Site icon Vistara News

Bigg Boss Kannada | ಆರ್ಯವರ್ಧನ್‌ ಗುರೂಜಿ ಔಟ್‌: ಅಪ್ಪಾಜಿ ಬನ್ನಿ ಎಂದು ಗಳಗಳನೆ ಅತ್ತ ರೂಪೇಶ್‌ ಶೆಟ್ಟಿ

Bigg Boss Kannada

ಬೆಂಗಳೂರು: ಬಿಗ್ ಬಾಸ್ ಸೀಸನ್ ಒಂಬತ್ತರಲ್ಲಿ(Bigg Boss Kannada) ಸಂಖ್ಯಾ ಶಾಸ್ತ್ರದ ಮೂಲಕ ಫೇಮಸ್​ ಆಗಿದ್ದ ಆರ್ಯವರ್ಧನ್​ ಗುರೂಜಿ ಎಲಿಮಿನೇಟ್‌ ಆಗಿದ್ದಾರೆ. ಮಿಡ್‌ ನೈಟ್‌ ಎಲಿಮಿನೇಷನ್‌ನಲ್ಲಿ ಆರ್ಯವರ್ಧನ್‌ ಗುರೂಜಿ ಮನೆಯಿಂದ ಹೊರ ನಡೆದಿದ್ದಾರೆ. ಗುರೂಜಿ ಆಟ ಅಂತ್ಯವಾಗಿದ್ದಕ್ಕೆ ರೂಪೇಶ್ ಶೆಟ್ಟಿ ಗಳಗಳನೆ ಅತ್ತಿದ್ದಾರೆ.

ಡಿಸೆಂಬರ್​ 30 ಮತ್ತು ಡಿಸೆಂಬರ್​ 31ರಂದು ಬಿಗ್​ ಬಾಸ್​ ಕನ್ನಡ ಸೀಸನ್​ 9ರ ಫಿನಾಲೆ ನಡೆಯಲಿದೆ. ಒಟಿಟಿ ಸೀಸನ್‌ನಿಂದಲೂ ಆರ್ಯವರ್ಧನ್‌ ಗುರೂಜಿ, ಸಾನ್ಯಾ ಹಾಗೂ ರೂಪೇಶ್‌ ಶೆಟ್ಟಿ ಅವರಲ್ಲಿ ಉತ್ತಮ ಒಡನಾಟ ಇತ್ತು. ರೂಪೇಶ್‌ ಶೆಟ್ಟಿ ತಂದೆ ಸ್ಥಾನದಲ್ಲಿ ಆರ್ಯವರ್ಧನ್‌ ಗುರೂಜಿ ಅವರನ್ನು ಗೌರವಿಸುತ್ತಿದ್ದರು. ಗುರೂಜಿ ಎಲಿಮಿನೇಟ್‌ ಆದ ಕೂಡಲೇ ʻಅಪ್ಪಾಜಿ ಬನ್ನಿʼ ಎಂದು ಕಣ್ಣೀರಿಟ್ಟಿದ್ದಾರೆ ರೂಪೇಶ್‌ ಶೆಟ್ಟಿ. ಕೊನೆಯ ವಾರದಲ್ಲಿ ಆರ್ಯವರ್ಧನ್​ ಗುರೂಜಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು.

ಇದನ್ನೂ ಓದಿ | Bigg Boss Kannada | ಅರವಿಂದ್‌ ನೋಡಿ ನಾಚಿ ನೀರಾದ ದಿವ್ಯಾ ಉರುಡುಗ: ಬಿಗ್ ಬಾಸ್ ಮನೆಯಲ್ಲಿ ಡಬಲ್ ಸರ್ಪ್ರೈಸ್!

ಇದೀಗ ಐವರು ಫಿನಾಲೆ ತಲುಪಿದ್ದಾರೆ. ರೂಪೇಶ್​ ಶೆಟ್ಟಿ, ರೂಪೇಶ್​ ರಾಜಣ್ಣ, ರಾಕೇಶ್​ ಅಡಿಗ, ದಿವ್ಯಾ ಉರುಡುಗ, ದೀಪಿಕಾ ದಾಸ್​ ಅವರ ನಡುವೆ ಹಣಾಹಣಿ ಮುಂದುವರಿದಿದೆ. 

ಇದನ್ನೂ ಓದಿ | Bigg Boss Kannada | ಫಿನಾಲೆ ದಿBigg Boss Kannadaನಾಂಕ ಬದಲಾವಣೆ: ಮಿಡ್‌ ವೀಕ್‌ನಲ್ಲಿ ಎಲಿಮಿನೇಟ್‌ ಆಗೋದು ಯಾರು?

Exit mobile version