್ಯಕ್ಟಿವ್‌ನೆಸ್‌ ಮತ್ತು ಅವರ ಚರ್ಚೆ, ಬುದ್ಧಿಮಾತುಗಳು ಬಿಗ್‌ ಬಾಸ್‌ನಲ್ಲಿ ಹೈಲೈಟ್‌ ಆಗಿವೆ.

ಇದನ್ನೂ ಓದಿ | Bigg Boss Kannada | ಪ್ರಶಾಂತ್ ಸಂಬರಗಿ- ರೂಪೇಶ್ ರಾಜಣ್ಣ ವಾರ್‌: ಒಗ್ಗರಣೆ ಹಾಕಿದ ಅರುಣ್‌ ಸಾಗರ್‌!

Exit mobile version