Site icon Vistara News

Bigg Boss Kannada | ಅನುಪಮಾ ಒಳಗಡೆ ಬರಲಿ ಎನ್ನುವ ಆಸೆ ಬಿಗ್‌ ಬಾಸ್‌ಗೆ ಇತ್ತು: ಆರ್ಯವರ್ಧನ್‌

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಆರ್ಯವರ್ಧನ್‌ಗೆ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. 16 ಸ್ಪರ್ಧಿಗಳಲ್ಲಿ ಯಾರು ಟಾಪ್‌ 2 ಆಗುತ್ತಾರೆ ಎಂದು ಕೇಳಿದ್ದಾರೆ. ಮನೆಯವರೆಲ್ಲರೂ ಎರಡು ಸ್ಪರ್ಧಿಗಳಲ್ಲಿ ಹೆಚ್ಚಾಗಿ ಅರುಣ್‌ ಸಾಗರ್‌ ಹಾಗೂ ಅನುಪಮಾ ಎಂದು ಸೂಕ್ತ ಕಾರಣ ನೀಡಿದರು. ಆದರೆ ಆರ್ಯವರ್ಧನ್‌ ಕಾರಣಗಳು ಕಿಚ್ಚನಿಗೆ ಕೋಪ ತರಿಸುವಂತೆ ಮಾಡಿದೆ.

ಆರ್ಯವರ್ಧನ್‌ ಕಾರಣಗಳನ್ನು ನೀಡಿ ʻʻಅನುಪಮಾ ಬರುತ್ತಾರೆ ಅಂದ ಕೂಡಲೇ ಅನ್ನಿಸಿತ್ತು, ಅವರ ಕಡೆ ಬಾಲ್‌ ಹೋಗುತ್ತೆ ಎಂದು. ಒಳಗಡೆ ಅವರು ಬರುವಾಗಲೇ ಅಡ್ವಾನ್ಸ್‌ ಆಗಿ ನನ್ನ ತಲೆ ಓಡುತ್ತಿತ್ತು. ಏಕೆಂದರೆ ಪರಿವರ್ತನೆ ಗುಣ ಜಾಸ್ತಿ ಇದೆ. ಟಾಸ್ಕ್‌ನಲ್ಲಿ ಕೂಡ ಸಡನ್‌ ಆಗಿ ಗೋಲ್ಡ್‌ ಸಿಕ್ಕಿತು. ಬಿಗ್‌ ಬಾಸ್‌ ಒಳಗಡೆಯೇ ಕಲ್ಪನೆಯಲ್ಲಿಯೇ ನಮಗೆ ಅನುಮಾನ ಬರುವಂತಿತ್ತುʼʼ ಎಂದರು. ಸುದೀಪ್‌ ನಂತರ ಮಾತನಾಡಿ ʻʻಮೆದುಳು ಒಂದು ಕಡೆ ಇರಲಿ. ತಲೆಯನ್ನು ಗ್ರಹದ ಕಡೆ ಹಾಕಬೇಡಿ. ನಿಮ್ಮತ್ರ ಮಾತಾಡುವಾಗ ನಮಗೆ ಕನ್‌ಫ್ಯೂಷನ್‌ ಶುರುವಾಗುತ್ತೆ.ʼʼ ಎಂದರು. ನಂತರ ಆರ್ಯವರ್ಧನ್‌ ಮಾತು ಮುಂದುವರಿಸಿ ʻʻಸೋತಿರುವ ಕ್ಯಾಂಡಿಡೇಟ್‌ ಅನ್ನು ಮತ್ತೆ ಒಳಗೆ ಕಳುಹಿಸುತ್ತಾರೆ ಅಂದರೆ ಕರೆಸುತ್ತಾರೆ ಅಂದರೆ ಯಾವ ಲೆಕ್ಕ? ಎಂದು ಹೇಳಿದರು.

ಇದನ್ನೂ ಓದಿ | Bigg Boss Kannada | ಗೋಲ್ಡ್‌ ಮೈನ್‌ ಸ್ಟ್ರ್ಯಾಟಜಿ ಸರಿ ಇತ್ತಾ? ದರ್ಶ್‌ ತಪ್ಪೊಪ್ಪಿಕೊಂಡಿದ್ದು ಏಕೆ?

ಅನುಪಮಾ ಒಳಗಡೆ ಬರಲಿ ಎನ್ನುವ ಆಸೆ ಬಿಗ್‌ ಬಾಸ್‌ಗೆ ಇತ್ತು
ಕಿಚ್ಚ ಮಾತನಾಡಿ “ಆ ಟಾಸ್ಕ್‌ ಅನ್ನು ಯಾರು ಬೇಕಾದರೂ ಮಾಡಬಹುದಿತ್ತಲ್ಲ ಸರ್” ಎಂದು ಕೇಳಿದರು. ಆರ್ಯವರ್ಧನ್‌ ಮಾತನಾಡಿ ʻʻಅನುಪಮಾ ಅವರು ಬಿಗ್‌ ಬಾಸ್‌ಗೆ ಒಳಗಡೆ ಮತ್ತೆ ಬರಲಿ ಎಂಬ ಆಸೆ ಬಿಗ್‌ ಬಾಸ್‌ಗೆ ಇತ್ತು ಎನ್ನುವ ತರ ಇತ್ತುʼʼ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸುದೀಪ್‌, ʻʻಏನು ಹೇಳಲಿಕ್ಕೆ ಹೊರಟಿದ್ದೀರಾ?”ʼ ಎಂದು ಗರಂ ಆದರು. ಆರ್ಯವರ್ಧನ್‌ ಮಾತನಾಡಿ ʻʻಬಿಡಿಸಿ ಹೇಳಿದೆ ಅಷ್ಟೇʼʼ ಎಂದರು. ಮತ್ತೆ ಕಿಚ್ಚ ಮಾತು ಮುಂದುವರಿಸಿ ʻʻಇಲ್ಲಿ ಟಾಸ್ಕ್‌ ಅಂದರೆ ಟಾಸ್ಕ್‌. ಇದ್ಯಾವುದೂ ಯಾರನ್ನೂ ಪರ್ಟಿಕ್ಯೂಲರ್‌ ಆಗಿ ತಲೆಯಲ್ಲಿ ಇಟ್ಟುಕೊಂಡು ಮಾಡಿ ಇರಲ್ಲ. ಅಲ್ಲಿ ಯಾರ ಬೇಕಾದರೂ ಆಡ ಬಹುದಿತ್ತು. ರೂಪೇಶ್‌ ರಾಜಣ್ಣ ಕೂಡ ನೆಗೋಷಿಯೇಟ್‌ ಮಾಡಿದ್ದರೋ ಮಾಡಿಲ್ವೋʼʼ ಎಂದು ಕೇಳಿದರು.

ರೂಪೇಶ್‌ ರಾಜಣ್ಣ ಪ್ರತಿಕ್ರಿಯೆ ನೀಡಿ ʻʻಸೆಕೆಂಡ್‌ ಹೈಯೆಸ್ಟ್‌ ನನ್ನ ಹತ್ತಿರ ಇತ್ತು. ಆದರೆ ಯಾರೂ ನನಗೆ ಕೊಡಲು ಮುಂದೆ ಬರದೇ ಇದ್ದಾಗ, ಕಡೆಯಲ್ಲಿ ನನಗೆ ಯಾರು ಕೊಡಲು ಮುಂದಾಗಿಲ್ಲʼʼ ಎಂದರು. ಕಿಚ್ಚ ಮಾತನಾಡಿ ʻʻಈ ಸಮಯದಲ್ಲಿ ಯಾರಾದ್ರೂ ಕೊಡುತ್ತಾರಾ, ಮುಂದೆ ಬರುತ್ತಾರಾ ಎಂಬುದು ಬಿಗ್‌ ಬಾಸ್‌ ನೋಡಬೇಕಿತ್ತು ಹೊರತು ಬೇರೆ ಅಜೆಂಡಾ ಇರುವುದಿಲ್ಲ, ನೀವು ಯೋಚಿಸಿ. ನಾನು ಅಂದುಕೊಂಡಂತೆ ಆಗುತ್ತಿದೆ ಅಂದುಕೊಂಡರೆ ಅಲ್ಲಿರುವ ಸ್ಪರ್ಧಿಗಳಿಗೆ ಯೋಗ್ಯತೆನೇ ಇಲ್ಲ ಆಗೋಯ್ತು.ʼʼ ಎಂದು ಸ್ಪಷ್ಟಪಡಿಸಿದರು. ಆರ್ಯವರ್ಧನ್‌ ʻʻಅದರಿಂದ ತುಂಬಾ ಜನ ಬೇಸರಗೊಂಡರುʼʼ ಎಂದರು. ಸುದೀಪ್‌ ಮಾತನಾಡಿ ʻನೀವು ನಿಮ್ಮ ಬಗ್ಗೆ ಮಾತನಾಡಿʼʼ ಎಂದು ಹೇಳಿದರು. ʻʻನಿಮಗೆ ಯಾರು ಟಾಪ್‌ ಎಂದು ಕೇಳಿದ್ದು ಅಷ್ಟೇʼʼ ಎಂದರು ಸುದೀಪ್‌ .

ಇದನ್ನೂ ಓದಿ | Bigg Boss Kannada | ಮನೆಯಿಂದ ಹೊರನಡೆದ ದರ್ಶ್‌ ಚಂದ್ರಪ್ಪ

Exit mobile version