Site icon Vistara News

Bigg Boss Kannada | ಯೋಚನೆ ತಪ್ಪಾಗಿದೆ ಆರ್ಯವರ್ಧನ್: ಮ್ಯಾಚ್‌ ಫಿಕ್ಸಿಂಗ್‌ ಅರ್ಥ ಏನು? ಕಿಚ್ಚನ ಕ್ಲಾಸ್‌!

Bigg Boss Kannada

ಬೆಂಗಳೂರು: ಟಾಪ್‌ 2 ಸ್ಪರ್ಧಿಗಳು (Bigg Boss Kannada) ಯಾರು ಎಂಬ ಕಿಚ್ಚನ ಪ್ರಶ್ನೆಗೆ ವೀಕೆಂಡ್‌ ಪಂಚಾಯಿತಿಯಲ್ಲಿ ಚರ್ಚೆಗಳು ಆಗಿವೆ. ಉಳಿದ ಸ್ಪರ್ಧಿಗಳು ಸೂಕ್ತ ಕಾರಣ ನೀಡಿದರೆ, ಆರ್ಯವರ್ಧನ್‌ ಮನ ಬಂದಂತೆ ಮಾತನಾಡಿ ಕಿಚ್ಚನ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗೆಯೇ, ಬಿಗ್‌ ಬಾಸ್‌ ಮನೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ತರ ಅನುಭವ ಆಯಿತು ಎಂದು ಆರ್ಯವರ್ಧನ್‌ ಹೇಳಿದ್ದಾರೆ.

ತುಂಬಾ ಸಿಲ್ಲಿಯಾಗಿ ಮಾತಾಡುತ್ತಿದ್ದೀರಾ ಆರ್ಯವರ್ಧನ್‌
ಆರ್ಯವರ್ಧನ್‌ ಮಾತನಾಡಿ ʻʻ12 ನೇ ವಾರಕ್ಕೆ ಉತ್ತರ ಸಿಗುತ್ತದೆ. ಇದನ್ನೆಲ್ಲ ಯೋಚನೆ ಮಾಡಿ ಹೇಳಬೇಕು. ನಾನು ಸುಮ್ಮನೆ ಯಾಕೆ ಹೇಳಲಿ? ನಡೆದಿದ್ದ ವಿಚಾರ ಹೇಳಬೇಕುʼʼ ಎಂದು ಹೇಳಿದರು. ಸುದೀಪ್‌ ಮಾತನಾಡಿ ʻʻತುಂಬ ಸಿಲ್ಲಿಯಾಗಿ ಮಾತಾಡುತ್ತಿದ್ದೀರಾʼʼಎಂದರು. ಅದಕ್ಕೆ ಆರ್ಯವರ್ಧನ್‌, “ತುಂಬ ಯೋಚನೆ ಮಾಡೇ ಹೇಳುತ್ತಿದ್ದೇನೆ” ಎಂದು ಪ್ರತಿಕ್ರಿಯಿಸಿದರು. ಸುದೀಪ್‌ ಮಾತನಾಡಿ ʻʻಯೋಚನೆ ತಪ್ಪಾಗಿದೆʼʼ ಎಂಬುದಾಗಿ ಹೇಳುತ್ತಿದ್ದೇನೆ ಎಂದರು.

ಸುಮ್ಮನಿರದ ಆರ್ಯವರ್ಧನ್‌, ʻʻಈ ಟಾಸ್ಕ್‌ನಲ್ಲಿ ಇವರ ಹತ್ತಿರ ಇಷ್ಟು ಗೋಲ್ಡ್‌ ಇರುತ್ತೆ ಎಂದು ಗೊತ್ತಾದ ಮೇಲೂ ಅವರನ್ನು ಇಲ್ಲಿ ಕರೆಸುತ್ತಾರೆ ಎಂದರೆ ಮ್ಯಾಚ್‌ ಫಿಕ್ಸಿಂಗ್‌ ತರ ಇರುತ್ತದೆʼʼ ಎಂದರು. ಕಿಚ್ಚ ಸುದೀಪ್‌ ಗರಂ ಆಗಿ, “ಮತ್ತೊಮ್ಮೆ ಹೇಳಿ ಏನು” ಎಂದು ಕೇಳಿದರು. ಆರ್ಯವರ್ಧನ್‌, “ಮ್ಯಾಚ್‌ ಫಿಕ್ಸಿಂಗ್‌ ತರ ಇರುತ್ತದೆ” ಎಂದರು. ಸುದೀಪ್‌ ಕೋಪದಿಂದ ʻʻಏನು ಮಾತಾಡ್ತಾ ಇರೋದು ಎಂಬುದು ಯೋಚನೆ ಮಾಡಿ” ಎಂದು ಹೇಳಿದರು. ಮತ್ತೆ ಕಿಚ್ಚ ಏನ್ರಿ ಅದು ಮ್ಯಾಚ್‌ ಫಿಕ್ಸಿಂಗ್‌ ಎಂದು ಪ್ರಶ್ನೆ ಕೇಳಿದ್ದಾರೆ.

ಇದನ್ನೂ ಓದಿ | Bigg Boss Kannada | ಅನುಪಮಾ ಒಳಗಡೆ ಬರಲಿ ಎನ್ನುವ ಆಸೆ ಬಿಗ್‌ ಬಾಸ್‌ಗೆ ಇತ್ತು: ಆರ್ಯವರ್ಧನ್‌

ಮ್ಯಾಚ್‌ ಫಿಕ್ಸಿಂಗ್‌ ಅರ್ಥ ಏನು? ಕಿಚ್ಚನ ಕ್ಲಾಸ್‌
ನಂತರ ಅರುಣ್‌ ಸಾಗರ್‌ಗೆ ಕಿಚ್ಚ ಯಾರು ಕ್ಯಾಪ್ಟನ್‌ ಆಗಿದ್ದು ಕೇಳಿದ್ದಾರೆ. ದೀಪಿಕಾ ದಾಸ್‌ ಎಂದು ಉತ್ತರ ನೀಡಿದರು. ಯಾರಿಗೆ ಕಾಲು ನೋವು ಇದ್ದಿದ್ದುʻʻ ದೀಪಿಕಾ ದಾಸ್‌ʼʼ ಎಂದರು. ಇದೀಗ ದೀಪಿಕಾ ದಾಸ್‌ಗೆ ಫಿಸಿಕಲ್‌ ಅಲ್ಲದೇ ಇರುವ ಟಾಸ್ಕ್‌ ಕೊಟ್ಟರು ಅಂದು ಕೊಳ್ಳಬೇಕಾ? ಎಂದು ಕೇಳಿದರು. ಆರ್ಯವರ್ಧನ್‌ ʻʻಆ ತರ ಅಲ್ಲ. ಒಳಗಡೆ ಬಂದಾಗ ಹೀಗೆ ಅನ್ನಿಸಿತ್ತು. ಹೇಳಿದೆʼʼ ಎಂದರು. ಕಿಚ್ಚ ಮಾತನಾಡಿ ʻʻಹೀಗೂ ಅಂದುಕೊಳ್ಳಿ ದೀಪಿಕಾ ಅವರಿಗೆ ಫಿಸಿಕಲ್‌ ಅಲ್ಲದೇ ಇರುವ ಟಾಸ್ಕ್‌ ಕೊಟ್ಟಿದ್ದೇವೆ ಎಂದುʼʼ ಅಂದರು. ಕಿಚ್ಚ ʻʻಕ್ಯಾಪ್ಟನ್‌ಶಿಪ್‌ ಟಾಸ್ಕ್‌ ಯಾರಿಗೆ ಅನುಕೂಲ ಆಯಿತು” ಎಂದು ಕೇಳಿದರು. ಕಿಚ್ಚ ಮಾತನಾಡಿ ʻʻಯಾರು ಇರಬೇಕು ಹೋಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿ. ಮ್ಯಾಚ್‌ ಫಿಕ್ಸಿಂಗ್‌ ಮಾತನಾಡಬೇಡಿʼʼ ಎಂದರು. ಸ್ಪರ್ಧಿಗಳಿಗೆ ಕಿಚ್ಚ, ʻʻನಿಮಗೆ ಎಲ್ಲರಿಗೂ ಹೀಗೆ ಅನ್ನಿಸಿತಾ” ಎಂದು ಕೇಳಿದರು. ಸ್ಪರ್ಧಿಗಳು ನೋ ಎಂದರು. ಕಿಚ್ಚ ಮಾತನಾಡಿʻʻಯಾರಿಗಾದ್ರೂ ಇವತ್ತಿನವರೆಗೆ ಇವರನ್ನೇ ಗೆಲ್ಲಿಸಬೇಕು ಯಾರಾಗಾದ್ರೂ ಅನ್ನಿಸಿದ್ದರೆ, ಒಂದು ನೀವು ಬದಲಾಗಿ ಇಲ್ಲಾ ನಾವೇ ಬದಲಾಗುತ್ತೇವೆʼʼ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ | Bigg Boss Kannada | ಮನೆಯಿಂದ ಹೊರನಡೆದ ದರ್ಶ್‌ ಚಂದ್ರಪ್ಪ

Exit mobile version