Site icon Vistara News

Bigg Boss Kannada | 12ನೇ ಸ್ಪರ್ಧಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ: ಆರ್ಯವರ್ಧನ್‌ ನಂಬರ್ ಲೆಕ್ಕ ಹೇಗಿದೆ?

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌9ರಲ್ಲಿ (Bigg Boss Kannada) ಈಗಾಗಲೇ 12 ಸ್ಪರ್ಧಿಗಳು ಪ್ರವೇಶ ಪಡೆದಿದ್ದಾರೆ. ಇದೀಗ 13ನೇ ಸ್ಪರ್ಧಿಯಾಗಿ ಕನ್ನಡಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ರೂಪೇಶ್ ರಾಜಣ್ಣ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ. ಕನ್ನಡ ನಾಡು, ನುಡಿ ಪರವಾಗಿ ಸಾಕಷ್ಟು ಹೋರಾಟ ಮಾಡಿರುವ ರೂಪೇಶ್, ಸೋಷಿಯಲ್ ಮೀಡಿಯಾಗಳಲ್ಲೂ ಸಾಕಷ್ಟು ಸಕ್ರಿಯರಾದವರು. ಅಲ್ಲದೇ, ಕನ್ನಡ ನಟರಿಗೆ ತೊಂದರೆ ಆದಾಗಲೂ ಅವರ ಪರವಾಗಿ ನಿಂತು, ಹೋರಾಟ ಮಾಡಿದವರು.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ನೇಹಾ ಗೌಡ: 11ನೇ ಸ್ಪರ್ಧಿಯಾಗಿ ವಿನೋದ್ ಗೊಬ್ಬರಗಾಲ!

ಬಿಗ್‌ ಬಾಸ್‌ ಒಟಿಟಿ ಸ್ಪರ್ಧಿಗಳಾದ ರಾಕೇಶ್‌ 14ನೇ ಸ್ಪರ್ಧಿಯಾಗಿ ಪ್ರವೇಶಿಸಿದರೆ ರಾಕೇಶ್‌ ಅಡಿಗ 15ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ.

ಆರ್ಯವರ್ಧನ್‌ ಗುರೂಜಿ
ಆರ್ಯವರ್ಧನ್‌ ಗುರೂಜಿ ಅವರು ಸಂಖ್ಯಾಶಾಸ್ತ್ರ ತಜ್ಞರಾಗಿದ್ದಾರೆ. ಇವರು ಐಪಿಎಲ್‌ ಸಂದರ್ಭದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಸಂಖ್ಯಾಬಲದ ಮೂಲಕ ಯಾವ ತಂಡ ಗೆಲ್ಲುತ್ತದೆ? ಸೋಲುತ್ತದೆ ಎಂಬ ಬಗ್ಗೆ ಊಹಿಸುತ್ತಿದ್ದರು. ಆದರೆ, ಅವರ ಲೆಕ್ಕಾಚಾರ ತಪ್ಪಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದರು. ಸಾಕಷ್ಟು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸಿಕೊಂಡ ಬಂದಿದ್ದ ಆರ್ಯವರ್ಧನ್‌ ಅವರಿಗೆ ಸಾಕಷ್ಟು ಫಾಲೋವರ್ಸ್ ಕೂಡ ಇದ್ದಾರೆ. ಜನ್ಮದಿನಾಂಕ, ನಕ್ಷತ್ರದ ಮೇಲೆ ಆರ್ಯವರ್ಧನ್ ಅವರು ವ್ಯಕ್ತಿಗಳ ಭವಿಷ್ಯ ಹೇಳುತ್ತಾರೆ. ಈ ಹಿಂದಿನ ಬಿಗ್‌ ಬಾಸ್‌ ಕಾರ್ಯಕ್ರಮಗಳಲ್ಲಿ ಬ್ರಹ್ಮಾಂಡ ಗುರೂಜಿ, ಕಾಳಿ ಸ್ವಾಮಿಯಂತಹ ಗುರೂಜಿಗಳು ಬಂದಿದ್ದರು.

ರಾಕೇಶ್‌ ಅಡಿಗ
ʻಅಲೆಮಾರಿʼ, ʻಡವ್ʼ ಚಿತ್ರಗಳ ನಟ ನಟ ರಾಕೇಶ್ ಅಡಿಗ ಸಿನಿಮಾ ನಿರ್ದೇಶಕರೂ ಆಗಿದ್ದಾರೆ. ಈ ಹಿಂದೆ ಅವರ ಚೊಚ್ಚಲ ಚಿತ್ರ ನೈಟ್ ಔಟ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಮೊದಲ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಚಿತ್ರದಲ್ಲಿ ಭರತ್ ಮತ್ತು ಅಕ್ಷಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಸುದ್ದಿ ಹೆಚ್ಚಾಗುತ್ತಿರುವಂತೆಯೇ ಗಾಂಜಾ ಲೀಗಲ್ ಮಾಡಿ ಎಂದು ನಟ ರಾಕೇಶ್‌ ಒತ್ತಾಯಿಸಿರುವುದು ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು. ʻಯಾರೇ ಕೂಗಾಡಲಿʼ, ʻನಂದ ಗೋಕುಲʼ ʻಮಂದಹಾಸʼ, ʻʻಪ್ರೀತಿಯಿಂದ ʼಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಒಟಿಟಿಯಲ್ಲಿ ಮೋಡಿ ಮಾಡಿದ್ದ ಸಾನ್ಯ-ರೂಪೇಶ್‌ ಎಂಟ್ರಿ!

Exit mobile version